ಯಾವುದಾದರೂ ಕಾರಣಗಳಿಗೆ ಶರೀರದ ರಕ್ಷಕ ವ್ಯವಸ್ಥೆ ದುರ್ಬಲಗೊಂಡಾಗ ದೇಹವು ರೋಗಾಣುಗಳ ದಾಳಿಗೆ ಸುಲಭವಾಗಿ ತುತ್ತಾಗುತ್ತದೆ. ಇದರಿಂದ ಸಣ್ಣಪುಟ್ಟ ಹವಾಮಾನ ಬದಲಾವಣೆಗಳಿಗೂ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು, ಸೋಂಕುಗಳು ಆಗಾಗ ಕಾಡುತ್ತವೆ.
ಶಿಸ್ತುಬದ್ಧ ಜೀವನಶೈಲಿ ಮತ್ತು ಸಮತೋಲಿತ ಆಹಾರದ ಫಲಶ್ರುತಿಯೇ ರೋಗನಿರೋಧ ಶಕ್ತಿ.