‘ದಸರಾ ಇರುವುದರಿಂದ ದೇವಿ ದೇವಾಲಯಕ್ಕೆ ಬರುವ ಜನರ ಸಂಖ್ಯೆ ಹೆಚ್ಚು. ಆದರೆ ಜನರು ಮೈಮರೆಯುವಂತಿಲ್ಲ. ದೇವಾಲಯದಲ್ಲಿ ತೀರ್ಥ, ಪ್ರಸಾದ ತಿನ್ನುವುದರಿಂದ ಕೊರೊನಾ ಬಾರದು. ಆದರೆ ತೀರ್ಥ, ಪ್ರಸಾದ ನೀಡುವವರಿಗೆ ಸೋಂಕು ತಗುಲಿದ್ದರೆ ಎಚ್ಚರ ವಹಿಸುವುದು ಮುಖ್ಯ. ಅವರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂತಹವರು ದೇವಾಲಯಕ್ಕೆ ಬರಬಾರದು. ಅಲ್ಲದೇ ತೀರ್ಥ, ಪ್ರಸಾದ ನೀಡುವವರು ಆದಷ್ಟು ಅಂತರಕಾಯ್ದುಕೊಂಡು, ಮಾಸ್ಕ್ ಧರಿಸಿಯೇ ಪ್ರಸಾದ ನೀಡುವುದು ಒಳಿತು. ಈಗ ಕೆಲ ದೇವಸ್ಥಾನಗಳಲ್ಲಿ ಸ್ವಯಂಚಾಲಿತ ಡಿಸ್ಪೆನ್ಸರ್ ಬಂದಿದೆ. ಅದನ್ನು ಒತ್ತಿದರೆ ತೀರ್ಥ ಬರುತ್ತದೆ. ಇಂತಹಡಿಸ್ಪೆನ್ಸರ್ ಅನ್ನು ಎಲ್ಲ ದೇವಾಲಯಗಳಲ್ಲಿ ಬಳಸುವುದು ಉತ್ತಮ’ ಎಂದು ಸಲಹೆ ನೀಡುತ್ತಾರೆ ಅವರು.