<p>ನೆರೆಮನೆಯ ವೈಶಾಲಿ ಅವಸರದಲ್ಲಿ ಆಟೋ ಹತ್ತುತ್ತಿದ್ದರು. ಅವರ ಮುಖದಲ್ಲಿದ್ದ ಆತಂಕವನ್ನು ಗಮನಿಸಿದ ನಾನು ಕೇಳ್ದ್ದಿದೆ.<br /> `ಯಾಕೋ ಗಾಬರಿಯಲ್ಲಿದ್ದೀರ?~ <br /> `ಮಗನ ಶಾಲೆಯಿಂದ ಫೋನ್ ಬಂದಿತ್ತು. ಜ್ವರ ಜಾಸ್ತಿಯಾಗಿ ಸುಸ್ತಾಗಿದ್ದಾನೆ. ಬೇಗ ಬಂದು ಕರೆದುಕೊಂಡು ಹೋಗಿ ಎಂಬುದಾಗಿ ಹೇಳಿದ್ರು.. ಅಲ್ಲಿಗೆ ಹೊರಟಿದ್ದೆ..~ <br /> `ಬೆಳಿಗ್ಗೆ ಆರಾಮಾಗಿದ್ದನಲ್ಲ?..~ <br /> `ಬೆಳಿಗ್ಗೆನೇ ಸ್ವಲ್ಪ ಜ್ವರ ಇತ್ತು. ಆದರೆ ನಾನೇ, ಇವತ್ತು ಮ್ಯೋಥ್ಸ್ ರಿವಿಜನ್ ಇದೆ ಹೋಗು ಎಂದು ಕಳುಹಿಸಿದ್ದೆ~ ಎನ್ನುತ್ತಾ ಆಟೋ ಹತ್ತಿದ್ದರು. ಹೌದು, ಎಷ್ಟೋ ಬಾರಿ ಅನೇಕ ಪೋಷಕರು, ಮಕ್ಕಳಿಗೆ ಜ್ವರ, ಶೀತ, ಕೆಮ್ಮು ಮುಂತಾದ ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೂ ಶಾಲೆಗೆ ಕಳುಹಿಸಿಬಿಡುತ್ತಾರೆ.<br /> <br /> ಶಾಲೆಗೆ ಕಳುಹಿಸಲು ಕಾರಣಗಳು ಅನೇಕ...<br /> * ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಆಗುವ ಅಪಾಯದ ಬಗ್ಗೆ ಅರಿವಿಲ್ಲದಿರುವುದು.<br /> <br /> * ವಿಭಕ್ತ ಕುಟುಂಬದ ಕೆಲಸಕ್ಕೆ ಹೋಗುವ ತಾಯಂದಿರು, ಮನೆಯಲ್ಲಿಯೇ ಇದ್ದು ಮಗುವನ್ನು ನೋಡಿಕೊಳ್ಳಲಾಗದಂತಹ ಪರಿಸ್ಥಿತಿ ಇರಬಹುದು.<br /> <br /> * ಮಗು ಮನೆಯಲ್ಲಿದ್ದು ಗಲಾಟೆ ಮಾಡಬಹುದು ಅಥವಾ ಮಗುವಿನ ತಮ್ಮ , ತಂಗಿಗೆ ಕಿರುಕುಳ ಕೊಡಬಹುದೆಂಬ ವಿಚಾರವಿರಬಹುದು.<br /> <br /> * ಮಗುವು ಶಾಲೆ ತಪ್ಪಿಸಿದರೆ, ತರಗತಿಯಲ್ಲಿ ಮಾಡುವ ಪಾಠಗಳು ಮತ್ತು ಹೋಂ-ವರ್ಕ್ನಲ್ಲಿ ಹಿಂದೆ ಬೀಳಬಹುದು ಎಂಬ ಯೋಚನೆ ಇರಬಹುದು. ಆದರೆ, ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ? ಹಾಗೆ ಕಳುಹಿಸುವುದರಿಂದ ಆಗಬಹುದಾದ ಅನಾಹುತಗಳೇನು? ಎಂಬುದರ ಬಗ್ಗೆ ನಾವು ಎಂದಾದರೂ ಯೋಚಿಸ್ದ್ದಿದೇವೆಯೇ?<br /> <br /> ಮಕ್ಕಳು ಕೆಮ್ಮು, ಶೀತ ಮುಂತಾದ ಸೋಂಕಿನ ಕಾಯಿಲೆಗಳಿಂದ ಬಳಲುತ್ತಿರುವಾಗ ಶಾಲೆಗೆ ಕಳುಹಿಸುವುದನ್ನು ವೈದ್ಯರು ಹಾಗೂ ಶಾಲಾ ಶಿಕ್ಷಕರು ಕಡ್ಡಾಯವಾಗಿ ನಿಷೇಧಿಸಿದ್ದಾರೆ. ಅದು ಅನೇಕ ಅಪಾಯಗಳಿಗೆ ಹಾಗೂ ತೊಂದರೆಗಳಿಗೆ ಹಾದಿ ಮಾಡಿಕೊಡಬಹುದು.<br /> <br /> * ಮಕ್ಕಳು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ರೋಗಾಣುವು ಅಕ್ಕಪಕ್ಕದ ಸಹಪಾಠಿಗೆ ತಲುಪಿ, ಆ ಮಗುವಿಗೂ ಸೋಂಕನ್ನು ಉಂಟುಮಾಡಬಹುದು.<br /> <br /> * ಮಕ್ಕಳು ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರೆ, ಖಂಡಿತಾ ಶಾಲೆಗೆ ಕಳುಹಿಸಬೇಡಿ. ಏಕೆಂದರೆ ಅಕಸ್ಮಾತ್ ತರಗತಿಯಲ್ಲಿ, ಮಗುವು ನಿಯಂತ್ರಿಸಲಾಗದೆ ಒಳ ಉಡುಪಿನಲ್ಲಿಯೇ ಮಲವಿಸರ್ಜನೆ ಮಾಡಿಕೊಂಡರೆ, ಮಗುವಿಗೆ ಒಂದು ಬಗೆಯ ಮುಜುಗರ ಮತ್ತು ಅವಮಾನವಾದಂತಾಗಬಹುದು. ಸಹಪಾಠಿಗಳೇನಾದರೂ ಈ ಬಗ್ಗೆ ಛೇಡಿಸಿದರೆ ಮಗುವಿಗೆ ಸಹಪಾಠಿ, ಶಿಕ್ಷಕರು ಹಾಗೂ ಶಾಲೆಯ ಬಗ್ಗೆಯೇ ತಿರಸ್ಕಾರದ ಮನೋಭಾವ ಬೆಳೆಯಬಹುದು.<br /> <br /> * ದಡಾರದಿಂದ( ಚಿಕನ್ ಪಾಕ್ಸ್) ಬಳಲುವ ಮಕ್ಕಳು ಕನಿಷ್ಠ 7 ರಿಂದ 10 ದಿನಗಳ ಕಾಲ ಶಾಲೆಗೆ ಕಳುಹಿಸಲು ಅನರ್ಹರು. ಏಕೆಂದರೆ ಮೊದಲ 7 ದಿನಗಳೂ ಮಗುವಿನಲ್ಲಿರುವ ವೈರಾಣು ಇತರರಿಗೆ ಸೋಂಕನ್ನು ಹರಡಬಲ್ಲದು. ಹಾಗಾಗಿ ಜೊತೆಯಲ್ಲಿರುವ ಸಹಪಾಠಿಗಳು ತಕ್ಷಣವೇ ಸೋಂಕಿಗೆ ತುತ್ತಾಗುತ್ತಾರೆ.<br /> <br /> * ಕಣ್ಣಿನ ಸೋಂಕಿದ್ದಾಗ, ಅದು ಪೂರ್ತಿ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಕಣ್ಣಿನ ಪಿಸಿರಿನಲ್ಲಿರಬಹುದಾದ ರೋಗಾಣು ಅಕ್ಕಪಕ್ಕದ ಸಹಪಾಠಿಗಳಿಗೂ ತಕ್ಷಣವೇ ಸೋಂಕನ್ನು ಅಂಟಿಸಬಲ್ಲದು.<br /> <br /> ಇಂತಹ ಸಂದರ್ಭಗಳಲ್ಲಿ ಶಾಲೆ ಹಾಗೂ ಶಿಕ್ಷಕರ ಬಗ್ಗೆಯೂ ನಾವು ಕೊಂಚ ಯೋಚಿಸಬೇಕಾಗುತ್ತದೆ. ಶಾಲೆಗಳಲ್ಲಿ ಸಾಮಾನ್ಯವಾಗಿ, ಕೆಲವೇ ತುರ್ತು ಔಷಧಗಳು ಹಾಗೂ ಪ್ರಥಮ ಚಿಕಿತ್ಸೆಯ ಸೌಲಭ್ಯಗಳಿರುತ್ತವೆ.<br /> <br /> ಅಂತಹ ಪರಿಸ್ಥಿತಿಯಲ್ಲಿ ಅಕಸ್ಮಾತ್ ಮಕ್ಕಳಿಗೆ ಜ್ವರ ಹೆಚ್ಚಾಗಿ ಅವರ ವರ್ತನೆಯಲ್ಲೇನಾದರೂ ವ್ಯತ್ಯಾಸವಾದರೆ ಅಥವಾ ಮಕ್ಕಳು ನಿರ್ಜಲೀಕರಣಕ್ಕೊಳಗಾದರೆ ಶಿಕ್ಷಕ ವೃಂದದವರು ಬಹಳವೇ ಆತಂಕಕ್ಕೊಳಗಾಗುತ್ತಾರೆ. ಏನು ಮಾಡಬೇಕೆಂಬುದು ತಿಳಿಯದಂತಾಗಿ ಶಾಲೆಯಲ್ಲಿ ಎಲ್ಲರೂ ಗಾಬರಿಗೊಳ್ಳುತ್ತಾರೆ. <br /> <br /> ಅಲ್ಲದೆ, ಶಾಲೆಯು ಊರಹೊರವಲಯದಲ್ಲಿದ್ದರೆ, ಅಲ್ಲಿಂದ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಲು ಸಾಧ್ಯವಾಗದಿರಬಹುದು. ವೈದ್ಯೋಪಚಾರ ವಿಳಂಬವಾಗಿ, ಒಮ್ಮಮ್ಮೆ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಬಹುದು.<br /> <br /> ಹಾಗಾಗಿ, ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ, ಶಿಕ್ಷಕರು ಹಾಗೂ ಇತರ ಮಕ್ಕಳಿಗೂ ತೊಂದರೆ ಕೊಟ್ಟಂತಾಗುವುದಿಲ್ಲವೆ? ಆದ್ದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ, ಅವರನ್ನು ಮನೆಯಲ್ಲಿಯೇ ಇರಿಸಿಕೊಂಡು, ಗಮನಿಸೋಣ. <br /> <br /> ಅಗತ್ಯವಿದ್ದಲ್ಲಿ, ವೈದ್ಯರ ಬಳಿ ಕರೆದೊಯ್ದು ಸೂಕ್ತ ಚಿಕಿತ್ಸೆಯನ್ನು ಕೊಡಿಸೋಣ. ಶಾಲೆಯ ಪಾಠಗಳು ಹಾಗೂ ಹೋಂ ವರ್ಕ್ ಬಗ್ಗೆ ನಂತರ ಯೋಚಿಸೋಣ, ಏಕೆಂದರೆ ಮೊದಲು ಆರೋಗ್ಯ, ನಂತರವೇ ಉಳಿದದ್ದು. ಅಲ್ಲದೆ ಆರೋಗ್ಯವಂತ ಮಗುವೇ ಕುಟುಂಬದ ನಗು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೆರೆಮನೆಯ ವೈಶಾಲಿ ಅವಸರದಲ್ಲಿ ಆಟೋ ಹತ್ತುತ್ತಿದ್ದರು. ಅವರ ಮುಖದಲ್ಲಿದ್ದ ಆತಂಕವನ್ನು ಗಮನಿಸಿದ ನಾನು ಕೇಳ್ದ್ದಿದೆ.<br /> `ಯಾಕೋ ಗಾಬರಿಯಲ್ಲಿದ್ದೀರ?~ <br /> `ಮಗನ ಶಾಲೆಯಿಂದ ಫೋನ್ ಬಂದಿತ್ತು. ಜ್ವರ ಜಾಸ್ತಿಯಾಗಿ ಸುಸ್ತಾಗಿದ್ದಾನೆ. ಬೇಗ ಬಂದು ಕರೆದುಕೊಂಡು ಹೋಗಿ ಎಂಬುದಾಗಿ ಹೇಳಿದ್ರು.. ಅಲ್ಲಿಗೆ ಹೊರಟಿದ್ದೆ..~ <br /> `ಬೆಳಿಗ್ಗೆ ಆರಾಮಾಗಿದ್ದನಲ್ಲ?..~ <br /> `ಬೆಳಿಗ್ಗೆನೇ ಸ್ವಲ್ಪ ಜ್ವರ ಇತ್ತು. ಆದರೆ ನಾನೇ, ಇವತ್ತು ಮ್ಯೋಥ್ಸ್ ರಿವಿಜನ್ ಇದೆ ಹೋಗು ಎಂದು ಕಳುಹಿಸಿದ್ದೆ~ ಎನ್ನುತ್ತಾ ಆಟೋ ಹತ್ತಿದ್ದರು. ಹೌದು, ಎಷ್ಟೋ ಬಾರಿ ಅನೇಕ ಪೋಷಕರು, ಮಕ್ಕಳಿಗೆ ಜ್ವರ, ಶೀತ, ಕೆಮ್ಮು ಮುಂತಾದ ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೂ ಶಾಲೆಗೆ ಕಳುಹಿಸಿಬಿಡುತ್ತಾರೆ.<br /> <br /> ಶಾಲೆಗೆ ಕಳುಹಿಸಲು ಕಾರಣಗಳು ಅನೇಕ...<br /> * ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಆಗುವ ಅಪಾಯದ ಬಗ್ಗೆ ಅರಿವಿಲ್ಲದಿರುವುದು.<br /> <br /> * ವಿಭಕ್ತ ಕುಟುಂಬದ ಕೆಲಸಕ್ಕೆ ಹೋಗುವ ತಾಯಂದಿರು, ಮನೆಯಲ್ಲಿಯೇ ಇದ್ದು ಮಗುವನ್ನು ನೋಡಿಕೊಳ್ಳಲಾಗದಂತಹ ಪರಿಸ್ಥಿತಿ ಇರಬಹುದು.<br /> <br /> * ಮಗು ಮನೆಯಲ್ಲಿದ್ದು ಗಲಾಟೆ ಮಾಡಬಹುದು ಅಥವಾ ಮಗುವಿನ ತಮ್ಮ , ತಂಗಿಗೆ ಕಿರುಕುಳ ಕೊಡಬಹುದೆಂಬ ವಿಚಾರವಿರಬಹುದು.<br /> <br /> * ಮಗುವು ಶಾಲೆ ತಪ್ಪಿಸಿದರೆ, ತರಗತಿಯಲ್ಲಿ ಮಾಡುವ ಪಾಠಗಳು ಮತ್ತು ಹೋಂ-ವರ್ಕ್ನಲ್ಲಿ ಹಿಂದೆ ಬೀಳಬಹುದು ಎಂಬ ಯೋಚನೆ ಇರಬಹುದು. ಆದರೆ, ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ? ಹಾಗೆ ಕಳುಹಿಸುವುದರಿಂದ ಆಗಬಹುದಾದ ಅನಾಹುತಗಳೇನು? ಎಂಬುದರ ಬಗ್ಗೆ ನಾವು ಎಂದಾದರೂ ಯೋಚಿಸ್ದ್ದಿದೇವೆಯೇ?<br /> <br /> ಮಕ್ಕಳು ಕೆಮ್ಮು, ಶೀತ ಮುಂತಾದ ಸೋಂಕಿನ ಕಾಯಿಲೆಗಳಿಂದ ಬಳಲುತ್ತಿರುವಾಗ ಶಾಲೆಗೆ ಕಳುಹಿಸುವುದನ್ನು ವೈದ್ಯರು ಹಾಗೂ ಶಾಲಾ ಶಿಕ್ಷಕರು ಕಡ್ಡಾಯವಾಗಿ ನಿಷೇಧಿಸಿದ್ದಾರೆ. ಅದು ಅನೇಕ ಅಪಾಯಗಳಿಗೆ ಹಾಗೂ ತೊಂದರೆಗಳಿಗೆ ಹಾದಿ ಮಾಡಿಕೊಡಬಹುದು.<br /> <br /> * ಮಕ್ಕಳು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ರೋಗಾಣುವು ಅಕ್ಕಪಕ್ಕದ ಸಹಪಾಠಿಗೆ ತಲುಪಿ, ಆ ಮಗುವಿಗೂ ಸೋಂಕನ್ನು ಉಂಟುಮಾಡಬಹುದು.<br /> <br /> * ಮಕ್ಕಳು ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರೆ, ಖಂಡಿತಾ ಶಾಲೆಗೆ ಕಳುಹಿಸಬೇಡಿ. ಏಕೆಂದರೆ ಅಕಸ್ಮಾತ್ ತರಗತಿಯಲ್ಲಿ, ಮಗುವು ನಿಯಂತ್ರಿಸಲಾಗದೆ ಒಳ ಉಡುಪಿನಲ್ಲಿಯೇ ಮಲವಿಸರ್ಜನೆ ಮಾಡಿಕೊಂಡರೆ, ಮಗುವಿಗೆ ಒಂದು ಬಗೆಯ ಮುಜುಗರ ಮತ್ತು ಅವಮಾನವಾದಂತಾಗಬಹುದು. ಸಹಪಾಠಿಗಳೇನಾದರೂ ಈ ಬಗ್ಗೆ ಛೇಡಿಸಿದರೆ ಮಗುವಿಗೆ ಸಹಪಾಠಿ, ಶಿಕ್ಷಕರು ಹಾಗೂ ಶಾಲೆಯ ಬಗ್ಗೆಯೇ ತಿರಸ್ಕಾರದ ಮನೋಭಾವ ಬೆಳೆಯಬಹುದು.<br /> <br /> * ದಡಾರದಿಂದ( ಚಿಕನ್ ಪಾಕ್ಸ್) ಬಳಲುವ ಮಕ್ಕಳು ಕನಿಷ್ಠ 7 ರಿಂದ 10 ದಿನಗಳ ಕಾಲ ಶಾಲೆಗೆ ಕಳುಹಿಸಲು ಅನರ್ಹರು. ಏಕೆಂದರೆ ಮೊದಲ 7 ದಿನಗಳೂ ಮಗುವಿನಲ್ಲಿರುವ ವೈರಾಣು ಇತರರಿಗೆ ಸೋಂಕನ್ನು ಹರಡಬಲ್ಲದು. ಹಾಗಾಗಿ ಜೊತೆಯಲ್ಲಿರುವ ಸಹಪಾಠಿಗಳು ತಕ್ಷಣವೇ ಸೋಂಕಿಗೆ ತುತ್ತಾಗುತ್ತಾರೆ.<br /> <br /> * ಕಣ್ಣಿನ ಸೋಂಕಿದ್ದಾಗ, ಅದು ಪೂರ್ತಿ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಕಣ್ಣಿನ ಪಿಸಿರಿನಲ್ಲಿರಬಹುದಾದ ರೋಗಾಣು ಅಕ್ಕಪಕ್ಕದ ಸಹಪಾಠಿಗಳಿಗೂ ತಕ್ಷಣವೇ ಸೋಂಕನ್ನು ಅಂಟಿಸಬಲ್ಲದು.<br /> <br /> ಇಂತಹ ಸಂದರ್ಭಗಳಲ್ಲಿ ಶಾಲೆ ಹಾಗೂ ಶಿಕ್ಷಕರ ಬಗ್ಗೆಯೂ ನಾವು ಕೊಂಚ ಯೋಚಿಸಬೇಕಾಗುತ್ತದೆ. ಶಾಲೆಗಳಲ್ಲಿ ಸಾಮಾನ್ಯವಾಗಿ, ಕೆಲವೇ ತುರ್ತು ಔಷಧಗಳು ಹಾಗೂ ಪ್ರಥಮ ಚಿಕಿತ್ಸೆಯ ಸೌಲಭ್ಯಗಳಿರುತ್ತವೆ.<br /> <br /> ಅಂತಹ ಪರಿಸ್ಥಿತಿಯಲ್ಲಿ ಅಕಸ್ಮಾತ್ ಮಕ್ಕಳಿಗೆ ಜ್ವರ ಹೆಚ್ಚಾಗಿ ಅವರ ವರ್ತನೆಯಲ್ಲೇನಾದರೂ ವ್ಯತ್ಯಾಸವಾದರೆ ಅಥವಾ ಮಕ್ಕಳು ನಿರ್ಜಲೀಕರಣಕ್ಕೊಳಗಾದರೆ ಶಿಕ್ಷಕ ವೃಂದದವರು ಬಹಳವೇ ಆತಂಕಕ್ಕೊಳಗಾಗುತ್ತಾರೆ. ಏನು ಮಾಡಬೇಕೆಂಬುದು ತಿಳಿಯದಂತಾಗಿ ಶಾಲೆಯಲ್ಲಿ ಎಲ್ಲರೂ ಗಾಬರಿಗೊಳ್ಳುತ್ತಾರೆ. <br /> <br /> ಅಲ್ಲದೆ, ಶಾಲೆಯು ಊರಹೊರವಲಯದಲ್ಲಿದ್ದರೆ, ಅಲ್ಲಿಂದ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಲು ಸಾಧ್ಯವಾಗದಿರಬಹುದು. ವೈದ್ಯೋಪಚಾರ ವಿಳಂಬವಾಗಿ, ಒಮ್ಮಮ್ಮೆ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಬಹುದು.<br /> <br /> ಹಾಗಾಗಿ, ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ, ಶಿಕ್ಷಕರು ಹಾಗೂ ಇತರ ಮಕ್ಕಳಿಗೂ ತೊಂದರೆ ಕೊಟ್ಟಂತಾಗುವುದಿಲ್ಲವೆ? ಆದ್ದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ, ಅವರನ್ನು ಮನೆಯಲ್ಲಿಯೇ ಇರಿಸಿಕೊಂಡು, ಗಮನಿಸೋಣ. <br /> <br /> ಅಗತ್ಯವಿದ್ದಲ್ಲಿ, ವೈದ್ಯರ ಬಳಿ ಕರೆದೊಯ್ದು ಸೂಕ್ತ ಚಿಕಿತ್ಸೆಯನ್ನು ಕೊಡಿಸೋಣ. ಶಾಲೆಯ ಪಾಠಗಳು ಹಾಗೂ ಹೋಂ ವರ್ಕ್ ಬಗ್ಗೆ ನಂತರ ಯೋಚಿಸೋಣ, ಏಕೆಂದರೆ ಮೊದಲು ಆರೋಗ್ಯ, ನಂತರವೇ ಉಳಿದದ್ದು. ಅಲ್ಲದೆ ಆರೋಗ್ಯವಂತ ಮಗುವೇ ಕುಟುಂಬದ ನಗು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>