ಭಾನುವಾರ, 8 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ದೈವಬಲದಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿವೆ
Published 8 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೊಂದರೆಗಳೆಲ್ಲಾ ಉಪಶಮನಗೊಳ್ಳುತ್ತ ಹಂತ ಹಂತವಾಗಿ ಅಭಿವೃದ್ಧಿ ತೋರಿ ಬರಲಿದೆ. ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುವ ನೀವು ಸಂಬಂಧಿಕರ ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ.
ವೃಷಭ
ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂತೋಷದಿಂದ ಕೆಲಸ ಮಾಡುವ ಮತ್ತು ಹೊಸದಾದ ಜಾಗ ಪ್ರಾಪ್ತಿ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ. ಗೃಹ ತಾಪತ್ರಯಗಳಿಂದ ಮುಕ್ತರಾಗುವಿರಿ.
ಮಿಥುನ
ಬಂಧು-ಮಿತ್ರರ ಸಹಾಯ ಸಕಾಲಕ್ಕೆ ಒದಗುವುದರಿಂದ ನಿರಾಳ ಭಾವ ಮೂಡುವುದು. ನಿಮ್ಮ ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕಾದರೆ ಅವಿರತ ದುಡಿಮೆಯೊಂದೇ ಮಾರ್ಗ. ವಿದೇಶಿ ಪ್ರಯಾಣ ಸುಖಕರವಾಗಿರುವುದು.
ಕರ್ಕಾಟಕ
ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಆನಂದ ಸಿಗಬಹುದು. ತಂಗಿಗಾಗಿ ಹಣವನ್ನು ಮತ್ತು ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು.
ಸಿಂಹ
ಲೋಹ ಮಾರಾಟಗಾರರು ಹಳೆಯ ಲೋಹಗಳನ್ನು ಕೊಳ್ಳುವ ರೀತಿಯಲ್ಲಿ ಅನಿರೀಕ್ಷಿತವಾಗಿ ಲಾಭ ಪಡೆಯುವರು. ಬೇರೆಯವರನ್ನು ಮರುಳುಗೊಳಿಸುವ ಮಾತಿನ ಕೌಶಲ ನಿಮ್ಮಲ್ಲಿದೆ.
ಕನ್ಯಾ
ಮಹತ್ವದ ವಿಷಯಕ್ಕೆ ಗಂಭೀರ ಚಿಂತನೆ ಅಗತ್ಯ. ವಕೀಲರ ಸಲಹೆ, ಮಾರ್ಗದರ್ಶನ ಪಡೆದು ಮುನ್ನುಗ್ಗುವುದು ಅತ್ಯುತ್ತಮ. ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ.
ತುಲಾ
ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಸಮಯ ವಿನಿಯೋಗಿಸುವಿರಿ. ಹೊಸ ಕೆಲಸ ಕಾರ್ಯಗಳ ಬಗ್ಗೆ ಸುದೀರ್ಘವಾದ ಮಾತುಕತೆ ನಡೆಸಿ. ಸಾಲದ ಹಣ ಹಿಂತಿರುಗಿ ಬರುವುದು.
ವೃಶ್ಚಿಕ
ಋಣಬಾಧೆ, ಖರ್ಚು-ವೆಚ್ಚ, ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು.
ಧನು
ಸ್ವಯಂ ಔಷಧಿಗಳ ಅಧಿಕ ಬಳಕೆ ಅಥವಾ ಅದರ ಅಡ್ಡಪರಿಣಾಮದಿಂದ ಅನಾರೋಗ್ಯಕ್ಕೆ ಗುರಿಯಾಗಬೇಕಾಗುವುದು. ಮದುವೆಯ ವಿಚಾರದಲ್ಲಿ ಆಯ್ಕೆ ಸರಿಯಾಗಿದ್ದು ನಿರ್ಭಯವಾಗಿ ನಿರ್ಧಾರವನ್ನು ಎಲ್ಲರಲ್ಲಿ ತಿಳಿಸಿ.
ಮಕರ
ವಿವಾದ ಗೊಡವೆಗಳಿಂದ ದೂರ ಉಳಿಯುವಂಥ ನಿರ್ಧಾರ ಗೌರವವನ್ನು ಕಾಪಾಡಿಕೊಳ್ಳುವಲ್ಲಿ ಅನುಕೂಲ. ವಿಮಾ ಸಲಹೆಗಾರರು ಯಾರಿಗೂ ಬಲವಂತ ಪಡಿಸಬೇಡಿ. ನೂತನ ವಾಹನ ಖರೀದಿಯ ಯೋಗವಿದೆ.
ಕುಂಭ
ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವುದು ಸರಿಯಾದ ಮಾರ್ಗ. ನೆರೆಯವರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ. ಮಕ್ಕಳ ವರ್ತನೆ ಮನಸ್ಸಿಗೆ ಸಂತೋಷ ತಂದುಕೊಡಲಿದೆ.
ಮೀನ
ದೈವಬಲ ಒದಗುವುದರಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿವೆ. ಸಂಜೆಯ ಸಮಯದಲ್ಲಿ ಶಿರೋ ವೇದನದಿಂದ ಬಳಲುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ.
ADVERTISEMENT
ADVERTISEMENT