ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಅನಗತ್ಯದ ಅಲೆದಾಟಗಳು ತಪ್ಪಲಿದೆ
Published 22 ನವೆಂಬರ್ 2023, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳ ಅನಾರೋಗ್ಯದ ಕಾರಣ ಗಾಬರಿಯ ವಾತಾವರಣ ಸೃಷ್ಟಿಯಾಗಬಹುದು. ಕೇವಲ ಮನರಂಜನೆಗಾಗಿ ಅಧಿಕ ಮಟ್ಟದಲ್ಲಿ ಧನ ಹಾನಿ ಆಗಲಿದೆ. ತರಕಾರಿ ಬೆಳೆಗಾರರಿಗೆ ನಷ್ಟವಾಗುವ ಸಂಭವವಿದೆ.
ವೃಷಭ
ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ, ಆಹಾರದಲ್ಲಿ ವಾಯು ಪದಾರ್ಥದ ಬಳಕೆ ಕಡಿಮೆಮಾಡಿ. ಖಾದ್ಯ ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇರುವುದು. ದಿನೇ ದಿನೇ ಸಂಸಾರದಲ್ಲಿ ನೆಮ್ಮದಿ ವೃದ್ಧಿಯಾಗಲಿದೆ.
ಮಿಥುನ
ಬರವಣಿಗೆ ಕೆಲಸದವರು ಸಾಕ್ಷಿಗಳ ಅಧ್ಯಯನ ಸಮಂಜಸವಾಗಿ ಮಾಡುವುದು ಉತ್ತಮ. ಹೊಸ ಜಾಗದಲ್ಲಿ ಕೆಲಸ ನಿರ್ವಹಿಸ ಬೇಕಾಗುವುದು. ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವಿರಿ.
ಕರ್ಕಾಟಕ
ನಿಮ್ಮ ಅಭಿರುಚಿಗೆ ತಕ್ಕಂತಹ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೆಚ್ಚು ಸೂಕ್ತ. ನಿಮ್ಮ ಬಹುಮಟ್ಟಿನ ಪ್ರಯತ್ನದಿಂದ ಆರ್ಥಿಕತೆ ಯಲ್ಲಿ ಸುಧಾರಣೆಯಾಗುವುದು. ರಾಜಕೀಯ ವ್ಯಕ್ತಿಗಳ ಪರಿಚಯವಾಗಲಿದೆ.
ಸಿಂಹ
ವಕೀಲರಿಗೆ ತಯಾರಿ ಕೊರತೆಯಿಂದಾಗಿ ಸಮಸ್ಯೆ ಸೃಷ್ಟಿಸಿಕೊಂಡತಾಗಲಿದೆ. ವಸ್ತ್ರ ವಿನ್ಯಾಸದ ಕೆಲಸಗಳಿಂದ ಹೇರಳವಾಗಿ ಸಂಪಾದನೆಯಾಗುತ್ತದೆ. ಸಂಜೆಯೊಳಗೆ ಮನಸ್ಸಿಗೆ ಮುದ ನೀಡುವ ಸುದ್ದಿ ಬರಲಿದೆ
ಕನ್ಯಾ
ಉನ್ನತಾಧಿಕಾರಿಯ ದಿಢೀರ್ ವರ್ಗಾವಣೆಯಿಂದಾಗಿ ಜವಾಬ್ದಾರಿ ಹೆಚ್ಚಾಗುವುದು. ಅನಿರೀಕ್ಷಿತ ಸಂಗತಿ ಜರುಗಿ ಕೆಲಸಗಳು ಪೂರ್ಣಗೊಳ್ಳುವುದು ವಿಳಂಬವಾಗಬಹುದು. ಹೊಸ ಯೋಜನೆಗಳು ಕೈಗೂಡಲಿವೆ.
ತುಲಾ
ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ನಿಮ್ಮ ಗುಣದಿಂದಾಗಿ ಸ್ನೇಹ-ಸಂಬಂಧಗಳಲ್ಲಿ ಬಿರುಕು ಮೂಡುವ ಪ್ರಸಂಗವಿರುವುದು. ವಿಜ್ಞಾನಿಗಳಿಗೆ ನಿರೀಕ್ಷಿತ ಯಶಸ್ಸು ದೊರೆತು ಸಂತಸವಾಗುವುದು.
ವೃಶ್ಚಿಕ
ಅವಿವಾಹಿತರಿಗೆ ಕಂಕಣ ಬಲ ಒದಗಿ ಬರಲಿದೆ. ಚರ್ಮದ ವಸ್ತುಗಳ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಲಾಭವಾಗುವುದು. ಮಿತ ಆಹಾರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುವುದು.
ಧನು
ಗೋಪ್ಯತೆಯಿಂದ ಪ್ರಯತ್ನಪಟ್ಟಲ್ಲಿ ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ. ವೈದ್ಯರಿಗೆ ವೃತ್ತಿಯಲ್ಲಿ ಸವಾಲೆನಿಸುವ ವಿಷಯಗಳಲ್ಲಿ ಯಶಸ್ಸು ಸಿಗಲಿದೆ. ದೈವಾನುಗ್ರಹದಿಂದ ಕೆಲಸ ನೆರವೇರುವುದು.
ಮಕರ
ಅನಿರೀಕ್ಷಿತ ಘಟನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಅವಶ್ಯಕತೆಯಿಲ್ಲ. ಸೇವಾನಿರತ ವ್ಯಕ್ತಿಗಳಿಗೆ ಜನಪ್ರಿಯತೆ ಹೆಚ್ಚುತ್ತದೆ. ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಜ್ಞಾನಸಂಪಾದನೆಗೆ ಅಡೆತಡೆಗಳು ಉಂಟಾಗಬಹುದು.
ಕುಂಭ
ವಿಭಿನ್ನ ರೀತಿಯ ಕೆಲಸವೊಂದನ್ನು ಸ್ನೇಹಿತರೊಬ್ಬರು ನಿಮಗೊಪ್ಪಿಸ ಲಿದ್ದಾರೆ, ಒಪ್ಪಿಕೊಳ್ಳಿ ಅದು ನಿಮಗೆ ಸಾಕಷ್ಟು ಆದಾಯ ಮತ್ತು ಹೆಸರನ್ನು ತರಲಿದೆ. ಯಂತ್ರೋಪಕರಣಗಳ ಬಳಸುವಿಕೆಯ ಅರಿವಿಲ್ಲದೆ ಬಳಸಬೇಡಿ.
ಮೀನ
ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ನೀವಂದುಕೊಂಡ ಹಾಗೆಯೇ ಕೆಲಸಗಳು ನಡೆಯಲಿವೆ. ಸಾಲ ಮರುಪಾವತಿಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಅನಗತ್ಯದ ಅಲೆದಾಟಗಳು ತಪ್ಪಲಿದೆ.