ದಿನ ಭವಿಷ್ಯ | ಬುಧವಾರ, 27 ಆಗಸ್ಟ್ 2025: ಅನಾಯಾಸದ ಗಳಿಕೆಯಿಂದ ಸಂತೋಷ...
Published 26 ಆಗಸ್ಟ್ 2025, 23:23 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸಗಳ ಬಗ್ಗೆ ಪುನರಾವಲೋಕನ ಮಾಡಿ, ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳ ಆಪಾದನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವಿರಿ. ರಫ್ತು ವ್ಯವಹಾರ ಲಾಭ ನೀಡುವುದು.
26 ಆಗಸ್ಟ್ 2025, 23:23 IST
ವೃಷಭ
ಆಗಾಗ ಮನಸ್ಸಿನಲ್ಲಿ ಕಾಡುವ ಭಯಕ್ಕೆ ಹೆದರುವ ಅವಶ್ಯಕತೆ ಇಲ್ಲ. ಕಷ್ಟಗಳು ಏನೇ ಬಂದರೂ ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯ ತಂದುಕೊಳ್ಳಿ. ಅನಾಯಾಸದ ಗಳಿಕೆಯಿಂದ ಸಂತೋಷ ಉಂಟಾಗುವುದು.
26 ಆಗಸ್ಟ್ 2025, 23:23 IST
ಮಿಥುನ
ಇತರರ ವೈಯಕ್ತಿಕ ವಿಚಾರದಲ್ಲಿ ಅನವಶ್ಯಕವಾಗಿ ಸಲಹೆಯನ್ನು ಕೊಡದಿರಿ. ದುರಾಸೆಯಿಂದಾಗಿ ಅಕ್ಕಪಕ್ಕದವರಿಂದ, ಸಂಬಂಧಿಗಳಿಂದ ನಿಂದನೆಗೆ ಒಳಗಾಗುವಿರಿ.
26 ಆಗಸ್ಟ್ 2025, 23:23 IST
ಕರ್ಕಾಟಕ
ಆಲೋಚನೆಯಂತೆ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ. ಶ್ರೀಸಿದ್ಧಿವಿನಾಯಕನನ್ನು ಸ್ತುತಿಸುವುದರಿಂದ ಮಂಗಳವಾಗುವುದು. ಮಧುರ ಘಟನೆ ಸಂಭವಿಸಲಿದೆ.
26 ಆಗಸ್ಟ್ 2025, 23:23 IST
ಸಿಂಹ
ನೂತನ ವಾಹನ ಖರೀದಿಯ ಯೋಜನೆಗೆ ತಂದೆಯಿಂದ ಒಪ್ಪಿಗೆ ಮತ್ತು ಸಹಾಯ ಸಿಗಲಿದೆ. ಉನ್ನತ ಶಿಕ್ಷಣ ಪಡೆಯುವ ಗುರಿಗೆ ಇನ್ನೂ ಹೆಚ್ಚಿನ ಪರಿಶ್ರಮ ಅಗತ್ಯ. ಮಕ್ಕಳೊಡನೆ ಸಂತಸದಲ್ಲಿ ಪಾಲ್ಗೊಳ್ಳುವಿರಿ.
26 ಆಗಸ್ಟ್ 2025, 23:23 IST
ಕನ್ಯಾ
ವಿಮರ್ಶಾತ್ಮಕ ಆಲೋಚನೆಗೆ ಹಾಗೂ ಸಂದರ್ಭೋಚಿತ ಮಾತುಗಳಿಗೆ ಎಲ್ಲರೂ ಪ್ರಶಂಸಿಸುವರು. ನಿರಂತರ ಪ್ರಯತ್ನದಿಂದ ಕಾರ್ಯಸಿದ್ಧಿ . ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ.
26 ಆಗಸ್ಟ್ 2025, 23:23 IST
ತುಲಾ
ವಯಸ್ಸು ಹಾಗೂ ಉತ್ಸಾಹ ಇರುವಾಗ ಮಾತ್ರ ಸಮಾಜ ಸೇವೆ ಮಾಡಬಹುದೆನ್ನುವುದನ್ನು ಗಮನದಲ್ಲಿಟ್ಟು ಸೇವೆ ಸಲ್ಲಿಸಿ. ತಂದೆ ತಾಯಿಯರ ಸಂತೋಷವು ಸಂತಸಕ್ಕೆ ಕಾರಣವಾಗಲಿದೆ.
26 ಆಗಸ್ಟ್ 2025, 23:23 IST
ವೃಶ್ಚಿಕ
ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಪ್ರಯತ್ನದ ಅವಶ್ಯಕತೆಯ ಮನವರಿಕೆ ಆಗುತ್ತದೆ. ಸಿದ್ಧಿಸಿದ ಕಲೆಯನ್ನು ಹಣದ ಮುಖ ನೋಡಿ ಅನರ್ಥಕಾರಿಯನ್ನಾಗಿ ಮಾಡಿಕೊಳ್ಳಬೇಡಿ.
26 ಆಗಸ್ಟ್ 2025, 23:23 IST
ಧನು
ವರಾನ್ವೇಷಣೆಯ ಹಂತದಲ್ಲಿರುವ ಕನ್ಯೆಗೆ ಬಂದ ಸಂಬಂಧದ ಬಗ್ಗೆ ಕೂಲಂಕಷವಾಗಿ ಯೋಚಿಸದೆಯೆ ಮದುವೆಯ ಮಾತುಕತೆ ಮಾಡದಿರಿ. ದುರ್ಲಭವಾದಂಥ ವಸ್ತುಗಳ ಸಂಪಾದನೆಯಲ್ಲಿ ಸಮಯ ಸವೆಸದಿರಿ.
26 ಆಗಸ್ಟ್ 2025, 23:23 IST
ಮಕರ
ದೂರದ ಪ್ರಯಾಣದ ಆಯಾಸವನ್ನು ಆರಾಮವಾಗಿ ಇರುವುದರಿಂದ ನೀಗಿಸಿಕೊಳ್ಳುವಿರಿ. ವಿಚಾರಗಳು ನೀವೆಷ್ಟೇ ತಲೆಕೆಡಿಸಿಕೊಂಡು ಮಾಡಿದರೂ ಅದು ಸರಿಯಾಗಿ ಆಗುವುದಿಲ್ಲ.
26 ಆಗಸ್ಟ್ 2025, 23:23 IST
ಕುಂಭ
ಸಜ್ಜನರ ಹಾಗೂ ದುರ್ಜನರ ಸಹವಾಸಗಳು ಅವವೇ ಫಲಗಳನ್ನು ಕೊಡುವುದು ಅನುಭವಕ್ಕೆ ಸರಿಯಾಗಿ ಬರುತ್ತವೆ. ಹೂವು ಹಣ್ಣುಗಳ ಬೆಳೆಗಾರರಿಗೆ ಲಾಭ ನಷ್ಟಗಳೆರೆಡರ ಅನುಭವವೂ ಆಗಬಹುದು.
26 ಆಗಸ್ಟ್ 2025, 23:23 IST
ಮೀನ
ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕಾಗಿ ಹರಸಾಹಸ ಪಡಬೇಕಾಗುವುದು. ದುಃಖಕರ ವಿಚಾರವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗಲಿದೆ.
26 ಆಗಸ್ಟ್ 2025, 23:23 IST