ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರಲಿದೆ
Published 2 ಜೂನ್ 2024, 0:15 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಸಾಮಾಜಿಕ ಕಾರ್ಯ ಎಂಬ ನೆಪ ಮಾಡಿಕೊಂಡು ಪಾಠ ಪ್ರವಚನಗಳ ಮೇಲೆ ನಿಮ್ಮ ಗಮನ ಕಡಿಮೆ ಆದಲ್ಲಿ ಹೆಚ್ಚಿನ ಕಷ್ಟ ಅನುಭವಿಸಬೇಕಾಗುತ್ತದೆ. ಗುರುವಿನ ಆಶೀರ್ವಾದವನ್ನು ಬೇಡಿ ನಿಮ್ಮ ಕೆಲಸವನ್ನು ಶುರು ಮಾಡುವುದು ಸೂಕ್ತಕರ.
ವೃಷಭ
ವೃಷಭ: ಕೋರ್ಟು ಕಛೇರಿ ವಿವಾದಗಳಲ್ಲಿ ರಾಜಿ ಮಾಡಿಕೊಳ್ಳುವ ಮನೋಭಾವದಿಂದ ಮುಂದುವರಿದಲ್ಲಿ, ಶುಭ ಅಂತ್ಯವನ್ನು ತಲುಪಲಿದೆ. ವಸ್ತ್ರವಿನ್ಯಾಸಕರ ಹೊಸ ವಿನ್ಯಾಸಕ್ಕೆ ಬೇಡಿಕೆ ಬರುವುದು. ಅಲರ್ಜಿಯಾಗುವ ಸಾಧ್ಯತೆಗಳಿದೆ.
ಮಿಥುನ
ಮಿಥುನ: ಹಿರಿಯ ನಾಗರಿಕರನ್ನು ಮನೆಯಲ್ಲಿಯೇ ಶುಶ್ರೂಷೆ ಮಾಡುವ ಆಯಾಗಳಿಗೆ ನಿಮ್ಮ ನಿರೀಕ್ಷೆಯ ಹಣ ಸಿಗಲಾಗದು. ಅಭೀಷ್ಟಗಳನ್ನು ನೆರವೇರಿಸಿಕೊಳ್ಳಲು ದೇವರ ಪ್ರಾರ್ಥನೆಯ ಜೊತೆಗೆ ನಿಮ್ಮ ಪ್ರಯತ್ನವಿರಲಿ.
ಕರ್ಕಾಟಕ
ಕರ್ಕಾಟಕ: ಮನೆಗೆ ಹೊಂದಿಕೊಂಡೆ ಇರುವಂತಹ ದೇವಾಲಯದ ಜೀರ್ಣೊದ್ಧಾರವನ್ನು ಮಾಡುವ ಮಾತುಕತೆ ಆಗಬಹುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಧನಲಾಭವಾಗುವುದು. ಆದಾಯದಷ್ಟೇ ಖರ್ಚು ಸಹ ಇರಲಿದೆ.
ಸಿಂಹ
ಸಿಂಹ: ಸದ್ಯಕ್ಕೆ ನಿಮಗೆ ಸಿಕ್ಕಿರುವ ಯಶಸ್ಸು ಅತ್ಯುನ್ನತ ಮಟ್ಟದ್ದಲ್ಲವಾದ್ದರಿಂದ ಅದನ್ನೆ ಹೆಚ್ಚು ಸಂಭ್ರಮಿಸುವ ಬದಲು ದೊಡ್ಡದ್ದಕ್ಕೆ ಪ್ರಯತ್ನ ಪಡಿ. ಈ ದಿನ ವಿವಿಧ ರೀತಿಯಲ್ಲಿ ಆಗುವ ಧನಾಗಮನ ಉತ್ತಮವಾಗಿರಲಿದೆ.
ಕನ್ಯಾ
ಕನ್ಯಾ: ಸಾಮಾಜಿಕ ಜಾಲತಾಣಗಲ್ಲಿ ನಿಮ್ಮನ್ನು ವೀಕ್ಷಿಸಿದ ವ್ಯಕ್ತಿಯಿಂದಾಗಿ ಅನುಕೂಲಗಳಾಗುವ ಸಾಧ್ಯತೆ ಇದೆ. ಹಳೆಯ ಮಿತ್ರರ ಕೆಲವು ಮಾತುಗಳು ಸಂದರ್ಭಕ್ಕನುಸಾರವಾಗಿ ನೆನಪಾಗುತ್ತದೆ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವಿರಿ.
ತುಲಾ
ತುಲಾ: ಮನಸ್ಸನ್ನು ಮತ್ತೆ ನಿಮ್ಮ ಹಾದಿಗೆ ತಂದುಕೊಳ್ಳಲು ಕ್ರೀಡೆಯನ್ನು ಆಡುವುದು ಅಥವ ವೀಕ್ಷಿಸುವುದನ್ನು ಮಾಡಬಹುದು. ಮಕ್ಕಳ ವಿದ್ಯಾಭ್ಯಾಸವು ಅಭಿವೃದ್ಧಿದಾಯಕವಾಗಿ ಮುಂದುವರೆಯಲಿದೆ. ನಿಮಗೆ ಬರಬೇಕಾದ ಹಣವು ಪೂರ್ಣವಾಗಿ ಬರಲಿದೆ.
ವೃಶ್ಚಿಕ
ವೃಶ್ಚಿಕ: ನಿಮ್ಮ ಬಳಿ ಕೆಲಸವನ್ನು ಕಲಿತು ನಿಮಗಿಂತ ಹೆಚ್ಚು ದುಡಿಮೆ ಮಾಡುತ್ತಿರುವವರನ್ನು ಕಂಡು ಅಸೂಯೆ ಪಡುವಿರಿ. ಮಕ್ಕಳನ್ನು ಅವರ ಸಂಗಡಿಗರು ವಂಚನೆಯ ಕಡೆಗೆ ಕರೆದೊಯ್ಯದಂತೆ ಮೇಲ್ವಿಚಾರಣೆ ನಡೆಸುವುದು ಉತ್ತಮ.
ಧನು
ಧನು: ಹಲವು ದೇಹ ಬಾಧೆಗಳಿಂದ ಬಳಲುತ್ತಿರುವವರಿಗೆ ನಿಮ್ಮ ಅನಾರೋಗ್ಯದ ಮೇಲೆ ಬೇಸರ ಹುಟ್ಟಬಹುದು. ಈ ದಿನ ವ್ಯಕ್ತಿತ್ವದಲ್ಲಿ ಹಾಗೂ ಧನಲಾಭದಲ್ಲಿ ಒಂದು ರೀತಿಯ ಹೊಸ ಅನುಭವ ಹಾಗೂ ಅದೃಷ್ಟವನ್ನು ಕಾಣುವಿರಿ.
ಮಕರ
ಮಕರ: ಜನರ ನಿಂದನೆಗಳು ನಿಮ್ಮ ಕಿವಿಗೆ ಬಿದ್ದು ವಾಸ್ತವತೆಯ ಬಗ್ಗೆ ಅವರಿಗೆ ಪರಿಚಯಿಸುವ ಹಠ ನಿಮ್ಮಲ್ಲಿ ಮೂಡುತ್ತದೆ. ಯಂತ್ರೋಪಕರಣಗಳ ಸರಿಪಡಿಸುವಿಕೆ ಅಥವಾ ಬಿಡಿ ಭಾಗಗಳ ಮಾರಾಟದಿಂದ ಲಾಭವನ್ನು ಹೊಂದುವಿರಿ.
ಕುಂಭ
ಕುಂಭ: ಸ್ವಯಂ ಪ್ರೇರಿತರಾಗಿ ಸಣ್ಣ-ಪುಟ್ಟ ಅನಾರೋಗ್ಯಗಳಿಗೆ ಔಷಧಿಯನ್ನು ಸ್ವೀಕರಿಸಿ ಹೆಚ್ಚಿನ ಅನಾರೋಗ್ಯಕ್ಕೆ ಎಡೆಮಾಡಿ ಕೊಡದಿರಿ. ಮೊಬೈಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ನಿಮ್ಮ ಸ್ಥಾನದಲ್ಲಿ ಅಭದ್ರತೆ ಕಾಡಬಹುದು.
ಮೀನ
ಮೀನ: ಮನೆಯ ಜನರ ಜಗಳದಲ್ಲಿ ನಿಮ್ಮ ಮಾತಿನ ಅವಶ್ಯಕತೆ ಬಂದಾಗಲು ಸಹ ನಿಮ್ಮ ಮನಸ್ಸಿನಲ್ಲಿರುವ ಮಾತುಗಳನ್ನೆ ಹೇಳಲು ಸಾಧ್ಯವಾಗುವುದಿಲ್ಲ. ನಿರುದ್ಯೋಗಿಗಳಿಗೆ ಕೆಲವು ಸಂಘ ಸಂಸ್ಥೆಗಳ ಸಹಾಯದಿಂದ ಉದ್ಯೋಗ ಫಲವಿದೆ.