ದಿನ ಭವಿಷ್ಯ: ಈ ರಾಶಿಯವರು ಮಡದಿಯಲ್ಲಿ ಅನಗತ್ಯ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ
Published 15 ಮಾರ್ಚ್ 2024, 23:53 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತರಬೇತಿ ಕಲಿಕೆಯಿಂದ ಆಫೀಸಿನ ಕೆಲಸಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಉಪನ್ಯಾಸ ಕೈಗೊಳ್ಳುವ ಅವಕಾಶ ಇದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ನಿವಾರಣೆಯಾಗಲಿವೆ .
15 ಮಾರ್ಚ್ 2024, 23:53 IST
ವೃಷಭ
ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಸಂಪಾದನೆ ಮಾಡುವ ಅಪೇಕ್ಷಿಗಳಿಗೆ ಹಲವು ಉತ್ತಮ ಅವಕಾಶಗಳು ಎದುರಾಗುವುದು. ರಿಯಲ್ ಎಸ್ಟೇಟ್ದಾರರಿಗೆ ಧನಲಾಭದಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ.
15 ಮಾರ್ಚ್ 2024, 23:53 IST
ಮಿಥುನ
ಗುರಿಯನ್ನು ತಲುಪುವಲ್ಲಿ ನಿಮ್ಮ ಪರಿಶ್ರಮದ ಕೊರತೆ ಮತ್ತು ಅದೃಷ್ಟಹೀನತೆ ಸಮಬಲ ಸಾಧಿಸುವುದು. ನೀವು ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳು ಸಂತಸ ಹೊಂದುವರು.
15 ಮಾರ್ಚ್ 2024, 23:53 IST
ಕರ್ಕಾಟಕ
ಶತ್ರುಗಳೊಂದಿಗೆ ಇರುವ ಕಲಹ ಅಥವಾ ವಿವಾದದಿಂದ ಬಿಡುಗಡೆಯಾಗುವ ಮಾರ್ಗವನ್ನು ಹುಡುಕಿಕೊಳ್ಳಿರಿ. ಆರ್ಥಿಕ ವಿಚಾರದಲ್ಲಿ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಹೆಚ್ಚಿನ ಬಲ ಸಿಗುವುದು.
15 ಮಾರ್ಚ್ 2024, 23:53 IST
ಸಿಂಹ
ಯಾವುದೇ ಅಡಚಣೆಗಳು ಇಲ್ಲದೆ, ಅಪಾರವಾದ ಜನಬಲ ದೊರೆತು ದೊಡ್ಡ ಕಾರ್ಯಗಳನ್ನು ಸಾಧಿಸುವಿರಿ. ಹೊಸ ವ್ಯವಹಾರದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ. ರಾಜಕೀಯ ವ್ಯಕ್ತಿಗಳಿಗೆ ಬಿಡುವಿಲ್ಲದ ಓಡಾಟ.
15 ಮಾರ್ಚ್ 2024, 23:53 IST
ಕನ್ಯಾ
ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿ ಹಾಕದೆ ಅವರಿಂದ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳುವ ಪ್ರಯತ್ನಮಾಡಿ. ಧಾರ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವಿರಿ, ಸಂತಸ ಉಂಟಾಗಲಿದೆ.
15 ಮಾರ್ಚ್ 2024, 23:53 IST
ತುಲಾ
ರಬ್ಬರ್, ಪ್ಲಾಸ್ಟಿಕ್ ಸಂಬಂಧಿತ ವ್ಯಾಪಾರದಲ್ಲಿರುವವರು ವೃತ್ತಿಯಲ್ಲಿ ಹೆಚ್ಚಿನ ಏರಿಳಿತಗಳೆರಡೂ ಕಂಡುಬಂದರೂ ನೆಮ್ಮದಿಗೆ ಕೊರತೆ ಇರುವುದಿಲ್ಲ. ಉದಯೋನ್ಮುಖ ತಾರೆಯರಿಗೆ ಹೆಚ್ಚಿನ ಅವಕಾಶಗಳಿಂದ ಲಾಭವಿದೆ.
15 ಮಾರ್ಚ್ 2024, 23:53 IST
ವೃಶ್ಚಿಕ
ಯೋಚಿಸುವ ಪ್ರತಿಯೊಂದು ಕೆಲಸ-ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆಯುವುದು ನಿಮ್ಮ ಉತ್ಸಾಹಕ್ಕೆ ಅಡ್ಡಿಯನ್ನು ಉಂಟುಮಾಡುತ್ತದೆ. ಕಾನೂನಿಗೆ ವಿರುದ್ಧವಾದ ಕೆಲಸ ಸಂಭವಿಸಬಹುದು.
15 ಮಾರ್ಚ್ 2024, 23:53 IST
ಧನು
ಗುತ್ತಿಗೆ ವ್ಯವಹಾರಗಳನ್ನು ಒಪ್ಪಿಕೊಳ್ಳುವ ಮೊದಲು ನಿಮ್ಮಲ್ಲಿರುವ ಜನಸಂಪತ್ತಿನ ಬಗ್ಗೆ ಯೋಚಿಸುವುದು ಅಗತ್ಯವೆನಿಸಲಿದೆ. ತತ್ವಜ್ಞಾನಿಗಳೊಡನೆ ಸುದೀರ್ಘ ಚರ್ಚೆ ನಡೆದು ಬುದ್ಧಿಮಟ್ಟ ಹೆಚ್ಚಲಿದೆ.
15 ಮಾರ್ಚ್ 2024, 23:53 IST
ಮಕರ
ಬದಲಾದ ಸನ್ನಿವೇಶಕ್ಕೆ ಒಗ್ಗಿಕೊಳ್ಳ ಬೇಕಾದ ಅನಿವಾರ್ಯ ಸ್ಥಿತಿಯು ಎದುರಾಗುತ್ತದೆ. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ನಿಮ್ಮ ಕೈಸೇರಲಿದೆ. ಆದಾಯ ವೆಚ್ಚಗಳು ಎರಡೂ ಸರಿ ಸಮವಾಗಿರುವುದು.
15 ಮಾರ್ಚ್ 2024, 23:53 IST
ಕುಂಭ
ಮಡದಿಯಲ್ಲಿ ಅನಗತ್ಯ ವಿಷಯ ಪ್ರಸ್ತಾಪಿಸಿ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ. ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಸಲ್ಲದು. ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣ ಸಿಗಲಿವೆ
15 ಮಾರ್ಚ್ 2024, 23:53 IST
ಮೀನ
ಇಂದು ದೂರದ ಊರಿನಲ್ಲಿರುವ ಆಪ್ತರನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಉದರವ್ಯಾಧಿ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸದಂತೆ ಅನಾರೋಗ್ಯ ಎದುರಾಗಬಹುದು.
15 ಮಾರ್ಚ್ 2024, 23:53 IST