ದಿನ ಭವಿಷ್ಯ: ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದೆ, ಮದುವೆ ಮಾತುಕತೆಗಳು ನಡೆಯಲಿವೆ.
Published 13 ಏಪ್ರಿಲ್ 2025, 23:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಡದಿಯಲ್ಲಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ. ಉಳಿತಾಯದ ಹಣವನ್ನು ಮನೆಯ ನಿರ್ಮಾಣ ಕಾರ್ಯಗಳಿಗೆ ಬಳಸುವಿರಿ. ಆಲಂಕಾರಿಕ ವಸ್ತುಗಳ ಮಾರಾಟದಿಂದ ಆದಾಯ.
13 ಏಪ್ರಿಲ್ 2025, 23:57 IST
ವೃಷಭ
ಕೇಟರಿಂಗ್ ಸೇವೆಯನ್ನು ಮಾಡುವವರಿಗೆ ಅಧಿಕ ಲಾಭ ಇರಲಿದೆ. ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕ್ಷೇತ್ರಗಳಲ್ಲಿಯೂ ಹೂಡಿಕೆ ಸಲ್ಲದು. ಶ್ರೀರಾಮನಾಮದ ಜಪವನ್ನು ಮಾಡಿ.
13 ಏಪ್ರಿಲ್ 2025, 23:57 IST
ಮಿಥುನ
ಸಹೋದರಿಯರ ಆಗಮನ ಅಥವಾ ಭೇಟಿಯು ಸಂತಸ ತರುತ್ತದೆ. ಆಗು ಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅನಿರೀಕ್ಷಿತ ಧನಾಗಮನದಿಂದ ಸಂತಸ ಮೂಡಲಿದೆ.
13 ಏಪ್ರಿಲ್ 2025, 23:57 IST
ಕರ್ಕಾಟಕ
ಬೇಕಾದ ರೀತಿಯಲ್ಲಿ ವ್ಯಕ್ತಿಯ ಮನಃ ಪರಿವರ್ತನೆ ಮಾಡುವ ವಿಚಾರದಲ್ಲಿ ಸಫಲರಾಗುತ್ತೀರಿ. ಉದರವ್ಯಾಧಿ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸದಂತೆ ಅನಾರೋಗ್ಯ ಎದುರಾಗಬಹುದು.
13 ಏಪ್ರಿಲ್ 2025, 23:57 IST
ಸಿಂಹ
ಕಲಿಕೆಯಿಂದ ಆಫೀಸಿನ ಕೆಲಸಗಳನ್ನು ಇನ್ನಷ್ಟು ತಿಳಿದು ಕೊಳ್ಳುವ ಅವಕಾಶ ಸಿಗುತ್ತದೆ. ಕ್ರೀಡಾಪಟುಗಳಿಗೆ ಪುರಸ್ಕಾರ, ಅಭಿನಂದನೆಗಳು ಪ್ರಾಪ್ತಿ. ಮಗನಿಂದ ಮನಸ್ಸಿಗೆ ನೋವಾಗುವಂತಹ ಘಟನೆ ನಡೆಯಬಹುದು.
13 ಏಪ್ರಿಲ್ 2025, 23:57 IST
ಕನ್ಯಾ
ದೂರದ ಊರಿನಲ್ಲಿರುವ ಆಪ್ತರನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದ್ದು , ಮದುವೆಯ ಮಾತುಕತೆಗಳನ್ನು ನಡೆಸಲಿದ್ದಾರೆ.
13 ಏಪ್ರಿಲ್ 2025, 23:57 IST
ತುಲಾ
ವ್ಯಾಪಾರಸ್ಥರು ಹೊಸ ತರದ ಯೋಜನೆಗಳನ್ನು ರೂಪಿಸಿಕೊಳ್ಳುವುದರಿಂದ ಗ್ರಾಹಕರ ಪರಿಚಯ ಆಗಬಹುದು. ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣ ಸಿಗಲಿದೆ. ಸಂಗೀತಕ್ಕೆ ಪ್ರೋತ್ಸಾಹ ಸಿಗಲಿದೆ.
13 ಏಪ್ರಿಲ್ 2025, 23:57 IST
ವೃಶ್ಚಿಕ
ಯಾರ ನೆರವೂ ಇಲ್ಲದೆ ಕಾರ್ಯಗಳನ್ನು ಸ್ವಯಂ ನಿರ್ವಹಿಸುವಂತಾಗಲಿದೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ರಕ್ಷಣಾ ದೇವತೆಯನ್ನು ಆರಾಧಿಸಿ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳು ನಿವಾರಣೆಯಾಗಲಿವೆ.
13 ಏಪ್ರಿಲ್ 2025, 23:57 IST
ಧನು
ವಿವಿಧ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಿರಿ.
13 ಏಪ್ರಿಲ್ 2025, 23:57 IST
ಮಕರ
ನೂತನ ಕೆಲಸಗಳ ಆರಂಭಕ್ಕೆ ಮತ್ತು ಒಡಂಬಡಿಕೆಗೆ ಸೂಕ್ತ
ಕಾಲವಾಗಿರುತ್ತದೆ. ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳು ಸಂತಸ ಹೊಂದುವರು.
13 ಏಪ್ರಿಲ್ 2025, 23:57 IST
ಕುಂಭ
ವಾಕ್ಚಾತುರ್ಯದಿಂದ ಕಾರ್ಯಗಳನ್ನು ನೆರವೇರಿಸಿಕೊಳ್ಳುವಿರಿ. ಉದಯೋನ್ಮುಖ ತಾರೆಯರಿಗೆ ಅವಕಾಶಗಳಿಂದ ಲಾಭವಿದೆ. ತತ್ವಜ್ಞಾನಿಗಳೊಡನೆ ಸುದೀರ್ಘ ಚರ್ಚೆ ನಡೆದು ಬುದ್ಧಿಮಟ್ಟ ಹೆಚ್ಚಲಿದೆ.
13 ಏಪ್ರಿಲ್ 2025, 23:57 IST
ಮೀನ
ಪಾಲುದಾರಿಕೆಯ ವ್ಯವಹಾರದ ಯೋಜನೆಯ ಬೆಳವಣಿಗೆಯಲ್ಲಿ ಸಂಬಂಧಿಸಿದವರಿಂದ ಚರ್ಚೆ ನಡೆಸದೆ ತೀರ್ಮಾನಗಳಿಗೆ ಬರುವುದು ಸರಿಯಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ ಉಪನ್ಯಾಸ ಕೈಗೊಳ್ಳುವ ಅವಕಾಶವಿದೆ.
13 ಏಪ್ರಿಲ್ 2025, 23:57 IST