ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
Published 7 ನವೆಂಬರ್ 2025, 23:24 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬ ನಿರ್ವಹಣೆಗಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾದರೂ ಆದಾಯಕ್ಕೇನೂ ಕೊರತೆ ಇರುವುದಿಲ್ಲ. ಸಂತಸದ ವಿಚಾರವನ್ನು ಸ್ವೀಕರಿಸಲು ಕಷ್ಟವಾಗುವುದು.
ವೃಷಭ
ಸ್ವಲ್ಪ ದಿನದ ಹಿಂದೆ ಪರಿಹಾರ ಕಾಣದೆ ಕಾಡುತ್ತಿದ್ದ ಒಂದು ಸಮಸ್ಯೆ ಹಿಮದಂತೆ ಕರಗಿಹೋಗುತ್ತದೆ. ಸಹಾಯಕ ವರ್ಗದವರ ಕಷ್ಟಗಳಿಗೆ ನೆರವಾಗುವ ಗುಣಗಳನ್ನು ರೂಢಿಸಿಕೊಳ್ಳಿ.
ಮಿಥುನ
ಸ್ವಂತ ಉದ್ಯೋಗ ನಡೆಸುವವರು ಒಳ್ಳೆಯ ಆಭಿವೃದ್ಧಿ ಎದುರು ನೋಡಬಹುದು. ರಾಜಕೀಯ ವಲಯದ ಕಾರ್ಯಕರ್ತರಿಗೆ ಅರಿವಿಗೆ ಬರದಂತೆ ಮುನ್ನಡೆಯುವ ಅವಕಾಶಗಳು ಕೈ ತಪ್ಪಲಿವೆ.
ಕರ್ಕಾಟಕ
ಮಕ್ಕಳ ವಿಚಾರದಲ್ಲಿ ಭವಿಷ್ಯದ ದೃಷ್ಟಿಯಿಂದ ದೊಡ್ಡದು ಸಣ್ಣದು ಎಂಬ ಬೇಧ ಮಾಡದೇ ತಕ್ಷಣ ಕಾರ್ಯೋನ್ಮುಖರಾಗಿ. ಆಶ್ವಾಸನೀಯ ವರ್ತನೆಯಿಂದ ಸಂತಸ ಉಂಟಾಗುವುದು.
ಸಿಂಹ
ರಾಜಕೀಯ ವರ್ಗದವರು ರಾಜಕಾರಣದ ತಂತ್ರಗಾರಿಕೆ ನಡೆಸುವುದು ಅಗತ್ಯ. ಹಣಕಾಸಿನ ವ್ಯಾಮೋಹ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ.
ಕನ್ಯಾ
ತಿಂಗಳ ಕೊನೆಯಲ್ಲಿ ಅನುಭವಿಸಿದ ಹಣದ ಕಷ್ಟವನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳುವಿರಿ. ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಅಧಿಕಾರ, ಅನುಭವದಿಂದ ಆತ್ಮಾಭಿಮಾನ ವೃದ್ಧಿ .
ತುಲಾ
ಎದ್ದ ಸಮಯದಲ್ಲಿ ಅಶುಭದ ಸಂಕೇತವೆಂದು ಕಂಡ ವಿಷಯಗಳ ಬಗ್ಗೆ ಚಿಂತಿಸದಿರಿ. ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ.
ವೃಶ್ಚಿಕ
ಹೊಸ ಒಪ್ಪಂದವೊಂದನ್ನು ಒಪ್ಪಿಕೊಳ್ಳುವ ಮುನ್ನ ತುಸು ಯೋಚಿಸುವುದು ಉತ್ತಮ ಎಂಬ ಭಾವನೆ ಮನಸ್ಸಿಗೆ ಬರಲಿದೆ. ಅದು ಸರಿಯಾದದ್ದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ.
ಧನು
ಸಾಕುಪ್ರಾಣಿಯ ತೀವ್ರ ಅನಾರೋಗ್ಯವು ದುಃಖಕರವನ್ನಾಗಿ ಮಾಡಬಹುದು. ಸ್ನೇಹಿತರೊಡನೆ ಸುಂದರ ಸಂಜೆಯನ್ನು ಕಳೆಯುವ ಅವಕಾಶಗಳನ್ನು ತಪ್ಪಿಸಿಕೊಳ್ಳುವ ಯೋಚನೆಯನ್ನು ಮಾಡದಿರಿ.
ಮಕರ
ವಿದ್ಯಾಭ್ಯಾಸ, ವೃತ್ತಿಯ ಬಗ್ಗೆ ಆತುರ ನಿರ್ಧಾರ ತೆಗೆದುಕೊಳ್ಳಬೇಡಿ. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ.
ಕುಂಭ
ಆಹಾರದ ವ್ಯತ್ಯಾಸದಿಂದಾಗಿ ಚರ್ಮದಲ್ಲಿ ದಡಾರಗಳು ಅಥವಾ ತುರಿಕೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾದರೂ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆಗಳಾಗುವ ಲಕ್ಷಣಗಳು ಕಾಣುತ್ತಿವೆ.
ಮೀನ
ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ನೂತನ ದಂಪತಿ ಸಂತಾನದ ಶುಭ ಸುದ್ದಿಯನ್ನು ಕೇಳುವಿರಿ. ಪಾಲುದಾರರು ಒಪ್ಪಿಗೆ ನೀಡುತ್ತಾರೆ.