ದಿನ ಭವಿಷ್ಯ: ಫೆಬ್ರುವರಿ 24 ಶನಿವಾರ 2024– ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು
Published 23 ಫೆಬ್ರುವರಿ 2024, 19:06 IST
ಪ್ರಜಾವಾಣಿ ವಿಶೇಷ
ಮೇಷ
ಕಾರ್ಯದೊತ್ತಡ ಜತೆಯಲ್ಲಿ ಮನೆಯ ವಿಚಾರಗಳತ್ತಲೂ ಗಮನಹರಿಸುವುದು ಮುಖ್ಯ. ಅಗ್ನಿಯಿಂದ ಅವಘಡ ಸಂಭವಿಸಬಹುದು ಎಚ್ಚರ ವಹಿಸಿ. ಹೊಸ ಜವಾಬ್ದಾರಿಗಳು ಅರಸಿ ಬರಲಿದೆ.
23 ಫೆಬ್ರುವರಿ 2024, 19:06 IST
ವೃಷಭ
ಕೋರ್ಟ್ ಕೆಲಸಗಳಿಗಾಗಿ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ಅವಶ್ಯಕ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಮಂಗಳ ಕಾರ್ಯಗಳ ಶುಭ ಸೂಚನೆಗಳು ಕಂಡುಬರುತ್ತದೆ.
23 ಫೆಬ್ರುವರಿ 2024, 19:06 IST
ಮಿಥುನ
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ದೃಢ ನಿರ್ಧಾರದಿಂದ ಕೆಲಸಕಾರ್ಯಗಳೆಲ್ಲವು ಪೂರ್ಣಗೊಳ್ಳಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
23 ಫೆಬ್ರುವರಿ 2024, 19:06 IST
ಕರ್ಕಾಟಕ
ಜವಾಬ್ದಾರಿಯುತ ಸ್ಥಾನವನ್ನು ನಿಭಾಯಿಸಲು ತೀರ್ಮಾನಿಸುವುದು ಸರಿಯಲ್ಲ. ಮಾತೃ ಸಂಬಂಧಿಗಳ ಸಹಾಯದಿಂದ ಉತ್ತಮ ನೌಕರಿ ದೊರೆಯುವುದು. ಮನೆ ದೇವರಿಗೆ ಹರಕೆ ಸಲ್ಲಿಸುವ ಬಗ್ಗೆ ಯೋಚಿಸಿ.
23 ಫೆಬ್ರುವರಿ 2024, 19:06 IST
ಸಿಂಹ
ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗ ಪಡೆದುಕೊಳ್ಳಿ. ದೇಹದಲ್ಲಿ ಉಂಟಾಗಿದ್ದಂಥ ಪಿತ್ತ, ಉಷ್ಣ ಪ್ರಕೋಪ ದೂರಾಗುವವು.
23 ಫೆಬ್ರುವರಿ 2024, 19:06 IST
ಕನ್ಯಾ
ಕರ್ತವ್ಯ ನಿಷ್ಠೆಯಿಂದ ಉತ್ತಮ ಹೆಸರು ಸಂಪಾದನೆಯಾಗುವುದು. ಪ್ರಯತ್ನಿಸಿದ ಕಾರ್ಯಗಳು ಆಪ್ತರ ಸಕಾಲಿಕ ನೆರವಿನಿಂದ ಕೈಗೂಡುವುದು. ಜನಬಲದ ಕೊರತೆಯು ಯಶಸ್ಸಿಗೆ ಅಡ್ಡಿಯನ್ನು ಉಂಟುಮಾಡಲಿದೆ.
23 ಫೆಬ್ರುವರಿ 2024, 19:06 IST
ತುಲಾ
ವಾಹನಚಾಲನಾ ವೃತ್ತಿಯವರಿಗೆ ಶುಭವಿದೆ. ರಾಸಾಯನಿಕ ವಸ್ತುಗಳಲ್ಲಿ ಕೆಲಸ ಮಾಡುವವರು ಜಾಗ್ರತರಾಗಿರಿ. ಸ್ವಪ್ರತಿಷ್ಠೆಯನ್ನು ಕಾಪಾಡಲು ವಾದ ಮಾಡಬೇಕಾಗಬಹುದು.
23 ಫೆಬ್ರುವರಿ 2024, 19:06 IST
ವೃಶ್ಚಿಕ
ವಿವಾಹ ವಯಸ್ಕ ಯೋಗ್ಯರಿಗೆ ನೂತನ ಸಂಬಂಧಗಳು ಕಂಡು ಬರಲಿವೆ. ವರ್ಗಾವಣೆಯಿಂದ ದೂರ ವಾಸಿಸುವ ಸಂದರ್ಭ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಯುವುದು.
23 ಫೆಬ್ರುವರಿ 2024, 19:06 IST
ಧನು
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಆಸ್ತಿ ಕೊಳ್ಳುವ ನಿರ್ಧಾರದಲ್ಲಿ ಲಾಭ-ನಷ್ಟವನ್ನು ಪುನಃ ಇನ್ನೊಮ್ಮೆ ಯೋಚಿಸುವುದು ಉತ್ತಮ.
23 ಫೆಬ್ರುವರಿ 2024, 19:06 IST
ಮಕರ
ಹೊಸ ಪುಸ್ತಕಗಳ ಪ್ರಕಾಶನ ಮಾಡುವವರಿಗೆ ಶುಭದಿನ. ಪತ್ರಕರ್ತರಿಗೆ ರಹಸ್ಯ ವಿಷಯ ತಿಳಿಯುವುದು. ಆಸೆ ಆಕಾಂಕ್ಷೆಗಳು ಈಡೇರಿ ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು.
23 ಫೆಬ್ರುವರಿ 2024, 19:06 IST
ಕುಂಭ
ಎದುರಾಗಿರುವ ಸಮಸ್ಯೆಗೆ ಸಂಬಂಧಿಸಿದ ವ್ಯಕ್ತಿಯಲ್ಲಿ ಮಾತನಾಡುವುದರಿಂದ ಸಂಪೂರ್ಣವಾಗಿ ಉತ್ತರ ಸಿಗುವುದು. ಬರಬೇಕಾಗಿದ್ದ ಹಣಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ಕಾರ್ಮಿಕ ವರ್ಗದವರ ಬಗ್ಗೆ ಗಮನವಿರಲಿ.
23 ಫೆಬ್ರುವರಿ 2024, 19:06 IST
ಮೀನ
ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದು ಕೊಳ್ಳು ವುದು ಕಷ್ಟದ ಕೆಲಸವೇನಲ್ಲ. ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸೂಕ್ತ ಕಾಲವಾಗಿದೆ. ಉಷ್ಣ ವ್ಯಾಧಿ ಉಪಶಮನಕ್ಕೆ ಔಷಧಿಯನ್ನು ಸ್ವೀಕರಿಸಿ.
23 ಫೆಬ್ರುವರಿ 2024, 19:06 IST