ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 20 ಮಂಗಳವಾರ 2024- ಇಂದು ಬಂಧು ಮಿತ್ರರು ಬರಲಿದ್ದಾರೆ
Published 19 ಫೆಬ್ರುವರಿ 2024, 18:38 IST
ಪ್ರಜಾವಾಣಿ ವಿಶೇಷ
author
ಮೇಷ
ಯಾವುದೇ ಮುಜುಗರ ಅಥವಾ ಹೆದರಿಕೆ ಇಲ್ಲದೆ ಸಮಯವನ್ನು ಸತ್ಕಾರ್ಯಗಳಿಗೆ ಬಳಸಿಕೊಳ್ಳಲು ಪ್ರಯತ್ನವನ್ನು ಮಾಡಿ. ಗಳಿಕೆಯ ಬಗ್ಗೆ ಚಿಂತಿಸಬೇಡಿ, ಕೆಲಸದಲ್ಲಿ ನಿರಂತರತೆ ಮತ್ತು ಅಸ್ತಿತ್ವ ಕಾಪಾಡಿಕೊಳ್ಳಿ.
ವೃಷಭ
ಸವಾಲಾಗಿರುವ ನಿಮ್ಮ ಮನದ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಇಂದು ಸನ್ನಿವೇಶಗಳು ನಿಮಗೆ ಅನುಕೂಲವಾಗಲಿವೆ. ಭೂಮಿ ಖರೀದಿಯ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬಂದೀತು.
ಮಿಥುನ
ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳಿಂದ ಆದಾಯದಲ್ಲಿ ಗಣನೀಯ ಸುಧಾರಣೆ ಕಾಣಲಿದೆ. ಈಗಾಗಲೇ ಆರಂಭಿಸಿರುವ ಕೆಲಸ ಮುಂದುವರಿಸಲು ಪ್ರಯತ್ನಿಸಿ. ಸ್ಥಿರ ಆಸ್ತಿ ಖರೀದಿಸುವ ಬಗ್ಗೆ ಯೋಚನೆ ಮಾಡುವುದು ಉತ್ತಮ
ಕರ್ಕಾಟಕ
ಮನಸ್ಸಿಗೆ ಅಸಮಾಧಾನ ಆಗುವಂಥ ಘಟನೆಯು ಈ ದಿನ ನಡೆಯಲಿದೆ. ಸಿದ್ಧ ಉಡುಪು ಮಾರಾಟಗಾರರಿಗೆ ವಿಶೇಷ ಲಾಭ ಬರುವುದು. ಅಧಿಕಾರಿ ವರ್ಗದವರಿಗೆ ರಾಜಕಾರಣಿಗಳ ಕಿರುಕುಳ ಹೆಚ್ಚಾಗುತ್ತದೆ.
ಸಿಂಹ
ಹುಣಸೆ ಹಣ್ಣು ಹಾಗೂ ದ್ರಾಕ್ಷಿ ವ್ಯಾಪಾರಸ್ಥರಿಗೆ ಅನುಕೂಲಕರ ವ್ಯಾಪಾರ ಇರುವುದು. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು.
ಕನ್ಯಾ
ಸಾಂಪ್ರದಾಯಿಕ ವಿಚಾರದ ಚಿಂತನೆ ಅಥವಾ ಅಂಥ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಘನತೆ ಹೆಚ್ಚಲಿದೆ. ಮನೆಯವರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿವೆ.
ತುಲಾ
ಎಷ್ಟೇ ಪ್ರಯತ್ನವಿದ್ದರೂ ಮೊದಲನೇ ಬಾರಿ ವಿಘ್ನವೇ ಸಂಭವಿಸಲಿದೆ ನಂತರ ಗುರಿ ಸಾಧಿಸಬೇಕಿದ್ದಲ್ಲಿ ಜನರೊಂದಿಗೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳುವುದು ಉತ್ತಮ. ವ್ಯವಹಾರಿಕ ಒತ್ತಡಗಳು ಕಡಿಮೆಯಾಗುವುದು.
ವೃಶ್ಚಿಕ
ಜನರೊಂದಿಗಿನ ಹೆಚ್ಚಿನ ಸಂಪರ್ಕದಿಂದಾಗಿ ರಾಜಕೀಯ ರಂಗ ಕ್ಕಿಳಿಯುವ ಅವಕಾಶ ಅಥವಾ ಆಹ್ವಾನ ಬರಲಿದೆ. ದುಃಖ ತೀವ್ರತೆಯು ದಿನದಿಂದ ದಿನಕ್ಕೆ ಕಡಿಮೆಯಾಗುವುದು. ಬಂಧು ಮಿತ್ರರು ಬರಲಿದ್ದಾರೆ.
ಧನು
ಹಣಕಾಸಿನ ಲೆಕ್ಕಾಚಾರವನ್ನು ನೋಡುವವರು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿ. ಆರ್ಥಿಕ ವೃದ್ಧಿ, ಆರೋಗ್ಯವೃದ್ಧಿ, ಅಕಸ್ಮಿಕ ಧನ ಯೋಗ ಈ ದಿನದಲ್ಲಿದೆ. ಉಡುಪು ವಿನ್ಯಾಸಗಾರರಿಗೆ ಅವಕಾಶಗಳು ಲಭ್ಯವಾಗುತ್ತದೆ.
ಮಕರ
ಆರ್ಥಿಕವಾಗಿ ಲಾಭ ಪಡೆಯುವುದಕ್ಕೆ ಹೋರಾಟ ನಡೆಸಬೇಕಾಗುವ ಪರಿಸ್ಥಿತಿ ಎದುರಾಗಬಹುದು. ಚಟಗಳಿಂದ ಹೊರಬರುವ ಬಗ್ಗೆ ಪ್ರಯತ್ನವಿರಲಿ. ಆಹಾರದಲ್ಲಿ ಪಥ್ಯವನ್ನು ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಿರಿ.
ಕುಂಭ
ಸಹೋದ್ಯೋಗಿಯೊಬ್ಬರ ಸಲಹೆ ಅತಿ ಸೂಕ್ತ ಎನಿಸಿ ಅದರಂತೆ ನಡೆದು ವ್ಯವಹಾರದಲ್ಲಿ ಲಾಭ ಹೊಂದುವಿರಿ. ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಅಥವಾ ಬಡ್ತಿ ಪಡೆಯುವ ಕಾಲ ನಿಮ್ಮದಾಗಲಿದೆ.
ಮೀನ
ಷೇರು ಪೇಟೆ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯುವುದು ಕಷ್ಟವಾಗಲಿದೆ. ಮನಸ್ಸು ಅಸ್ಥಿರವಾಗುವುದು. ಲೋಹ ವಸ್ತುಗಳ ವ್ಯಾಪಾರಿ ಗಳಿಗೆ ಸಂಪಾದನೆ ಹೆಚ್ಚಳವಾಗಲಿದೆ. ಕೆಲಸಗಳು ಸುಗಮವಾಗಿ ಸಾಗಲಿದೆ.