‘ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಕಲಿಕೆಗೆ ಉತ್ತೇಜನ ನೀಡಬಹುದು. ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿ ವೇತನ ಎಂದು ₹ 5 ಕೋಟಿ ಠೇವಣಿ ಇಟ್ಟು, ಅದರ ಬಡ್ಡಿಯನ್ನು ವಿದ್ಯಾರ್ಥಿ ವೇತನವಾಗಿ ಪ್ರತಿವರ್ಷ ನೀಡುತ್ತಿದ್ದೇನೆ. ಆದರೆ, ವಿದ್ಯಾರ್ಥಿ ವೇತನದಿಂದ ದೊಡ್ಡಮಟ್ಟದ ಉಪಯೋಗವೇನು ಆಗುವುದಿಲ್ಲ. ಉತ್ತಮವಾಗಿ ಕಲಿಯುವವರನ್ನು ಗುರುತಿಸಿ ಅವರನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಪೂರ್ಣ ವೆಚ್ಚವನ್ನು ಭರಿಸುವ ಕೆಲಸ ಮಾಡಬೇಕು. ನಮ್ಮ ಸಮುದಾಯದಲ್ಲಿ ಶ್ರೀಮಂತರಿಗೇನು ಕಡಿಮೆ ಇಲ್ಲ. ಒಂದಿಬ್ಬರ ಪೂರ್ಣ ವೆಚ್ಚ ಭರಿಸಲು ನಾನು ಸಿದ್ಧ ಇದ್ದೇನೆ’ ಎಂದು ಹೇಳಿದರು.