ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬದಲಾಗಿ ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಖರ್ಗೆ ಪತ್ನಿ ರಾಧಾಬಾಯಿ ಅವರ ತಮ್ಮ ರಾಧಾಕೃಷ್ಣ ದೊಡ್ಡಮನಿ ಅವರು ಕಣಕ್ಕಿಳಿದಿದ್ದಾರೆ.
ಇದು ರಾಧಾಕೃಷ್ಣ ಅವರಿಗೆ ಮೊದಲ ಚುನಾವಣೆ. ತಮ್ಮ ಮಾವ ಐದು ದಶಕಗಳಿಂದ ರಾಜಕಾರಣದಲ್ಲಿದ್ದರೂ ರಾಜಕೀಯದತ್ತ ಮುಖಮಾಡದ ರಾಧಾಕೃಷ್ಣ ಅವರು ಖರ್ಗೆ ಅವರು ಸ್ಥಾಪಿಸಿದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ರಾಧಾಕೃಷ್ಣ, ಖರ್ಗೆ ಪುತ್ರಿ ಡಾ. ಜಯಶ್ರೀ ಅವರನ್ನು ಮದುವೆಯಾಗಿದ್ದಾರೆ. ದಂಪತಿಗೆ ಪ್ರಾರ್ಥನಾ ಎಂಬ ಮಗಳಿದ್ದಾರೆ.
ರಾಧಾಕೃಷ್ಣ ಅಧ್ಯಕ್ಷರಾಗಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿಯು ಬೆಂಗಳೂರಿನ ಡಾ.ಅಂಬೇಡ್ಕರ್ ಮೆಡಿಕಲ್ ಕಾಲೇಜು, ಕಲಬುರಗಿಯಲ್ಲಿರುವ , ಡಾ.ಅಂಬೇಡ್ಕರ್ ಪದವಿ, ಪಿಯು ಕಾಲೇಜು, ಸಿದ್ಧಾರ್ಥ ಕಾನೂನು ಕಾಲೇಜು, ಮಿಲಿಂದ್ ಶಾಲೆಗಳನ್ನು ನಡೆಸುತ್ತಿದೆ.