ಮುಂಬೈನ 26/11 ದಾಳಿ ಆಗಿ 16 ವರ್ಷಗಳ ನಂತರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಘಟಿಸಿದೆ. ಪ್ರಕರಣದ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದೆ. 26/11ರ ಕರಾಳ ಘಟನೆಯ ಜತೆಗೆ ದೇಶದ ಇತರೆಡೆ ನಡೆದಿದ್ದ ಭಯೋತ್ಪಾದನಾ ದಾಳಿಗಳ ಕುರಿತ ಪ್ರಮುಖ ಮಾಹಿತಿಯೂ ರಾಣಾ ಬಳಿ ಇರುವ ಸಾಧ್ಯತೆ ಇದೆ. ಜತೆಗೆ, ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಉಗ್ರರಿಗೆ ತನ್ನ ದೇಶದಲ್ಲಿ ನೆಲೆ ಒದಗಿಸಿರುವ ಪಾಕಿಸ್ತಾನದ ಮುಖವಾಡ ಕಳಚಲಿದೆ ಎನ್ನಲಾಗುತ್ತಿದೆ. ರಾಣಾ ಹಸ್ತಾಂತರವು ಭಯೋತ್ಪಾದನೆ ವಿರುದ್ಧದ ಭಾರತದ ಮುಂದಿನ ಹೋರಾಟಕ್ಕೆ ಬಲ ತುಂಬಲಿದೆ ಎನ್ನುವ ನಿರೀಕ್ಷೆ ಇದೆ.