<p><strong>ನವದೆಹಲಿ:</strong> ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಕ್ಷೇತ್ರಕ್ಕಿಂತ ವಿಯೆಟ್ನಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಹುಲ್ ಗಾಂಧಿಗೆ ಆ ದೇಶದ ಬಗ್ಗೆ ಯಾಕಿಷ್ಟು ಅಸಾಧಾರಣ ಪ್ರೀತಿ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.</p>.ಮತದಾರರ ಪಟ್ಟಿ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ರಾಹುಲ್ ಗಾಂಧಿ ಪಟ್ಟು.<p>‘ರಾಹುಲ್ ಗಾಂಧಿ ಎಲ್ಲಿದ್ದಾರೆ? ಅವರು ವಿಯೆಟ್ನಾಂಗೆ ಹೋಗಿದ್ದಾರೆ ಎಂಬುದನ್ನು ನಾನು ಕೇಳಿದೆ’ ಎಂದು ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.</p><p>ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನೂ ಅವರು ಟೀಕಿಸಿದರು.</p>.ಬಿಜೆಪಿ ಪರ ಕೆಲಸ ಮಾಡುವ ನಾಯಕರನ್ನು ಕಾಂಗ್ರೆಸ್ನಿಂದ ಹೊರಗಿಡಬೇಕು: ರಾಹುಲ್ ಗಾಂಧಿ.<p>‘ಹೊಸ ವರ್ಷಾಚರಣೆ ವೇಳೆಯೂ ರಾಹುಲ್ ಗಾಂಧಿ ವಿಯೆಟ್ನಾಂಗೆ ತೆರಳಿ 22 ದಿನ ತಂಗಿದ್ದರು. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿಯೂ ಅಷ್ಟು ದಿನ ಇರುವುದಿಲ್ಲವಿಯೆಟ್ನಾಂ ಬಗ್ಗೆ ಏಕಾಏಕಿ ಪ್ರೀತಿ ಬರಲು ಕಾರಣ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.</p><p>‘ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರು. ಅವರು ಭಾರತಲ್ಲಿ ಲಭ್ಯರಿರಬೇಕು’ ಎಂದು ವ್ಯಂಗ್ಯವಾಡಿದರು.</p><p>‘ವಿಯೆಟ್ನಾಂ ಬಗ್ಗೆ ಅವರಿಗೆ ಇರುವ ಅಪರಿಮಿತ ಪ್ರೀತಿಯ ಬಗ್ಗೆ ರಾಹುಲ್ ಗಾಂಧಿಯೇ ಉತ್ತರಿಸಬೇಕು. ಆ ದೇಶಕ್ಕೆ ಅವರ ಪದೇ ಪದೇ ಭೇಟಿ ಕುತೂಹಲಕಾರಿ’ ಎಂದು ಅವರು ಹೇಳಿದ್ದಾರೆ.</p> .ಸಾವರ್ಕರ್ ಕುರಿತು ಹೇಳಿಕೆ | ವಿಚಾರಣೆಗೆ ಗೈರಾದ ರಾಹುಲ್ ಗಾಂಧಿ: ₹200 ದಂಡ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಕ್ಷೇತ್ರಕ್ಕಿಂತ ವಿಯೆಟ್ನಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಹುಲ್ ಗಾಂಧಿಗೆ ಆ ದೇಶದ ಬಗ್ಗೆ ಯಾಕಿಷ್ಟು ಅಸಾಧಾರಣ ಪ್ರೀತಿ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.</p>.ಮತದಾರರ ಪಟ್ಟಿ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ರಾಹುಲ್ ಗಾಂಧಿ ಪಟ್ಟು.<p>‘ರಾಹುಲ್ ಗಾಂಧಿ ಎಲ್ಲಿದ್ದಾರೆ? ಅವರು ವಿಯೆಟ್ನಾಂಗೆ ಹೋಗಿದ್ದಾರೆ ಎಂಬುದನ್ನು ನಾನು ಕೇಳಿದೆ’ ಎಂದು ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.</p><p>ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನೂ ಅವರು ಟೀಕಿಸಿದರು.</p>.ಬಿಜೆಪಿ ಪರ ಕೆಲಸ ಮಾಡುವ ನಾಯಕರನ್ನು ಕಾಂಗ್ರೆಸ್ನಿಂದ ಹೊರಗಿಡಬೇಕು: ರಾಹುಲ್ ಗಾಂಧಿ.<p>‘ಹೊಸ ವರ್ಷಾಚರಣೆ ವೇಳೆಯೂ ರಾಹುಲ್ ಗಾಂಧಿ ವಿಯೆಟ್ನಾಂಗೆ ತೆರಳಿ 22 ದಿನ ತಂಗಿದ್ದರು. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿಯೂ ಅಷ್ಟು ದಿನ ಇರುವುದಿಲ್ಲವಿಯೆಟ್ನಾಂ ಬಗ್ಗೆ ಏಕಾಏಕಿ ಪ್ರೀತಿ ಬರಲು ಕಾರಣ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.</p><p>‘ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರು. ಅವರು ಭಾರತಲ್ಲಿ ಲಭ್ಯರಿರಬೇಕು’ ಎಂದು ವ್ಯಂಗ್ಯವಾಡಿದರು.</p><p>‘ವಿಯೆಟ್ನಾಂ ಬಗ್ಗೆ ಅವರಿಗೆ ಇರುವ ಅಪರಿಮಿತ ಪ್ರೀತಿಯ ಬಗ್ಗೆ ರಾಹುಲ್ ಗಾಂಧಿಯೇ ಉತ್ತರಿಸಬೇಕು. ಆ ದೇಶಕ್ಕೆ ಅವರ ಪದೇ ಪದೇ ಭೇಟಿ ಕುತೂಹಲಕಾರಿ’ ಎಂದು ಅವರು ಹೇಳಿದ್ದಾರೆ.</p> .ಸಾವರ್ಕರ್ ಕುರಿತು ಹೇಳಿಕೆ | ವಿಚಾರಣೆಗೆ ಗೈರಾದ ರಾಹುಲ್ ಗಾಂಧಿ: ₹200 ದಂಡ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>