‘ಪಕ್ಷಾತೀತವಾಗಿ ನಾವು ಭಾರತದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಒಟ್ಟಿಗೆ ಇದ್ದೇವೆ’ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, 2020ರ ಜೂನ್ 19ರಂದು ಗಲ್ವಾನ್ನಲ್ಲಿ 20 ಭಾರತೀಯ ವೀರ ಸೇನಾನಿಗಳು ಪ್ರಾಣ ತ್ಯಾಗ ಮಾಡಿದಾಗ ಪ್ರಧಾನಿ ಅವರು ಚೀನಾಗೆ ಕ್ಲೀನ್ ಚೀಟ್ ನೀಡಿದ ಪರಿಣಾಮ, ಚೀನಾ ಹೀಗೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.