<p><strong>ಏಕತಾ ನಗರ:</strong> 'ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್, ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು. ಆದರೆ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಆಪಾದಿಸಿದ್ದಾರೆ. </p><p>ಗುಜರಾತ್ನ ಏಕತಾ ನಗರದಲ್ಲಿ 'ಏಕತಾ ಪ್ರತಿಮೆ' ಬಳಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಇತಿಹಾಸ ಬರೆಯಲು ಸಮಯವನ್ನು ವ್ಯರ್ಥ ಮಾಡಬಾರದು. ಆದರೆ ಇತಿಹಾಸ ರಚಿಸಲು ನಾವು ಶ್ರಮ ವಹಿಸಬೇಕು ಎಂಬುದರಲ್ಲಿ ಸರ್ದಾರ್ ಪಟೇಲ್ ನಂಬಿಕೆ ಇಟ್ಟಿದ್ದರು' ಎಂದು ಹೇಳಿದ್ದಾರೆ. </p><p>'ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸುವ ಸರ್ದಾರ್ ಅವರ ಬಯಕೆಯನ್ನು ಈಡೇರಲು ನೆಹರೂ ಬಿಡಲಿಲ್ಲ. ಬದಲಾಗಿ ಕಾಶ್ಮೀರವನ್ನು ವಿಭಜಿಸಲಾಯಿತು. ಪ್ರತ್ಯೇಕ ಸಂವಿಧಾನ ಹಾಗೂ ಧ್ವಜವನ್ನು ನೀಡಲಾಯಿತು. ಅಲ್ಲದೆ ಕಾಂಗ್ರೆಸ್ನ ತಪ್ಪಿನಿಂದಾಗಿ ದೇಶವು ದಶಕಗಳ ಕಾಲ ಬಳಲಿತ್ತು' ಎಂದು ಮೋದಿ ಆಪಾದಿಸಿದ್ದಾರೆ. </p><p>ಸರ್ದಾರ್ ಪಟೇಲ್ ರೂಪಿಸಿದ ನೀತಿ, ನಿರ್ಣಯಗಳು ಹೊಸ ಇತಿಹಾಸವನ್ನು ನಿರ್ಮಿಸಿದವು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. </p><p>'ಸ್ವಾತಂತ್ರ್ಯದ ನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಗ್ಗೂಡಿಸುವುದು ಅಸಾಧ್ಯದ ಕೆಲಸವಾಗಿತ್ತು. ಆದರೆ ಸರ್ದಾರ್ ಪಟೇಲ್ ಅವರಿಂದ ಸಾಧ್ಯವಾಯಿತು. 'ಏಕ ಭಾರತ, ಶ್ರೇಷ್ಠ ಭಾರತ' ಕಲ್ಪನೆಯು ಅವರ ಪಾಲಿಗೆ ಮಹತ್ವದ್ದಾಗಿತ್ತು' ಎಂದು ಹೇಳಿದ್ದಾರೆ. </p>.ಏಕತಾ ದಿನ 2025: ಸರ್ದಾರ್ ಪಟೇಲ್ ದೂರದೃಷ್ಟಿ & ಇಂದಿನ ರಾಷ್ಟ್ರೀಯ ಏಕತೆಯ ಅರ್ಥ.ಒಂದು ಕೋಟಿ ಉದ್ಯೋಗ, ₹ 50 ಲಕ್ಷ ಕೋಟಿ ಹೂಡಿಕೆ: ಬಿಹಾರಕ್ಕೆ NDA ‘ಸಂಕಲ್ಪ ಪತ್ರ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಏಕತಾ ನಗರ:</strong> 'ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್, ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು. ಆದರೆ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಆಪಾದಿಸಿದ್ದಾರೆ. </p><p>ಗುಜರಾತ್ನ ಏಕತಾ ನಗರದಲ್ಲಿ 'ಏಕತಾ ಪ್ರತಿಮೆ' ಬಳಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಇತಿಹಾಸ ಬರೆಯಲು ಸಮಯವನ್ನು ವ್ಯರ್ಥ ಮಾಡಬಾರದು. ಆದರೆ ಇತಿಹಾಸ ರಚಿಸಲು ನಾವು ಶ್ರಮ ವಹಿಸಬೇಕು ಎಂಬುದರಲ್ಲಿ ಸರ್ದಾರ್ ಪಟೇಲ್ ನಂಬಿಕೆ ಇಟ್ಟಿದ್ದರು' ಎಂದು ಹೇಳಿದ್ದಾರೆ. </p><p>'ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸುವ ಸರ್ದಾರ್ ಅವರ ಬಯಕೆಯನ್ನು ಈಡೇರಲು ನೆಹರೂ ಬಿಡಲಿಲ್ಲ. ಬದಲಾಗಿ ಕಾಶ್ಮೀರವನ್ನು ವಿಭಜಿಸಲಾಯಿತು. ಪ್ರತ್ಯೇಕ ಸಂವಿಧಾನ ಹಾಗೂ ಧ್ವಜವನ್ನು ನೀಡಲಾಯಿತು. ಅಲ್ಲದೆ ಕಾಂಗ್ರೆಸ್ನ ತಪ್ಪಿನಿಂದಾಗಿ ದೇಶವು ದಶಕಗಳ ಕಾಲ ಬಳಲಿತ್ತು' ಎಂದು ಮೋದಿ ಆಪಾದಿಸಿದ್ದಾರೆ. </p><p>ಸರ್ದಾರ್ ಪಟೇಲ್ ರೂಪಿಸಿದ ನೀತಿ, ನಿರ್ಣಯಗಳು ಹೊಸ ಇತಿಹಾಸವನ್ನು ನಿರ್ಮಿಸಿದವು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. </p><p>'ಸ್ವಾತಂತ್ರ್ಯದ ನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಗ್ಗೂಡಿಸುವುದು ಅಸಾಧ್ಯದ ಕೆಲಸವಾಗಿತ್ತು. ಆದರೆ ಸರ್ದಾರ್ ಪಟೇಲ್ ಅವರಿಂದ ಸಾಧ್ಯವಾಯಿತು. 'ಏಕ ಭಾರತ, ಶ್ರೇಷ್ಠ ಭಾರತ' ಕಲ್ಪನೆಯು ಅವರ ಪಾಲಿಗೆ ಮಹತ್ವದ್ದಾಗಿತ್ತು' ಎಂದು ಹೇಳಿದ್ದಾರೆ. </p>.ಏಕತಾ ದಿನ 2025: ಸರ್ದಾರ್ ಪಟೇಲ್ ದೂರದೃಷ್ಟಿ & ಇಂದಿನ ರಾಷ್ಟ್ರೀಯ ಏಕತೆಯ ಅರ್ಥ.ಒಂದು ಕೋಟಿ ಉದ್ಯೋಗ, ₹ 50 ಲಕ್ಷ ಕೋಟಿ ಹೂಡಿಕೆ: ಬಿಹಾರಕ್ಕೆ NDA ‘ಸಂಕಲ್ಪ ಪತ್ರ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>