<p><strong>ನವದೆಹಲಿ:</strong> ‘ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ತಾವು ಆಡಿರುವ ಮಾತಿನ ಕೆಲ ತುಣುಕುಗಳನ್ನು ಕಡತಗಳಿಂದ ತೆಗೆದುಹಾಕಿರುವುದನ್ನು ಪುನಃ ಸೇರಿಸಬೇಕು’ ಎಂದು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾಧ್ಯಕ್ಷ ಜಗದೀಪ ಧನಕರ್ ಅವರನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಗ್ರಹಿಸಿದ್ದಾರೆ.</p><p>ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು.</p><p>ಫೆ. 2ರಂದು ಮಾಡಿದ ಭಾಷಣದ ಕೆಲ ಭಾಗಗಳು ಉದ್ದೇಶಕ್ಕೆ ವಿರುದ್ಧವಾಗಿವೆ ಎಂಬ ಕಾರಣ ನೀಡಿ 2 ಪುಟಗಳ ಭಾಷಣವನ್ನು ಕಡತದಿಂದ ತೆಗೆದುಹಾಕಲಾಗಿತ್ತು.</p><p>‘ನಾನು ಕೆಲವೊಂದು ಮಾತುಗಳನ್ನು ಈ ಸದನದಲ್ಲಿ ಹೇಳಿದ್ದೆ. ಅವುಗಳಲ್ಲಿ ಯಾರ ಹೆಸರನ್ನೂ ತೆಗೆದುಕೊಂಡಿರಲಿಲ್ಲ, ಯಾವುದೇ ನಿಯಮಗಳ ಉಲ್ಲಂಘನೆಯೂ ಆಗಿರಲಿಲ್ಲ. ಹೀಗಿದ್ದರೂ ಅದನ್ನು ಕಡತದಿಂದ ತೆಗೆಯಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ತಮ್ಮ ವಾದಕ್ಕೆ ಪೂರಕವಾದ ಕೆಲವೊಂದು ನಿಯಮಗಳನ್ನು ಅವರು ಹೇಳಿದರು.</p><p>‘ನನ್ನ ಭಾಷಣದ ತುಣುಕುಗಳನ್ನು ತೆಗೆದಿದ್ದಕ್ಕೆ ನನ್ನ ಬಲವಾದ ವಿರೋಧವಿದೆ. ಅವುಗಳನ್ನು ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಲಿಖಿತ ಪತ್ರವನ್ನು ಸಭಾಧ್ಯಕ್ಷರಿಗೆ ನೀಡಿದರು. ಈ ಕುರಿತು ಪರಿಶೀಲಿಸಿ ನಂತರ ರೂಲಿಂಗ್ ಕೊಡುವುದಾಗಿ ಸಭಾಧ್ಯಕ್ಷ ಧನಕರ್ ಹೇಳಿದರು. </p><p>‘ಭಾಷಣದಲ್ಲಿ ಅಸಂವಿಧಾನಿಕ ಪದಗಳ ಬಳಕೆಯ ಪಟ್ಟಿಯನ್ನು ಪರಿಷ್ಕರಿಸಲು ಸಮಿತಿಯೊಂದನ್ನು ರಚಿಸಬೇಕು’ ಎಂದು ಸದಸ್ಯರೊಬ್ಬರು ಸಭೆಗೆ ಸಲಹೆ ನೀಡಿದರು.</p><p>ಖರ್ಗೆ ಅವರ ಮಾತಿನಲ್ಲಿ ಅಸಂವಿಧಾನಿಕ ಪದ ಬಳಕೆಯಾಗಿದೆ. ‘ಕಡತಗಳಲ್ಲಿ ದಾಖಲಾಗದು’ ಎಂದು ಸಭಾಧ್ಯಕ್ಷರ ಹೇಳಿಕೆ ನಂತರ ಆಡಿರುವ 3ರಿಂದ 4 ವಿಷಯಗಳು ಕಡತದಿಂದ ಹೊರಗುಳಿದಿವೆ. </p><p>ದಿನದ ಆರಂಭದಲ್ಲಿ ಧನಕರ್ ಅವರು ಮಾತನಾಡಿ, ‘ಸರ್ಕಾರದ ಕೆಲವೊಂದು ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕಿರುವುದರಿಂದ ಮುಂದಿನ ಸಭೆ ಶನಿವಾರ (ಫೆ. 10ರಂದು) ನಡೆಸಲಾಗುವುದು. ಅಂದು ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ವೇಳೆ ಇರದು’ ಎಂದರು.</p><p>ಬಜೆಟ್ ಅಧಿವೇಶನದ ಕೊನೆಯ ದಿನ ಶುಕ್ರವಾರ ಎಂದು ಈ ಮೊದಲು ಹೇಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ತಾವು ಆಡಿರುವ ಮಾತಿನ ಕೆಲ ತುಣುಕುಗಳನ್ನು ಕಡತಗಳಿಂದ ತೆಗೆದುಹಾಕಿರುವುದನ್ನು ಪುನಃ ಸೇರಿಸಬೇಕು’ ಎಂದು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾಧ್ಯಕ್ಷ ಜಗದೀಪ ಧನಕರ್ ಅವರನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಗ್ರಹಿಸಿದ್ದಾರೆ.</p><p>ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು.</p><p>ಫೆ. 2ರಂದು ಮಾಡಿದ ಭಾಷಣದ ಕೆಲ ಭಾಗಗಳು ಉದ್ದೇಶಕ್ಕೆ ವಿರುದ್ಧವಾಗಿವೆ ಎಂಬ ಕಾರಣ ನೀಡಿ 2 ಪುಟಗಳ ಭಾಷಣವನ್ನು ಕಡತದಿಂದ ತೆಗೆದುಹಾಕಲಾಗಿತ್ತು.</p><p>‘ನಾನು ಕೆಲವೊಂದು ಮಾತುಗಳನ್ನು ಈ ಸದನದಲ್ಲಿ ಹೇಳಿದ್ದೆ. ಅವುಗಳಲ್ಲಿ ಯಾರ ಹೆಸರನ್ನೂ ತೆಗೆದುಕೊಂಡಿರಲಿಲ್ಲ, ಯಾವುದೇ ನಿಯಮಗಳ ಉಲ್ಲಂಘನೆಯೂ ಆಗಿರಲಿಲ್ಲ. ಹೀಗಿದ್ದರೂ ಅದನ್ನು ಕಡತದಿಂದ ತೆಗೆಯಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ತಮ್ಮ ವಾದಕ್ಕೆ ಪೂರಕವಾದ ಕೆಲವೊಂದು ನಿಯಮಗಳನ್ನು ಅವರು ಹೇಳಿದರು.</p><p>‘ನನ್ನ ಭಾಷಣದ ತುಣುಕುಗಳನ್ನು ತೆಗೆದಿದ್ದಕ್ಕೆ ನನ್ನ ಬಲವಾದ ವಿರೋಧವಿದೆ. ಅವುಗಳನ್ನು ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಲಿಖಿತ ಪತ್ರವನ್ನು ಸಭಾಧ್ಯಕ್ಷರಿಗೆ ನೀಡಿದರು. ಈ ಕುರಿತು ಪರಿಶೀಲಿಸಿ ನಂತರ ರೂಲಿಂಗ್ ಕೊಡುವುದಾಗಿ ಸಭಾಧ್ಯಕ್ಷ ಧನಕರ್ ಹೇಳಿದರು. </p><p>‘ಭಾಷಣದಲ್ಲಿ ಅಸಂವಿಧಾನಿಕ ಪದಗಳ ಬಳಕೆಯ ಪಟ್ಟಿಯನ್ನು ಪರಿಷ್ಕರಿಸಲು ಸಮಿತಿಯೊಂದನ್ನು ರಚಿಸಬೇಕು’ ಎಂದು ಸದಸ್ಯರೊಬ್ಬರು ಸಭೆಗೆ ಸಲಹೆ ನೀಡಿದರು.</p><p>ಖರ್ಗೆ ಅವರ ಮಾತಿನಲ್ಲಿ ಅಸಂವಿಧಾನಿಕ ಪದ ಬಳಕೆಯಾಗಿದೆ. ‘ಕಡತಗಳಲ್ಲಿ ದಾಖಲಾಗದು’ ಎಂದು ಸಭಾಧ್ಯಕ್ಷರ ಹೇಳಿಕೆ ನಂತರ ಆಡಿರುವ 3ರಿಂದ 4 ವಿಷಯಗಳು ಕಡತದಿಂದ ಹೊರಗುಳಿದಿವೆ. </p><p>ದಿನದ ಆರಂಭದಲ್ಲಿ ಧನಕರ್ ಅವರು ಮಾತನಾಡಿ, ‘ಸರ್ಕಾರದ ಕೆಲವೊಂದು ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕಿರುವುದರಿಂದ ಮುಂದಿನ ಸಭೆ ಶನಿವಾರ (ಫೆ. 10ರಂದು) ನಡೆಸಲಾಗುವುದು. ಅಂದು ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ವೇಳೆ ಇರದು’ ಎಂದರು.</p><p>ಬಜೆಟ್ ಅಧಿವೇಶನದ ಕೊನೆಯ ದಿನ ಶುಕ್ರವಾರ ಎಂದು ಈ ಮೊದಲು ಹೇಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>