<p><strong>ಮಥುರಾ:</strong> ಮಥುರಾದ ಜಮುನಪುರದ ಬೃಂದಾವನದ ಆಶ್ರಮವೊಂದರಲ್ಲಿ ಗುರುವಾರ ನಡೆದ ವೈದಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಕುಟುಂಬವೊಂದರ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.</p><p>ಮತಾಂತರಗೊಂಡವರು ತಮ್ಮ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದು, ತಮ್ಮ ಪೂರ್ವಜರ ನಂಬಿಕೆಗೆ ಮರಳಲು ಸ್ವಯಂ ಪ್ರೇರಿತವಾಗಿ ಮತಾಂತರಗೊಂಡಿದ್ದಾಗಿ ತಿಳಿಸಿದ್ದಾರೆ.</p>.ಬೀದರ್ | ಸಿದ್ದರಾಮಯ್ಯ ಮುಸ್ಲಿಮರಾಗಿ ಮತಾಂತರ ಆಗಲಿ: ಭಗವಂತ ಖೂಬಾ.<p>ಕುಟುಂಬದ ಮುಖ್ಯಸ್ಥರಾದ 50 ವರ್ಷದ ಜಾಕೀರ್ ತಮ್ಮ ಹೆಸರನ್ನು ಜಗದೀಶ್ ಎಂದು ಬದಲಿಸಿಕೊಂಡಿದ್ದಾರೆ. ಮೂಲತಃ ಶೇರ್ಗಢ ಪ್ರದೇಶದ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾವನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೇ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.</p><p>‘ಮೊಘಲ್ ಕಾಲದವರೆಗೂ ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಒತ್ತಡದಿಂದಾಗಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು. ಆದರೆ ಮನಸ್ಸು, ಮಾತು ಮತ್ತು ಕಾರ್ಯದಲ್ಲಿ ನಾನು ಕಾಳಿ ದೇವಿಯನ್ನು ಪೂಜಿಸುವುದನ್ನು ಮುಂದುವರೆಸಿದ್ದೇನೆ. ಗ್ರಾಮಸ್ಥರು ನನ್ನನ್ನು 'ಗತ್ ಜಿ ಎಂದು ಕರೆಯುತ್ತಾರೆ’ ಎಂದು ಜಗದೀಶ್ ತಿಳಿಸಿದ್ದಾರೆ.</p>.ಶ್ರೀರಂಗಪಟ್ಟಣ | ಮತಾಂತರ ಆರೋಪ, ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ.<p>ನನ್ನ ಕುಟುಂಬ ಮೂಲತಃ ಗುರ್ಜರ್ ಸಮುದಾಯಕ್ಕೆ ಸೇರಿದವರಾಗಿದ್ದು, ಮೂಲ ಬೇರಿಗೆ ಮರಳಲು ಮೂರು ವರ್ಷದಿಂದ ಯೋಚನೆ ಮಾಡುತ್ತಿದ್ದೆವು. ನಾವು ಹಿಂದೂ ಧರ್ಮದಲ್ಲಿ ಪೂರ್ಣ ನಂಬಿಕೆ ಇರಿಸಿದ್ದು, ಯಾವುದೇ ಒತ್ತಡದಿಂದ ಮತಾಂತರಗೊಂಡಿಲ್ಲ ಎಂದು ಹೇಳಿದ್ದಾರೆ.</p><p>ಬೃಂದಾವನದ ಶ್ರೀ ಜಿ ವಟಿಕಾ ಕಾಲೋನಿಯಲ್ಲಿರುವ ಭಗವತ್ ಧಾಮ್ ಆಶ್ರಮದಲ್ಲಿದ ನಡೆದ ಈ ಕಾರ್ಯಕ್ರಮವನ್ನು ಹಿಂದೂ ಯುವ ವಾಹಿನಿ ಸಂಘಟಿಸಿತ್ತು. ಸುಮಾರು ಒಂದು ಗಂಟೆ ನಡೆದ ಹೋಮ–ಯಜ್ಞದಲ್ಲಿ ಜಗದೀಶ್ ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಪಾಲ್ಗೊಂಡಿದ್ದರು.</p>.ರಾಜಸ್ಥಾನ: ಮತಾಂತರ ನಿಷೇಧ ಮಸೂದೆ ಮಂಡನೆ. <p>ಮತಾಂತರದ ನಂತರ, ಜಾಕೀರ್ – ಜಗದೀಶ್, ಅವರ ಪತ್ನಿ ಗುಡ್ಡಿ – ಗುಡಿಯಾ, ಹಿರಿಯ ಮಗ ಅನ್ವರ್ – ಸುಮಿತ್, ಕಿರಿಯ ಮಗ ರನ್ವರ್ – ರಾಮೇಶ್ವರ್, ಸೊಸೆ ಸಬೀರಾ – ಸಾವಿತ್ರಿ, ಮತ್ತು ಮೊಮ್ಮಕ್ಕಳಾದ ಸಬೀರ್, ಜೋಯಾ ಮತ್ತು ನೇಹಾ ಅವರನ್ನು ಕ್ರಮವಾಗಿ ಶತ್ರುಘ್ನ, ಸರಸ್ವತಿ ಮತ್ತು ಸ್ನೇಹಾ ಎಂದು ಹೆಸರು ಬದಲಿಸಲಾಗಿದೆ.</p>.ಗರ್ಲ್ಫ್ರೆಂಡ್ ಜೊತೆ ಮದುವೆಗೆ ಹಿಂದೂ ಧರ್ಮಕ್ಕೆ ಮತಾಂತರ: ಸದ್ಧಾಂ ಈಗ ಶಿವಶಂಕರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಥುರಾ:</strong> ಮಥುರಾದ ಜಮುನಪುರದ ಬೃಂದಾವನದ ಆಶ್ರಮವೊಂದರಲ್ಲಿ ಗುರುವಾರ ನಡೆದ ವೈದಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಕುಟುಂಬವೊಂದರ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.</p><p>ಮತಾಂತರಗೊಂಡವರು ತಮ್ಮ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದು, ತಮ್ಮ ಪೂರ್ವಜರ ನಂಬಿಕೆಗೆ ಮರಳಲು ಸ್ವಯಂ ಪ್ರೇರಿತವಾಗಿ ಮತಾಂತರಗೊಂಡಿದ್ದಾಗಿ ತಿಳಿಸಿದ್ದಾರೆ.</p>.ಬೀದರ್ | ಸಿದ್ದರಾಮಯ್ಯ ಮುಸ್ಲಿಮರಾಗಿ ಮತಾಂತರ ಆಗಲಿ: ಭಗವಂತ ಖೂಬಾ.<p>ಕುಟುಂಬದ ಮುಖ್ಯಸ್ಥರಾದ 50 ವರ್ಷದ ಜಾಕೀರ್ ತಮ್ಮ ಹೆಸರನ್ನು ಜಗದೀಶ್ ಎಂದು ಬದಲಿಸಿಕೊಂಡಿದ್ದಾರೆ. ಮೂಲತಃ ಶೇರ್ಗಢ ಪ್ರದೇಶದ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾವನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೇ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.</p><p>‘ಮೊಘಲ್ ಕಾಲದವರೆಗೂ ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಒತ್ತಡದಿಂದಾಗಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು. ಆದರೆ ಮನಸ್ಸು, ಮಾತು ಮತ್ತು ಕಾರ್ಯದಲ್ಲಿ ನಾನು ಕಾಳಿ ದೇವಿಯನ್ನು ಪೂಜಿಸುವುದನ್ನು ಮುಂದುವರೆಸಿದ್ದೇನೆ. ಗ್ರಾಮಸ್ಥರು ನನ್ನನ್ನು 'ಗತ್ ಜಿ ಎಂದು ಕರೆಯುತ್ತಾರೆ’ ಎಂದು ಜಗದೀಶ್ ತಿಳಿಸಿದ್ದಾರೆ.</p>.ಶ್ರೀರಂಗಪಟ್ಟಣ | ಮತಾಂತರ ಆರೋಪ, ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ.<p>ನನ್ನ ಕುಟುಂಬ ಮೂಲತಃ ಗುರ್ಜರ್ ಸಮುದಾಯಕ್ಕೆ ಸೇರಿದವರಾಗಿದ್ದು, ಮೂಲ ಬೇರಿಗೆ ಮರಳಲು ಮೂರು ವರ್ಷದಿಂದ ಯೋಚನೆ ಮಾಡುತ್ತಿದ್ದೆವು. ನಾವು ಹಿಂದೂ ಧರ್ಮದಲ್ಲಿ ಪೂರ್ಣ ನಂಬಿಕೆ ಇರಿಸಿದ್ದು, ಯಾವುದೇ ಒತ್ತಡದಿಂದ ಮತಾಂತರಗೊಂಡಿಲ್ಲ ಎಂದು ಹೇಳಿದ್ದಾರೆ.</p><p>ಬೃಂದಾವನದ ಶ್ರೀ ಜಿ ವಟಿಕಾ ಕಾಲೋನಿಯಲ್ಲಿರುವ ಭಗವತ್ ಧಾಮ್ ಆಶ್ರಮದಲ್ಲಿದ ನಡೆದ ಈ ಕಾರ್ಯಕ್ರಮವನ್ನು ಹಿಂದೂ ಯುವ ವಾಹಿನಿ ಸಂಘಟಿಸಿತ್ತು. ಸುಮಾರು ಒಂದು ಗಂಟೆ ನಡೆದ ಹೋಮ–ಯಜ್ಞದಲ್ಲಿ ಜಗದೀಶ್ ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಪಾಲ್ಗೊಂಡಿದ್ದರು.</p>.ರಾಜಸ್ಥಾನ: ಮತಾಂತರ ನಿಷೇಧ ಮಸೂದೆ ಮಂಡನೆ. <p>ಮತಾಂತರದ ನಂತರ, ಜಾಕೀರ್ – ಜಗದೀಶ್, ಅವರ ಪತ್ನಿ ಗುಡ್ಡಿ – ಗುಡಿಯಾ, ಹಿರಿಯ ಮಗ ಅನ್ವರ್ – ಸುಮಿತ್, ಕಿರಿಯ ಮಗ ರನ್ವರ್ – ರಾಮೇಶ್ವರ್, ಸೊಸೆ ಸಬೀರಾ – ಸಾವಿತ್ರಿ, ಮತ್ತು ಮೊಮ್ಮಕ್ಕಳಾದ ಸಬೀರ್, ಜೋಯಾ ಮತ್ತು ನೇಹಾ ಅವರನ್ನು ಕ್ರಮವಾಗಿ ಶತ್ರುಘ್ನ, ಸರಸ್ವತಿ ಮತ್ತು ಸ್ನೇಹಾ ಎಂದು ಹೆಸರು ಬದಲಿಸಲಾಗಿದೆ.</p>.ಗರ್ಲ್ಫ್ರೆಂಡ್ ಜೊತೆ ಮದುವೆಗೆ ಹಿಂದೂ ಧರ್ಮಕ್ಕೆ ಮತಾಂತರ: ಸದ್ಧಾಂ ಈಗ ಶಿವಶಂಕರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>