ಮಸೂದೆ ಅಂಗೀಕರಿಸುವಾಗ ವಿಪಕ್ಷಗಳ ಸದಸ್ಯರ ವರ್ತನೆ ಗೂಂಡಾಗಿರಿಯಂತೆ ಇತ್ತು. ಅವರ ನಡವಳಿಕೆ ಪ್ರಜಾಪ್ರಭುತ್ವವನ್ನು ಅವಮಾನಿಸಿದೆ
ಶಿವರಾಜ್ ಸಿಂಗ್ ಚೌಹಾಣ್ ಗ್ರಾಮೀಣಾಭಿವೃದ್ಧಿ ಸಚಿವ
ಮೋದಿ ಸರ್ಕಾರವು ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದೆಯಲ್ಲದೆ ಭಾರತದ ಹಳ್ಳಿಗಳಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಕಾರಣವಾದ ಯೋಜನೆಯನ್ನು ಹತ್ತಿಕ್ಕಿದೆ. ಸರ್ವಾಧಿಕಾರಿ ಧೋರಣೆಯ ಸರ್ಕಾರದ ಈ ದಬ್ಬಾಳಿಕೆಯ ವಿರುದ್ಧ ನಾವು ಬೀದಿಗಿಳಿದು ಹೋರಾಡುತ್ತೇವೆ. ಇದು ‘ನರೇಗಾ’ದ ಮರುನಾಮಕರಣವಷ್ಟೇ ಅಲ್ಲ. ಬದಲಾಗಿ ಇದು ವಿಶ್ವದ ಅತಿದೊಡ್ಡ ಉದ್ಯೋಗ ಯೋಜನೆಯ ವ್ಯವಸ್ಥಿತ ಕೊಲೆಯಾಗಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಎಲ್ಲ ವಿರೋಧ ಪಕ್ಷಗಳು ಈ ಮಸೂದೆಯನ್ನು ಬಲವಾಗಿ ವಿರೋಧಿಸುತ್ತವೆ. ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿರುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಲ್ಲದೆ ಬೇರೇನೂ ಅಲ್ಲ. ಮುಂದಿನ ಕೆಲವು ದಿನಗಳಲ್ಲಿ ಈ ಉದ್ಯೋಗ ಖಾತರಿ ಯೋಜನೆಯ ಅಂತ್ಯ ಖಚಿತ ಎಂಬುದು ಈ ಮಸೂದೆಯನ್ನು ಎಚ್ಚರಿಕೆಯಿಂದ ಓದುವ ಯಾರಿಗಾದರೂ ತಿಳಿಯುತ್ತದೆ. ರಾಜ್ಯಗಳ ಮೇಲೆ ಹೊರೆ ಬಿದ್ದ ತಕ್ಷಣ ಯೋಜನೆ ನಿಧಾನವಾಗಿ ಹಳ್ಳ ಹಿಡಿಯುತ್ತದೆ. ಏಕೆಂದರೆ ರಾಜ್ಯ ಸರ್ಕಾರಗಳ ಬಳಿ ಸಾಕಷ್ಟು ಹಣವಿಲ್ಲ