<p><strong>ಬೆಂಗಳೂರು</strong>: ಬ್ರಿಟನ್ ಪ್ರಜೆ ವಿಶ್ವಾಸ್ ಎಂಬವರು ವಿಮಾನ ದುರಂತದ ನಂತರವೂ ಬದುಕುಳಿದಿದ್ದಾರೆ. </p>.<p>ಅಹಮದಾಬಾದ್ನ ಅಸಾವರದಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ತಮ್ಮವರಿಗಾಗಿ ಜನ ಹುಡುಕುತ್ತಿದ್ದರು. ಆಸ್ಪತ್ರೆಯ ಜನರಲ್ ವಾರ್ಡ್ನ ಹಾಸಿಗೆಯ ಮೇಲೆ ಮಲಗಿದ್ದ ವಿಶ್ವಾಸ್ ತಾವು ದುರಂತದಲ್ಲಿ ಪಾರಾಗಿರುವುದಾಗಿ ಹೇಳಿದರು ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. </p>.<p>ಕೆಲವು ದಿನಗಳ ಹಿಂದೆ ವಿಶ್ವಾಸ್ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಸಹೋದರನ ಜತೆ ದಿಯು ದ್ವೀಪಕ್ಕೆ ಪ್ರವಾಸಕ್ಕೆ ಹೋಗಿಬಂದ ನಂತರ ಲಂಡನ್ಗೆ ಮರಳುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.</p>.<p>‘11ಎ’ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಅವರಲ್ಲಿ ಬೋರ್ಡಿಂಗ್ ಪಾಸ್ ಕೂಡ ಜತನವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.</p>.<p>ವಿಶ್ವಾಸ್ ಅವರ ಜತೆ ಅವರ ಸಹೋದರ ಅಜಯ್ ಕುಮಾರ್ ರಮೇಶ್ (45) ಕೂಡ ಲಂಡನ್ಗೆ ಪ್ರಯಾಣಿಸುತ್ತಿದ್ದರು. ‘ಸಹೋದರನು ಬೇರೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ. ಅವನು ಎಲ್ಲಿದ್ದಾನೋ ಹುಡುಕಬೇಕಿದೆ’ ಎಂದೂ ವಿಶ್ವಾಸ್ ಹೇಳಿದ್ದಾರೆ. </p>.<p>‘ವಿಮಾನ ಟೇಕಾಫ್ ಆಗಿ ಸುಮಾರು ಮೂವತ್ತು ಸೆಕೆಂಡ್ಗಳಲ್ಲೇ ನೆಲಕ್ಕೆ ಅಪ್ಪಳಿಸಿತು. ಆ ಸಂದರ್ಭದಲ್ಲಿ ನಾನು ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಜಿಗಿದೆ. ಏಳುವಷ್ಟರಲ್ಲಿ ಸುತ್ತಲೂ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶವಗಳು ಕೂಡ ಕಂಡವು. ಭಯಗೊಂಡು, ಎದ್ದು ಓಡಲಾರಂಭಿಸಿದೆ. ಆಗ ಕೆಲವರು ನನ್ನನ್ನು ಹಿಡಿದುಕೊಂಡು, ಆಂಬುಲೆನ್ಸ್ ಒಳಗೆ ಕರೆದೊಯ್ದರು’ ಎಂದು ವಿಶ್ವಾಸ್ ಮಾಹಿತಿ ನೀಡಿದ್ದಾರೆ. </p>.<p>ವಿಮಾನವು ನೆಲಕ್ಕೆ ಅಪ್ಪಳಿಸಿದಾಗ ಉಂಟಾದ ಪರಿಣಾಮದಿಂದಾಗಿ ಅವರ ಮುಖದ ಮೇಲೆ ಗಾಯಗಳಾಗಿವೆ. ಎದೆ, ಕಣ್ಣು ಹಾಗೂ ಪಾದಗಳಿಗೂ ಪೆಟ್ಟಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. </p>.<p>ಇಪ್ಪತ್ತು ವರ್ಷಗಳಿಂದ ವಿಶ್ವಾಸ್ ಅವರು ಬ್ರಿಟನ್ನಲ್ಲಿ ನೆಲಸಿದ್ದು, ಅವರ ಪತ್ನಿ ಹಾಗೂ ಮಗು ಅಲ್ಲಿಯೇ ಇದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬ್ರಿಟನ್ ಪ್ರಜೆ ವಿಶ್ವಾಸ್ ಎಂಬವರು ವಿಮಾನ ದುರಂತದ ನಂತರವೂ ಬದುಕುಳಿದಿದ್ದಾರೆ. </p>.<p>ಅಹಮದಾಬಾದ್ನ ಅಸಾವರದಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ತಮ್ಮವರಿಗಾಗಿ ಜನ ಹುಡುಕುತ್ತಿದ್ದರು. ಆಸ್ಪತ್ರೆಯ ಜನರಲ್ ವಾರ್ಡ್ನ ಹಾಸಿಗೆಯ ಮೇಲೆ ಮಲಗಿದ್ದ ವಿಶ್ವಾಸ್ ತಾವು ದುರಂತದಲ್ಲಿ ಪಾರಾಗಿರುವುದಾಗಿ ಹೇಳಿದರು ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. </p>.<p>ಕೆಲವು ದಿನಗಳ ಹಿಂದೆ ವಿಶ್ವಾಸ್ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಸಹೋದರನ ಜತೆ ದಿಯು ದ್ವೀಪಕ್ಕೆ ಪ್ರವಾಸಕ್ಕೆ ಹೋಗಿಬಂದ ನಂತರ ಲಂಡನ್ಗೆ ಮರಳುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.</p>.<p>‘11ಎ’ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಅವರಲ್ಲಿ ಬೋರ್ಡಿಂಗ್ ಪಾಸ್ ಕೂಡ ಜತನವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.</p>.<p>ವಿಶ್ವಾಸ್ ಅವರ ಜತೆ ಅವರ ಸಹೋದರ ಅಜಯ್ ಕುಮಾರ್ ರಮೇಶ್ (45) ಕೂಡ ಲಂಡನ್ಗೆ ಪ್ರಯಾಣಿಸುತ್ತಿದ್ದರು. ‘ಸಹೋದರನು ಬೇರೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ. ಅವನು ಎಲ್ಲಿದ್ದಾನೋ ಹುಡುಕಬೇಕಿದೆ’ ಎಂದೂ ವಿಶ್ವಾಸ್ ಹೇಳಿದ್ದಾರೆ. </p>.<p>‘ವಿಮಾನ ಟೇಕಾಫ್ ಆಗಿ ಸುಮಾರು ಮೂವತ್ತು ಸೆಕೆಂಡ್ಗಳಲ್ಲೇ ನೆಲಕ್ಕೆ ಅಪ್ಪಳಿಸಿತು. ಆ ಸಂದರ್ಭದಲ್ಲಿ ನಾನು ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಜಿಗಿದೆ. ಏಳುವಷ್ಟರಲ್ಲಿ ಸುತ್ತಲೂ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶವಗಳು ಕೂಡ ಕಂಡವು. ಭಯಗೊಂಡು, ಎದ್ದು ಓಡಲಾರಂಭಿಸಿದೆ. ಆಗ ಕೆಲವರು ನನ್ನನ್ನು ಹಿಡಿದುಕೊಂಡು, ಆಂಬುಲೆನ್ಸ್ ಒಳಗೆ ಕರೆದೊಯ್ದರು’ ಎಂದು ವಿಶ್ವಾಸ್ ಮಾಹಿತಿ ನೀಡಿದ್ದಾರೆ. </p>.<p>ವಿಮಾನವು ನೆಲಕ್ಕೆ ಅಪ್ಪಳಿಸಿದಾಗ ಉಂಟಾದ ಪರಿಣಾಮದಿಂದಾಗಿ ಅವರ ಮುಖದ ಮೇಲೆ ಗಾಯಗಳಾಗಿವೆ. ಎದೆ, ಕಣ್ಣು ಹಾಗೂ ಪಾದಗಳಿಗೂ ಪೆಟ್ಟಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. </p>.<p>ಇಪ್ಪತ್ತು ವರ್ಷಗಳಿಂದ ವಿಶ್ವಾಸ್ ಅವರು ಬ್ರಿಟನ್ನಲ್ಲಿ ನೆಲಸಿದ್ದು, ಅವರ ಪತ್ನಿ ಹಾಗೂ ಮಗು ಅಲ್ಲಿಯೇ ಇದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>