2004 ರಿಂದ 2013ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಜ್ಯಕ್ಕೆ ₹ 2,976.27 ಕೋಟಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಆರ್ಎಫ್) ನೀಡಿದ್ದಾರೆ. 2014ರಿಂದ 2023ರವರೆಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಾಜ್ಯಕ್ಕೆ ₹ 12,788.7 ಕೋಟಿ ಎನ್ಡಿಆರ್ಎಫ್ ನಿಧಿ ನೀಡಿದೆ. ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆಯಾ? ಎಂದು ಪ್ರಶ್ನಿಸಿದರು.
ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚೆನ್ನಾಗಿ ಜಾನಪದ ನೃತ್ಯ ಮಾಡಿದರು. ನೃತ್ಯ ಮಾಡಿದ್ದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಇದು ನೃತ್ಯ ಮಾಡುವ ಸಮಯವಾ? ಮುಖ್ಯಮಂತ್ರಿ ಅವರು ನೃತ್ಯದಲ್ಲಿ ತಾಳ ತಪ್ಪಲಿಲ್ಲ. ಆದರೆ ನಿಮ್ಮ ಸರ್ಕಾರ ತಾಳತಪ್ಪಿದೆ. ಯಾವುದಕ್ಕೆ ಆದ್ಯತೆ ಕೊಡಬೇಕಾಗಿತ್ತೊ ಅದಕ್ಕೆ ಗಮನ ನೀಡುತ್ತಿಲ್ಲ ಎಂದು ದೂರಿದರು.
ನನ್ನೊಳಗೆ ಒಬ್ಬ ಒಳ್ಳೆಯ ಕಲಾವಿದ ಇದ್ದಾನೆ ಎನ್ನುವುದನ್ನು ನೃತ್ಯದ ಮೂಲಕ ಹೊರ ಜಗತ್ತಿಗೆ ತೋರಿಸಿದರು. ಆದರೆ ಮಾನವೀಯ ಸರ್ಕಾರ ಯಾವ ರೀತಿ ನಡೆದುಕೊಳ್ಳಬೇಕೊ ಆ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು.