‘ಮಾತುಕತೆ ಸಂದರ್ಭದಲ್ಲಿ ಇಸ್ರೇಲ್–ಹಮಾಸ್ ನಡುವಿನ ಯುದ್ಧದ ಪರಿಸ್ಥಿತಿಯನ್ನು ಹೈಮ್ ಹಂಚಿಕೊಂಡರು. ಹಮಾಸ್ ವಶದಲ್ಲಿರುವ ಮುಗ್ದ ಜನರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳನ್ನು ಹೈಮ್ ವಿವರಿಸಿದರು. ಯುದ್ಧ ಪ್ರದೇಶದಲ್ಲಿ ಶಾಂತಿ ನೆಲಸಲಿ. ಅಪಹರಿಸಿರುವವರನ್ನು ಹಮಾಸ್ ಸುರಕ್ಷಿತವಾಗಿ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬ್ಯಾಟರಿ ಕಾರಿನಲ್ಲಿ ಹೈಮ್ ಅವರನ್ನು ಕೂರಿಸಿಕೊಂಡು ಕುಮಾರಸ್ವಾಮಿ ಅವರು ತಮ್ಮ ತೋಟವನ್ನು ತೋರಿಸಿದರು. ತಾವು ಕೈಗೊಂಡ ಕೃಷಿಯನ್ನು ಅವರಿಗೆ ವಿವರಿಸಿದರು.
ಭೇಟಿಯ ನೆನಪಿಗಾಗಿ ಹೈಮ್ ಅವರು ಕುಮಾರಸ್ವಾಮಿ ಅವರಿಗೆ ಇಸ್ರೇಲ್ ಎಂದು ಬರೆದ ಚೀದಲ್ಲಿ ಒಂದಷ್ಟು ಉಡುಗೊರೆ ನೀಡಿದರು. ಹೈಮ್ ಅವರಿಗೆ ಏಲಕ್ಕಿ ಹಾರ ಹಾಕಿ ಸನ್ಮಾನ ಮಾಡಿದ ಕುಮಾರಸ್ವಾಮಿ, ಬಾಳೆಗೊನೆಯನ್ನು ಕುಮಾರಸ್ವಾಮಿ ಉಡುಗೊರೆಯಾಗಿ ನೀಡಿದ್ದಾರೆ.