<p><strong>ಇಸ್ಲಾಮಾಬಾದ್:</strong> ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ನಂಟು ಇರುವುದಾಗಿ ಭಾರತ ಮಾಡಿರುವ ಆರೋಪಗಳನ್ನು ತಿರಸ್ಕರಿಸುವ ನಿರ್ಣಯವನ್ನು ಪಾಕಿಸ್ತಾನದ ಸೆನೆಟ್ ಶುಕ್ರವಾರ ಅಂಗೀಕರಿಸಿದೆ. </p><p>ಭಾರತ ಮಾಡಿರುವ ಆರೋಪ ಕ್ಷುಲ್ಲಕ ಮತ್ತು ಆಧಾರ ರಹಿತವಾದ ಪ್ರಯತ್ನಗಳೆಂದು ಅದು ಹೇಳಿದೆ. </p><p>ಉಪಪ್ರಧಾನಿ ಇಶಾಕ್ ದಾರ್ ನಿರ್ಣಯ ಮಂಡಿಸಿದರು. ಸಂಸತ್ತಿನ ಮೇಲ್ಮನೆಯಲ್ಲಿ ಈ ನಿರ್ಣಯವನ್ನು ಎಲ್ಲ ಪಕ್ಷಗಳು ಸಂಪೂರ್ಣ ಬೆಂಬಲಿಸಿದವು.</p><p>ಜಲ ಭಯೋತ್ಪಾದನೆ ಅಥವಾ ಮಿಲಿಟರಿ ಪ್ರಚೋದನೆ ಸೇರಿ ಯಾವುದೇ ಆಕ್ರಮಣದ ವಿರುದ್ಧ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಪಾಕಿಸ್ತಾನವು ಸಂಪೂರ್ಣ ಸಮರ್ಥವಾಗಿದೆ ಹಾಗೂ ಸಿದ್ಧವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.</p><p>ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿಯುವ ಭಾರತದ ಘೋಷಣೆಯನ್ನು ಖಂಡಿಸಿ, ಈ ಕ್ರಮವು ಯುದ್ಧದ ಕೃತ್ಯಕ್ಕೆ ಸಮಾನವಾಗಿದೆ ಎಂದು ನಿರ್ಣಯದಲ್ಲಿ ಹೇಳಿದೆ.</p><p>ಇದಕ್ಕೂ ಮುನ್ನ, ವಿದೇಶಾಂಗ ಕಚೇರಿಯು ಈ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ 26 ದೇಶಗಳ ರಾಜತಾಂತ್ರಿಕರಿಗೆ ವಿವರಿಸಿದೆ ಎಂದು ಉಪ ಪ್ರಧಾನಿ ಸದನಕ್ಕೆ ಮಾಹಿತಿ ನೀಡಿದರು.</p>.Pahalgam Terror Attack: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕಪಿಲ್ ಸಿಬಲ್ ಮನವಿ.Bandipora Encounter: ಉಗ್ರರ ಸಹಚರನ ಹತ್ಯೆ, ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ನಂಟು ಇರುವುದಾಗಿ ಭಾರತ ಮಾಡಿರುವ ಆರೋಪಗಳನ್ನು ತಿರಸ್ಕರಿಸುವ ನಿರ್ಣಯವನ್ನು ಪಾಕಿಸ್ತಾನದ ಸೆನೆಟ್ ಶುಕ್ರವಾರ ಅಂಗೀಕರಿಸಿದೆ. </p><p>ಭಾರತ ಮಾಡಿರುವ ಆರೋಪ ಕ್ಷುಲ್ಲಕ ಮತ್ತು ಆಧಾರ ರಹಿತವಾದ ಪ್ರಯತ್ನಗಳೆಂದು ಅದು ಹೇಳಿದೆ. </p><p>ಉಪಪ್ರಧಾನಿ ಇಶಾಕ್ ದಾರ್ ನಿರ್ಣಯ ಮಂಡಿಸಿದರು. ಸಂಸತ್ತಿನ ಮೇಲ್ಮನೆಯಲ್ಲಿ ಈ ನಿರ್ಣಯವನ್ನು ಎಲ್ಲ ಪಕ್ಷಗಳು ಸಂಪೂರ್ಣ ಬೆಂಬಲಿಸಿದವು.</p><p>ಜಲ ಭಯೋತ್ಪಾದನೆ ಅಥವಾ ಮಿಲಿಟರಿ ಪ್ರಚೋದನೆ ಸೇರಿ ಯಾವುದೇ ಆಕ್ರಮಣದ ವಿರುದ್ಧ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಪಾಕಿಸ್ತಾನವು ಸಂಪೂರ್ಣ ಸಮರ್ಥವಾಗಿದೆ ಹಾಗೂ ಸಿದ್ಧವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.</p><p>ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿಯುವ ಭಾರತದ ಘೋಷಣೆಯನ್ನು ಖಂಡಿಸಿ, ಈ ಕ್ರಮವು ಯುದ್ಧದ ಕೃತ್ಯಕ್ಕೆ ಸಮಾನವಾಗಿದೆ ಎಂದು ನಿರ್ಣಯದಲ್ಲಿ ಹೇಳಿದೆ.</p><p>ಇದಕ್ಕೂ ಮುನ್ನ, ವಿದೇಶಾಂಗ ಕಚೇರಿಯು ಈ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ 26 ದೇಶಗಳ ರಾಜತಾಂತ್ರಿಕರಿಗೆ ವಿವರಿಸಿದೆ ಎಂದು ಉಪ ಪ್ರಧಾನಿ ಸದನಕ್ಕೆ ಮಾಹಿತಿ ನೀಡಿದರು.</p>.Pahalgam Terror Attack: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕಪಿಲ್ ಸಿಬಲ್ ಮನವಿ.Bandipora Encounter: ಉಗ್ರರ ಸಹಚರನ ಹತ್ಯೆ, ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>