ಸಣ್ಣಗಾತ್ರದ ಕೃಷಿಕರು, ವ್ಯಾಪಾರಿಗಳು, ಮೀನುಗಾರರು, ಭೂಹಿಡುವಳಿದಾರರು, ಮಹಿಳೆಯರು, ಅಶಕ್ತರು, ಕೂಲಿ ಕಾರ್ಮಿಕರು... ಹೀಗೆ- ಪರ್ಯಾಯ ಜೀವನೋಪಾಯ ಕಂಡುಕೊಳ್ಳ ಬೇಕಾದವರೆಲ್ಲರೂ, ಸಮರ್ಪಕವಾಗಿ ‘ಮರುಕಶಲ’ಗೊಳ್ಳುವ ತನಕ, ಅವರ ಜೀವನೋಪಾಯ ಸರ್ಕಾರಗಳ ಹೊಣೆ ಆಗಬೇಕು. ಅಲ್ಲಿಯ ತನಕ ಅವಶ್ಯಕತೆ ಇರುವ ಅರ್ಹರಿಗೆಲ್ಲರಿಗೂ ಸರ್ಕಾರವು ಕನಿಷ್ಠ ಆದಾಯ ಖಾತರಿ (ಯುಬಿಐ) ಒದಗಿಸಿದರೆ, ಅದನ್ನು ‘ಪಾಪ್ಯುಲಿಸ್ಟ್’ ಎಂದು ಹಣೆಪಟ್ಟಿ ಹಚ್ಚುವುದು ತಪ್ಪಾಗುತ್ತದೆ.