<p><strong>ಚೆನ್ನೈ:</strong> ರಚಿನ್ ರವೀಂದ್ರ ಅಜೇಯ ಅರ್ಧಶತಕ ಮತ್ತು ಋತುರಾಜ್ ಗಾಯಕವಾಡ ಅವರ ಮಿಂಚಿನ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿತು. </p><p>ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 4 ವಿಕೆಟ್ಗಳಿಂದ ಜಯಿಸಿತು. ಆದರೆ ಮುಂಬೈ ತಂಡದಲ್ಲಿ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ (32ಕ್ಕೆ3) ಅವರ ದಾಳಿಯಿಂದಾಗಿ ಚೆನ್ನೈ ತಂಡಕ್ಕೆ ಸುಲಭ ಜಯ ಒಲಿಯಲಿಲ್ಲ. </p><p>ರಚಿನ್ ಮತ್ತು ನಾಯಕ ಋತುರಾಜ್ 2ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು. ಎಂಟನೇ ಓವರ್ನಲ್ಲಿ ಋತುರಾಜ್ (53; 26ಎ, 4X6, 6X3) ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದ ವಿಘ್ನೇಷ್ ಜೊತೆಯಾಟ ಮುರಿದರು. ತಮ್ಮ ಇನ್ನೆರಡು ಓವರ್ಗಳಲ್ಲಿ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್ಗಳನ್ನೂ ವಿಘ್ನೇಷ್ ಗಳಿಸಿದರು. ಆದರೆ ಆರಂಭಿಕ ಬ್ಯಾಟರ್ ರಚಿನ್ (ಔಟಾಗದೇ 65; 45ಎ, 4X2, 6X4) ಮತ್ತು ರವೀಂದ್ರ ಜಡೇಜ (17; 18ಎ, 4X1) ಎಚ್ಚರಿಕೆಯಿಂದ ಆಡಿದರು. ವಿಘ್ನೇಷ್ ಹಾಕಿದ 18ನೇ ಓವರ್ನಲ್ಲಿ ರಚಿನ್ ಮುನ್ನುಗ್ಗಿ ಎರಡು ಸಿಕ್ಸರ್ ಬಾರಿಸಿದರು. </p><p>ಅದರೊಂದಿಗೆ ತಮ್ಮ ತಂಡದ ಗೆಲುವಿನ ಹಾದಿ ಸುಲಭಗೊಳಿಸಿದರು. ಜಯಕ್ಕೆ 4 ರನ್ಗಳ ಅಗತ್ಯವಿದ್ದಾಗ ಜಡೇಜ ರನ್ಔಟ್ ಆದರು. ಆಗ ಮಹೇಂದ್ರಸಿಂಗ್ ಧೋನಿ ಕ್ರೀಸ್ಗೆ ಬಂದರು. ಅವರು ಎರಡು ಎಸೆತಗಳನ್ನು ಎದುರಿಸಿದರು. ಆದರೆ ರನ್ ಗಳಿಸಲಿಲ್ಲ. </p><p><strong>ಮುಂಬೈ ಸಾಧಾರಣ ಮೊತ್ತ...</strong></p><p>ಚೆನ್ನೈ: ಭಾರತದ ಎಡಗೈ ವೇಗಿ ಖಲೀಲ್ ಅಹಮದ್ ಮತ್ತು ಅಫ್ಗಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ ಅವರಿಬ್ಬರ ಬೌಲಿಂಗ್ ಮುಂದೆ ಮುಂಬೈ ಇಂಡಿಯನ್ಸ್ ತಂಡವು ಸಾಧಾರಣ ಮೊತ್ತ ಗಳಿಸಿತು. </p><p>ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 155 ರನ್ ಗಳಿಸಿತು. </p><p>ಖಲೀಲ್ (29ಕ್ಕೆ3) ಹಾಕಿದ ಮೊದಲ ಓವರ್ನಲ್ಲಿಯೇ ‘ಹಿಟ್ಮ್ಯಾನ್’ ರೋಹಿತ್ ಶರ್ಮಾ ಅವರು ಶಿವಂ ದುಬೆಗೆ ಕ್ಯಾಚಿತ್ತರು. ಖಾತೆ ತೆರೆಯದೇ ಮರಳಿದರು. ಖಲೀಲ್ ತಮ್ಮ ಇನ್ನೊಂದು ಓವರ್ನಲ್ಲಿ ಹಾಕಿದ ಇನ್ಸ್ವಿಂಗರ್ಗೆ ರಿಯಾನ್ ರಿಕೆಲ್ಟನ್ (13; 7ಎ, 4X3) ಕ್ಲೀನ್ಬೌಲ್ಡ್ ಆದರು. ಆಫ್ಸ್ಪಿನ್ನರ್ ಅಶ್ವಿನ್ ತವರಿನಂಗಳದಲ್ಲಿ ಕಣಕ್ಕಿಳಿದರು. ವಿಲ್ ಜ್ಯಾಕ್ಸ್ (11; 7ಎ) ವಿಕೆಟ್ ಗಳಿಸಿದರು. </p><p>ಈ ಹಂತದಲ್ಲಿ ಜೊತೆಗೂಡಿದ ‘ಹಂಗಾಮಿ ನಾಯಕ’ ಸೂರ್ಯಕುಮಾರ್ ಯಾದವ್ (29; 26ಎ) ಮತ್ತು ತಿಲಕ್ ವರ್ಮಾ (31; 25ಎ) ಅವರು ಇನಿಂಗ್ಸ್ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. </p><p>ಆದರೆ ನೂರ್ ಅಹಮದ್ (18ಕ್ಕೆ4) ಅವರು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ಇದರಿಂದಾಗಿ ತಂಡವು ಕುಸಿಯುವ ಆತಂಕವಿತ್ತು. ಕೊನೆ ಹಂತದ ಓವರ್ಗಳಲ್ಲಿ ದೀಪಕ್ ಚಾಹರ್ 2 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಅಜೇಯ 28 ರನ್ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು. </p><p><strong>ಸಂಕ್ಷಿಪ್ತ ಸ್ಕೋರು: </strong></p><p><strong>ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 9ಕ್ಕೆ155 (ಸೂರ್ಯಕುಮಾರ್ ಯಾದವ್ 29, ತಿಲಕ್ ವರ್ಮಾ 31, ದೀಪಕ್ ಚಾಹರ್ ಔಟಾಗದೇ 28, ಖಲೀಲ್ ಅಹಮದ್ 29ಕ್ಕೆ3, ನೂರ್ ಅಹಮದ್ 18ಕ್ಕೆ4). </strong></p><p><strong>ಚೆನ್ನೈ ಸೂಪರ್ ಕಿಂಗ್ಸ್: 19.1 ಓವರ್ಗಳಲ್ಲಿ 6ಕ್ಕೆ158 (ರಚಿನ್ ರವೀಂದ್ರ ಅಜೇಯ 65, ಋತುರಾಜ್ ಗಾಯಕವಾಡ 53, ರವೀಂದ್ರ ಜಡೇಜ 17, ವಿಘ್ನೇಷ್ ಪುತ್ತೂರ್ 32ಕ್ಕೆ3) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ಗೆ 4 ವಿಕೆಟ್ಗಳ ಜಯ. ಪಂದ್ಯದ ಆಟಗಾರ: ನೂರ್ ಅಹಮದ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ರಚಿನ್ ರವೀಂದ್ರ ಅಜೇಯ ಅರ್ಧಶತಕ ಮತ್ತು ಋತುರಾಜ್ ಗಾಯಕವಾಡ ಅವರ ಮಿಂಚಿನ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿತು. </p><p>ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 4 ವಿಕೆಟ್ಗಳಿಂದ ಜಯಿಸಿತು. ಆದರೆ ಮುಂಬೈ ತಂಡದಲ್ಲಿ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ (32ಕ್ಕೆ3) ಅವರ ದಾಳಿಯಿಂದಾಗಿ ಚೆನ್ನೈ ತಂಡಕ್ಕೆ ಸುಲಭ ಜಯ ಒಲಿಯಲಿಲ್ಲ. </p><p>ರಚಿನ್ ಮತ್ತು ನಾಯಕ ಋತುರಾಜ್ 2ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು. ಎಂಟನೇ ಓವರ್ನಲ್ಲಿ ಋತುರಾಜ್ (53; 26ಎ, 4X6, 6X3) ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದ ವಿಘ್ನೇಷ್ ಜೊತೆಯಾಟ ಮುರಿದರು. ತಮ್ಮ ಇನ್ನೆರಡು ಓವರ್ಗಳಲ್ಲಿ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್ಗಳನ್ನೂ ವಿಘ್ನೇಷ್ ಗಳಿಸಿದರು. ಆದರೆ ಆರಂಭಿಕ ಬ್ಯಾಟರ್ ರಚಿನ್ (ಔಟಾಗದೇ 65; 45ಎ, 4X2, 6X4) ಮತ್ತು ರವೀಂದ್ರ ಜಡೇಜ (17; 18ಎ, 4X1) ಎಚ್ಚರಿಕೆಯಿಂದ ಆಡಿದರು. ವಿಘ್ನೇಷ್ ಹಾಕಿದ 18ನೇ ಓವರ್ನಲ್ಲಿ ರಚಿನ್ ಮುನ್ನುಗ್ಗಿ ಎರಡು ಸಿಕ್ಸರ್ ಬಾರಿಸಿದರು. </p><p>ಅದರೊಂದಿಗೆ ತಮ್ಮ ತಂಡದ ಗೆಲುವಿನ ಹಾದಿ ಸುಲಭಗೊಳಿಸಿದರು. ಜಯಕ್ಕೆ 4 ರನ್ಗಳ ಅಗತ್ಯವಿದ್ದಾಗ ಜಡೇಜ ರನ್ಔಟ್ ಆದರು. ಆಗ ಮಹೇಂದ್ರಸಿಂಗ್ ಧೋನಿ ಕ್ರೀಸ್ಗೆ ಬಂದರು. ಅವರು ಎರಡು ಎಸೆತಗಳನ್ನು ಎದುರಿಸಿದರು. ಆದರೆ ರನ್ ಗಳಿಸಲಿಲ್ಲ. </p><p><strong>ಮುಂಬೈ ಸಾಧಾರಣ ಮೊತ್ತ...</strong></p><p>ಚೆನ್ನೈ: ಭಾರತದ ಎಡಗೈ ವೇಗಿ ಖಲೀಲ್ ಅಹಮದ್ ಮತ್ತು ಅಫ್ಗಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ ಅವರಿಬ್ಬರ ಬೌಲಿಂಗ್ ಮುಂದೆ ಮುಂಬೈ ಇಂಡಿಯನ್ಸ್ ತಂಡವು ಸಾಧಾರಣ ಮೊತ್ತ ಗಳಿಸಿತು. </p><p>ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 155 ರನ್ ಗಳಿಸಿತು. </p><p>ಖಲೀಲ್ (29ಕ್ಕೆ3) ಹಾಕಿದ ಮೊದಲ ಓವರ್ನಲ್ಲಿಯೇ ‘ಹಿಟ್ಮ್ಯಾನ್’ ರೋಹಿತ್ ಶರ್ಮಾ ಅವರು ಶಿವಂ ದುಬೆಗೆ ಕ್ಯಾಚಿತ್ತರು. ಖಾತೆ ತೆರೆಯದೇ ಮರಳಿದರು. ಖಲೀಲ್ ತಮ್ಮ ಇನ್ನೊಂದು ಓವರ್ನಲ್ಲಿ ಹಾಕಿದ ಇನ್ಸ್ವಿಂಗರ್ಗೆ ರಿಯಾನ್ ರಿಕೆಲ್ಟನ್ (13; 7ಎ, 4X3) ಕ್ಲೀನ್ಬೌಲ್ಡ್ ಆದರು. ಆಫ್ಸ್ಪಿನ್ನರ್ ಅಶ್ವಿನ್ ತವರಿನಂಗಳದಲ್ಲಿ ಕಣಕ್ಕಿಳಿದರು. ವಿಲ್ ಜ್ಯಾಕ್ಸ್ (11; 7ಎ) ವಿಕೆಟ್ ಗಳಿಸಿದರು. </p><p>ಈ ಹಂತದಲ್ಲಿ ಜೊತೆಗೂಡಿದ ‘ಹಂಗಾಮಿ ನಾಯಕ’ ಸೂರ್ಯಕುಮಾರ್ ಯಾದವ್ (29; 26ಎ) ಮತ್ತು ತಿಲಕ್ ವರ್ಮಾ (31; 25ಎ) ಅವರು ಇನಿಂಗ್ಸ್ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. </p><p>ಆದರೆ ನೂರ್ ಅಹಮದ್ (18ಕ್ಕೆ4) ಅವರು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ಇದರಿಂದಾಗಿ ತಂಡವು ಕುಸಿಯುವ ಆತಂಕವಿತ್ತು. ಕೊನೆ ಹಂತದ ಓವರ್ಗಳಲ್ಲಿ ದೀಪಕ್ ಚಾಹರ್ 2 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಅಜೇಯ 28 ರನ್ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು. </p><p><strong>ಸಂಕ್ಷಿಪ್ತ ಸ್ಕೋರು: </strong></p><p><strong>ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 9ಕ್ಕೆ155 (ಸೂರ್ಯಕುಮಾರ್ ಯಾದವ್ 29, ತಿಲಕ್ ವರ್ಮಾ 31, ದೀಪಕ್ ಚಾಹರ್ ಔಟಾಗದೇ 28, ಖಲೀಲ್ ಅಹಮದ್ 29ಕ್ಕೆ3, ನೂರ್ ಅಹಮದ್ 18ಕ್ಕೆ4). </strong></p><p><strong>ಚೆನ್ನೈ ಸೂಪರ್ ಕಿಂಗ್ಸ್: 19.1 ಓವರ್ಗಳಲ್ಲಿ 6ಕ್ಕೆ158 (ರಚಿನ್ ರವೀಂದ್ರ ಅಜೇಯ 65, ಋತುರಾಜ್ ಗಾಯಕವಾಡ 53, ರವೀಂದ್ರ ಜಡೇಜ 17, ವಿಘ್ನೇಷ್ ಪುತ್ತೂರ್ 32ಕ್ಕೆ3) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ಗೆ 4 ವಿಕೆಟ್ಗಳ ಜಯ. ಪಂದ್ಯದ ಆಟಗಾರ: ನೂರ್ ಅಹಮದ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>