<p><strong>ನವದೆಹಲಿ</strong>: ರೇಲ್ವೆಸ್ ತಂಡದ ಎದುರು ಇದೇ 30ರಿಂದ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೊಹ್ಲಿ ಸಮ್ಮತಿಸಲಿಲ್ಲ. ಸದ್ಯ ತಂಡವನ್ನು ಮುನ್ನಡೆಸುತ್ತಿರುವ ಆಯುಷ್ ಬಡೋನಿ ಅವರೇ ನಾಯಕರಾಗಿ ಮುಂದುವರಿಯಲಿ ಎಂದು ಹೇಳಿದ್ದಾರೆ. </p>.<p>12 ವರ್ಷಗಳ ನಂತರ ಅವರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. ಅದಕ್ಕಾಗಿ ಮಂಗಳವಾರ ಅಭ್ಯಾಸ ಆರಂಭಿಸಿದರು. ತಮ್ಮ ತವರು ದೆಹಲಿ ತಂಡದ ಆಟಗಾರರೊಂಂದಿಗೆ ತಾಲೀಮು ನಡೆಸಿದರು. </p>.<p>‘ತಂಡದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ವಿರಾಟ್ ಅವರನ್ನು ಕೇಳಿದೆವು. ಆದರೆ ಅವರು ಆಯುಷ್ ಅವರೇ ಮುಂದುವರಿಯಬೇಕು ಎಂದಷ್ಟೇ ತಿಳಿಸಿದರು’ ಎಂದು ಡಿಡಿಸಿಎ ಮೂಲಗಳು ತಿಳಿಸಿವೆ. </p>.<p>ಕೊಹ್ಲಿ ಅವರು ಆಡುತ್ತಿರುವುದರಿಂದ ಈ ಪಂದ್ಯದ ನೇರಪ್ರಸಾರವನ್ನು ಜಿಯೊ ಸಿನಿಮಾ ಆ್ಯಪ್ ನೀಡಲಿದೆ. </p>.<p>ಬಿಸಿಸಿಐ ನಿಯಮದ ಪ್ರಕಾರ ರಣಜಿ ಟೂರ್ನಿ ಸುತ್ತಿನಲ್ಲಿರುವ ಮಹತ್ವದ ಪಂದ್ಯವನ್ನು ಟಿ.ವಿ ಮತ್ತು ಆ್ಯಪ್ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಈ ಸುತ್ತಿನಲ್ಲಿ ಕರ್ನಾಟಕ ಮತ್ತು ಹರಿಯಾಣ ಪಂದ್ಯವನ್ನು ನೇರಪ್ರಸಾರ ಮತ್ತು ಲೈವ್ ಸ್ಟ್ರೀಮ್ ಮಾಡಲು ನಿಗಿದಿಯಾಗಿದೆ. </p>.<p>ಪಂಜಾಬ್ –ಬಂಗಾಲ ಮತ್ತು ಬರೋಡಾ–ಜಮ್ಮುಕಾಶ್ಮೀರ ತಂಡಗಳ ನಡುವಣ ಪಂದ್ಯಗಳನ್ನು ಆ್ಯಪ್ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಈ ವೇಳಾಪಟ್ಟಿಯು ಪೂರ್ವನಿಗದಿಯಾಗಿರುತ್ತದೆ. ಒಂದೊಮ್ಮೆ ಕೊಹ್ಲಿ ಆಡದೇ ಹೋಗಿದ್ದರೆ ಈ ಪಂದ್ಯವು ನೇರಪ್ರಸಾರಗೊಳ್ಳುವ ಸಾಧ್ಯತೆಗಳು ಇರಲಿಲ್ಲ. ಆದರೆ ಕೊಹ್ಲಿ ಆಕರ್ಷಣೆಯಿಂದಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.</p>.<p>‘ಜಿಯೊ ಸಿನಿಮಾ ಆ್ಯಪ್ ಈ ಪಂದ್ಯವನ್ನು ನೇರಪ್ರಸಾರ ಮಾಡಲಿದೆ. ದೆಹಲಿಯಿಂದ ಹೊರಗಿರುವ ಕೊಹ್ಲಿ ಅಭಿಮಾನಿಗಳೂ ತಮ್ಮ ನೆಚ್ಚಿನ ತಾರೆಯ ಆಟವನ್ನು ಕಣ್ತುಂಬಿಕೊಳ್ಳಬಹುದು. ಅಭಿಮಾನಿಗಳು ಹೆಚ್ಚು ಚಿಂತಿಸಬೇಕಾಗಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಕೊಹ್ಲಿ ಅವರು 2012ರ ರಣಜಿ ಟೂರ್ನಿಯಲ್ಲಿ ಉತ್ತರಪ್ರದೇಶದ (ಗಾಜಿಯಾಬಾದಿನಲ್ಲಿ) ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಅದರ ನಂತರ ಅವರು ಈಗಲೇ ದೇಶಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. </p>.<p>ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಅವರು ದೆಹಲಿ ತಂಡದ ಸಹ ಆಟಗಾರರೊಂದಿಗೆ ಬೆರೆತು ಅಭ್ಯಾಸ ಮಾಡಿದರು. 15 ನಿಮಿಷ ಫುಟ್ಬಾಲ್ ಆಡಿ, ವಾರ್ಮ್ ಅಪ್ ವ್ಯಾಯಾಮಗಳನ್ನು ಮಾಡಿದರು. ಎಲ್ಲರೊಂದಿಗೆ ಸ್ಥಳೀಯ ಖಾದ್ಯ ಚಾವಲ್ ಖಡಿ (ಅನ್ನ ಸಾರು) ಊಟ ಮಾಡಿದರು.</p>.<p>ಕಳೆದ ಸುತ್ತಿನಲ್ಲಿ ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಅವರು ತಮ್ಮ ತವರಿನ ತಂಡಗಳಲ್ಲಿ ಆಡಿದ್ದರು. ಅವರು ಫೆಬ್ರುವರಿ 6ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ಆಡುವುದರಿಂದ ಮುಂಬರುವ ರಣಜಿ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರೇಲ್ವೆಸ್ ತಂಡದ ಎದುರು ಇದೇ 30ರಿಂದ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೊಹ್ಲಿ ಸಮ್ಮತಿಸಲಿಲ್ಲ. ಸದ್ಯ ತಂಡವನ್ನು ಮುನ್ನಡೆಸುತ್ತಿರುವ ಆಯುಷ್ ಬಡೋನಿ ಅವರೇ ನಾಯಕರಾಗಿ ಮುಂದುವರಿಯಲಿ ಎಂದು ಹೇಳಿದ್ದಾರೆ. </p>.<p>12 ವರ್ಷಗಳ ನಂತರ ಅವರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. ಅದಕ್ಕಾಗಿ ಮಂಗಳವಾರ ಅಭ್ಯಾಸ ಆರಂಭಿಸಿದರು. ತಮ್ಮ ತವರು ದೆಹಲಿ ತಂಡದ ಆಟಗಾರರೊಂಂದಿಗೆ ತಾಲೀಮು ನಡೆಸಿದರು. </p>.<p>‘ತಂಡದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ವಿರಾಟ್ ಅವರನ್ನು ಕೇಳಿದೆವು. ಆದರೆ ಅವರು ಆಯುಷ್ ಅವರೇ ಮುಂದುವರಿಯಬೇಕು ಎಂದಷ್ಟೇ ತಿಳಿಸಿದರು’ ಎಂದು ಡಿಡಿಸಿಎ ಮೂಲಗಳು ತಿಳಿಸಿವೆ. </p>.<p>ಕೊಹ್ಲಿ ಅವರು ಆಡುತ್ತಿರುವುದರಿಂದ ಈ ಪಂದ್ಯದ ನೇರಪ್ರಸಾರವನ್ನು ಜಿಯೊ ಸಿನಿಮಾ ಆ್ಯಪ್ ನೀಡಲಿದೆ. </p>.<p>ಬಿಸಿಸಿಐ ನಿಯಮದ ಪ್ರಕಾರ ರಣಜಿ ಟೂರ್ನಿ ಸುತ್ತಿನಲ್ಲಿರುವ ಮಹತ್ವದ ಪಂದ್ಯವನ್ನು ಟಿ.ವಿ ಮತ್ತು ಆ್ಯಪ್ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಈ ಸುತ್ತಿನಲ್ಲಿ ಕರ್ನಾಟಕ ಮತ್ತು ಹರಿಯಾಣ ಪಂದ್ಯವನ್ನು ನೇರಪ್ರಸಾರ ಮತ್ತು ಲೈವ್ ಸ್ಟ್ರೀಮ್ ಮಾಡಲು ನಿಗಿದಿಯಾಗಿದೆ. </p>.<p>ಪಂಜಾಬ್ –ಬಂಗಾಲ ಮತ್ತು ಬರೋಡಾ–ಜಮ್ಮುಕಾಶ್ಮೀರ ತಂಡಗಳ ನಡುವಣ ಪಂದ್ಯಗಳನ್ನು ಆ್ಯಪ್ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಈ ವೇಳಾಪಟ್ಟಿಯು ಪೂರ್ವನಿಗದಿಯಾಗಿರುತ್ತದೆ. ಒಂದೊಮ್ಮೆ ಕೊಹ್ಲಿ ಆಡದೇ ಹೋಗಿದ್ದರೆ ಈ ಪಂದ್ಯವು ನೇರಪ್ರಸಾರಗೊಳ್ಳುವ ಸಾಧ್ಯತೆಗಳು ಇರಲಿಲ್ಲ. ಆದರೆ ಕೊಹ್ಲಿ ಆಕರ್ಷಣೆಯಿಂದಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.</p>.<p>‘ಜಿಯೊ ಸಿನಿಮಾ ಆ್ಯಪ್ ಈ ಪಂದ್ಯವನ್ನು ನೇರಪ್ರಸಾರ ಮಾಡಲಿದೆ. ದೆಹಲಿಯಿಂದ ಹೊರಗಿರುವ ಕೊಹ್ಲಿ ಅಭಿಮಾನಿಗಳೂ ತಮ್ಮ ನೆಚ್ಚಿನ ತಾರೆಯ ಆಟವನ್ನು ಕಣ್ತುಂಬಿಕೊಳ್ಳಬಹುದು. ಅಭಿಮಾನಿಗಳು ಹೆಚ್ಚು ಚಿಂತಿಸಬೇಕಾಗಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಕೊಹ್ಲಿ ಅವರು 2012ರ ರಣಜಿ ಟೂರ್ನಿಯಲ್ಲಿ ಉತ್ತರಪ್ರದೇಶದ (ಗಾಜಿಯಾಬಾದಿನಲ್ಲಿ) ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಅದರ ನಂತರ ಅವರು ಈಗಲೇ ದೇಶಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. </p>.<p>ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಅವರು ದೆಹಲಿ ತಂಡದ ಸಹ ಆಟಗಾರರೊಂದಿಗೆ ಬೆರೆತು ಅಭ್ಯಾಸ ಮಾಡಿದರು. 15 ನಿಮಿಷ ಫುಟ್ಬಾಲ್ ಆಡಿ, ವಾರ್ಮ್ ಅಪ್ ವ್ಯಾಯಾಮಗಳನ್ನು ಮಾಡಿದರು. ಎಲ್ಲರೊಂದಿಗೆ ಸ್ಥಳೀಯ ಖಾದ್ಯ ಚಾವಲ್ ಖಡಿ (ಅನ್ನ ಸಾರು) ಊಟ ಮಾಡಿದರು.</p>.<p>ಕಳೆದ ಸುತ್ತಿನಲ್ಲಿ ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಅವರು ತಮ್ಮ ತವರಿನ ತಂಡಗಳಲ್ಲಿ ಆಡಿದ್ದರು. ಅವರು ಫೆಬ್ರುವರಿ 6ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ಆಡುವುದರಿಂದ ಮುಂಬರುವ ರಣಜಿ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>