<p>ಬೆಂಗಳೂರು: `ಭಾರತ ಕ್ರಿಕೆಟ್ ತಂಡದ ಸೋಲಿಗೆ ಆಟಗಾರರು ಆಯಾಸಗೊಂಡಿರುವುದು ಕೂಡ ಒಂದು ಕಾರಣ. ದಣಿವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದು ಪ್ರದರ್ಶನ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ~ ಎಂದು ಕ್ರೀಡಾ ಮನಃಶಾಸ್ತ್ರ ತಜ್ಞೆ ಡಾ.ಚೈತನ್ಯಾ ಶ್ರೀಧರ್ ನುಡಿದಿದ್ದಾರೆ.<br /> <br /> `ಆದರೆ ಭಾರತ ತಂಡದ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಆಯಾಸವೊಂದೇ ಕಾರಣ ಎಂದು ಹೇಳಲಾಗದು. ಇಂಗ್ಲೆಂಡ್ನ ವಾತಾವರಣ, ಅಲ್ಲಿನ ಪರಿಸ್ಥಿತಿ, ಆಟಗಾರರು ಗಾಯಗೊಂಡಿರುವುದು ಕೂಡ ಕಳಪೆ ಪ್ರದರ್ಶನಕ್ಕೆ ಕಾರಣ~ ಎಂದು ಬೆಂಗಳೂರಿನ ಚೈತನ್ಯಾ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.<br /> <br /> ಭಾರತದ ಖ್ಯಾತ `ಕ್ರೀಡಾ ಮನಃಶಾಸ್ತ್ರ ತಜ್ಞೆ~ ಎನಿಸಿಕೊಂಡಿರುವ ಚೈತನ್ಯಾ ಏಳು ವರ್ಷಗಳಿಂದ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. <br /> <br /> `ಕ್ರೀಡೆಯಲ್ಲಿ ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕವಾಗಿ ಸಮರ್ಥರಾಗಿರುವುದು ತುಂಬಾ ಮುಖ್ಯ. ಯಾವುದೇ ಸಂದರ್ಭದಲ್ಲೂ ನಕಾರಾತ್ಮಕವಾಗಿ ಯೋಚನೆ ಮಾಡಬಾರದು. ಜೊತೆಗೆ ಕ್ರೀಡೆಯಲ್ಲಿ ಎದುರಾಳಿ ಆಟಗಾರ ಏನು ಮಾಡುತ್ತಾನೆ ಎಂಬುದು ಮುಖ್ಯವಲ್ಲ; ಬದಲಾಗಿ ನಾವು ಯಾವ ರೀತಿ ಆ ಸನ್ನಿವೇಶಕ್ಕೆ ಸ್ಪಂದಿಸುತ್ತೇವೆ ಎಂಬುದು ಮುಖ್ಯ~ ಎಂದು ಅವರು ವಿವರಿಸಿದರು. <br /> <br /> ಚೈತನ್ಯಾ ಈಗ ಜೈನ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಂಗಳೂರು ವಿವಿಯಿಂದ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಅವರು ವೆಸ್ಟರ್ನ್ ಆಸ್ಟ್ರೇಲಿಯಾ ವಿವಿಯಲ್ಲಿ ಡಾಕ್ಟರೇಟ್ ಪದವಿ ಕೂಡ ಪಡೆದಿದ್ದಾರೆ. <br /> <br /> ಭಾರತ ಹಾಕಿ ಆಟಗಾರರ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಸಲಹೆಗಾರರಾಗಿ ನೇಮಕವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಗುರುವಾರ ತಂಡದ ಕೋಚ್ ಮೈಕಲ್ ನಾಬ್ಸ್ ಜೊತೆ ಮತ್ತೊವ್ಮೆು ಸಮಾಲೋಚನೆ ನಡೆಸಲಿದ್ದೇನೆ. ನಂತರ ಪ್ರತಿ ಆಟಗಾರರು ಹಾಗೂ ತಂಡದ ಜೊತೆ ಮಾತನಾಡಿ ಯೋಜನೆ ರೂಪಿಸುತ್ತೇನೆ~ ಎಂದು ಹೇಳಿದ್ದಾರೆ. <br /> <br /> ಚೈತನ್ಯಾ 2003ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕೂಡ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. <br /> <br /> <strong>ಪುರುಷರ ಹಾಕಿ ತಂಡಕ್ಕೆ ಸಲಹೆ ನೀಡಲಿರುವ ಮನಃಶಾಸ್ತ್ರ ತಜ್ಞೆ <br /> </strong>ನವದೆಹಲಿ (ಪಿಟಿಐ): ಖ್ಯಾತ ಕ್ರೀಡಾ ಮನಃಶಾಸ್ತ್ರ ತಜ್ಞೆ ಬೆಂಗಳೂರಿನ ಡಾ.ಚೈತನ್ಯಾ ಶ್ರೀಧರ್ ಅವರನ್ನು ಹಾಕಿ ಆಟಗಾರರ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಭಾರತ ತಂಡದ ಸಲಹೆಗಾರರನ್ನಾಗಿ ನೇಮಿಸಲು `ಹಾಕಿ ಇಂಡಿಯಾ~ ಮುಂದಾಗಿದೆ.<br /> <br /> ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ) ದಕ್ಷಿಣ ಕೇಂದ್ರದಲ್ಲಿ ನಡೆಯುತ್ತಿರುವ ಹಾಕಿ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ ಚೈತನ್ಯಾ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂಬಂಧ `ಹಾಕಿ ಇಂಡಿಯಾ~ದಿಂದ ಅಧಿಕೃತ ನಿರ್ಧಾರ ಹೊರಬೀಳುವುದೊಂದೇ ಬಾಕಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಭಾರತ ಕ್ರಿಕೆಟ್ ತಂಡದ ಸೋಲಿಗೆ ಆಟಗಾರರು ಆಯಾಸಗೊಂಡಿರುವುದು ಕೂಡ ಒಂದು ಕಾರಣ. ದಣಿವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದು ಪ್ರದರ್ಶನ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ~ ಎಂದು ಕ್ರೀಡಾ ಮನಃಶಾಸ್ತ್ರ ತಜ್ಞೆ ಡಾ.ಚೈತನ್ಯಾ ಶ್ರೀಧರ್ ನುಡಿದಿದ್ದಾರೆ.<br /> <br /> `ಆದರೆ ಭಾರತ ತಂಡದ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಆಯಾಸವೊಂದೇ ಕಾರಣ ಎಂದು ಹೇಳಲಾಗದು. ಇಂಗ್ಲೆಂಡ್ನ ವಾತಾವರಣ, ಅಲ್ಲಿನ ಪರಿಸ್ಥಿತಿ, ಆಟಗಾರರು ಗಾಯಗೊಂಡಿರುವುದು ಕೂಡ ಕಳಪೆ ಪ್ರದರ್ಶನಕ್ಕೆ ಕಾರಣ~ ಎಂದು ಬೆಂಗಳೂರಿನ ಚೈತನ್ಯಾ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.<br /> <br /> ಭಾರತದ ಖ್ಯಾತ `ಕ್ರೀಡಾ ಮನಃಶಾಸ್ತ್ರ ತಜ್ಞೆ~ ಎನಿಸಿಕೊಂಡಿರುವ ಚೈತನ್ಯಾ ಏಳು ವರ್ಷಗಳಿಂದ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. <br /> <br /> `ಕ್ರೀಡೆಯಲ್ಲಿ ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕವಾಗಿ ಸಮರ್ಥರಾಗಿರುವುದು ತುಂಬಾ ಮುಖ್ಯ. ಯಾವುದೇ ಸಂದರ್ಭದಲ್ಲೂ ನಕಾರಾತ್ಮಕವಾಗಿ ಯೋಚನೆ ಮಾಡಬಾರದು. ಜೊತೆಗೆ ಕ್ರೀಡೆಯಲ್ಲಿ ಎದುರಾಳಿ ಆಟಗಾರ ಏನು ಮಾಡುತ್ತಾನೆ ಎಂಬುದು ಮುಖ್ಯವಲ್ಲ; ಬದಲಾಗಿ ನಾವು ಯಾವ ರೀತಿ ಆ ಸನ್ನಿವೇಶಕ್ಕೆ ಸ್ಪಂದಿಸುತ್ತೇವೆ ಎಂಬುದು ಮುಖ್ಯ~ ಎಂದು ಅವರು ವಿವರಿಸಿದರು. <br /> <br /> ಚೈತನ್ಯಾ ಈಗ ಜೈನ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಂಗಳೂರು ವಿವಿಯಿಂದ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಅವರು ವೆಸ್ಟರ್ನ್ ಆಸ್ಟ್ರೇಲಿಯಾ ವಿವಿಯಲ್ಲಿ ಡಾಕ್ಟರೇಟ್ ಪದವಿ ಕೂಡ ಪಡೆದಿದ್ದಾರೆ. <br /> <br /> ಭಾರತ ಹಾಕಿ ಆಟಗಾರರ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಸಲಹೆಗಾರರಾಗಿ ನೇಮಕವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಗುರುವಾರ ತಂಡದ ಕೋಚ್ ಮೈಕಲ್ ನಾಬ್ಸ್ ಜೊತೆ ಮತ್ತೊವ್ಮೆು ಸಮಾಲೋಚನೆ ನಡೆಸಲಿದ್ದೇನೆ. ನಂತರ ಪ್ರತಿ ಆಟಗಾರರು ಹಾಗೂ ತಂಡದ ಜೊತೆ ಮಾತನಾಡಿ ಯೋಜನೆ ರೂಪಿಸುತ್ತೇನೆ~ ಎಂದು ಹೇಳಿದ್ದಾರೆ. <br /> <br /> ಚೈತನ್ಯಾ 2003ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕೂಡ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. <br /> <br /> <strong>ಪುರುಷರ ಹಾಕಿ ತಂಡಕ್ಕೆ ಸಲಹೆ ನೀಡಲಿರುವ ಮನಃಶಾಸ್ತ್ರ ತಜ್ಞೆ <br /> </strong>ನವದೆಹಲಿ (ಪಿಟಿಐ): ಖ್ಯಾತ ಕ್ರೀಡಾ ಮನಃಶಾಸ್ತ್ರ ತಜ್ಞೆ ಬೆಂಗಳೂರಿನ ಡಾ.ಚೈತನ್ಯಾ ಶ್ರೀಧರ್ ಅವರನ್ನು ಹಾಕಿ ಆಟಗಾರರ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಭಾರತ ತಂಡದ ಸಲಹೆಗಾರರನ್ನಾಗಿ ನೇಮಿಸಲು `ಹಾಕಿ ಇಂಡಿಯಾ~ ಮುಂದಾಗಿದೆ.<br /> <br /> ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ) ದಕ್ಷಿಣ ಕೇಂದ್ರದಲ್ಲಿ ನಡೆಯುತ್ತಿರುವ ಹಾಕಿ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ ಚೈತನ್ಯಾ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂಬಂಧ `ಹಾಕಿ ಇಂಡಿಯಾ~ದಿಂದ ಅಧಿಕೃತ ನಿರ್ಧಾರ ಹೊರಬೀಳುವುದೊಂದೇ ಬಾಕಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>