<p><strong>ಇಸ್ಲಾಮಾಬಾದ್:</strong> ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಇದೇ 17ರಂದು ತೀರ್ಪು ನೀಡಲಿದೆ. ಆದರೆ ಆ ತೀರ್ಪನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಪಾಕ್ ತಿಳಿಸಿದೆ.</p>.<p>ಗೂಢಚಾರಿಕೆ ಆರೋಪದ ಮೇರೆಗೆ ಜಾಧವ್ ಅವರಿಗೆಪಾಕಿಸ್ತಾನ ಸೇನಾ ನ್ಯಾಯಾಲಯ 2017ರ ಏಪ್ರಿಲ್ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಐಸಿಜೆ ಮೊರೆ ಹೋಗಿತ್ತು. ಬಲೂಚಿಸ್ತಾನ ಪ್ರಾಂತ್ಯಪ್ರವೇಶಿಸುವಸಂದರ್ಭದಲ್ಲಿ, 2016ರ ಮಾರ್ಚ್ 3ರಂದು ಭದ್ರತಾ ಪಡೆಗಳುಜಾಧವ್ ಅವರನ್ನು ಬಂಧಿಸಿದ್ದವು ಎಂಬುದು ಪಾಕಿಸ್ತಾನದ ವಾದ.</p>.<p>‘ಜಾಧವ್ ಇರಾನ್ನಲ್ಲಿವ್ಯಾಪಾರ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಲಾಗಿದೆ’ ಎಂಬುದು ಭಾರತದ ಪ್ರತಿವಾದವಾಗಿದೆ.</p>.<p><strong>ಕರ್ತಾರ್ಪುರ ಕಾರಿಡಾರ್: 14ಕ್ಕೆ ಸಭೆ<br />ಇಸ್ಲಾಮಾಬಾದ್ (ಪಿಟಿಐ):</strong> ಕರ್ತಾರ್ಪುರ ಕಾರಿಡಾರ್ನ ಕರಡು ಒಪ್ಪಂದವನ್ನು ಅಂತಿಮಗೊಳಿಸುವ ಸಂಬಂಧ ಚರ್ಚಿಸಲು ಭಾರತ ಮತ್ತು ಪಾಕಿಸ್ತಾನದ ತಜ್ಞರ ಸಭೆ ಇದೇ 14ರಂದು ವಾಘಾ ಗಡಿಯಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಇದೇ 17ರಂದು ತೀರ್ಪು ನೀಡಲಿದೆ. ಆದರೆ ಆ ತೀರ್ಪನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಪಾಕ್ ತಿಳಿಸಿದೆ.</p>.<p>ಗೂಢಚಾರಿಕೆ ಆರೋಪದ ಮೇರೆಗೆ ಜಾಧವ್ ಅವರಿಗೆಪಾಕಿಸ್ತಾನ ಸೇನಾ ನ್ಯಾಯಾಲಯ 2017ರ ಏಪ್ರಿಲ್ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಐಸಿಜೆ ಮೊರೆ ಹೋಗಿತ್ತು. ಬಲೂಚಿಸ್ತಾನ ಪ್ರಾಂತ್ಯಪ್ರವೇಶಿಸುವಸಂದರ್ಭದಲ್ಲಿ, 2016ರ ಮಾರ್ಚ್ 3ರಂದು ಭದ್ರತಾ ಪಡೆಗಳುಜಾಧವ್ ಅವರನ್ನು ಬಂಧಿಸಿದ್ದವು ಎಂಬುದು ಪಾಕಿಸ್ತಾನದ ವಾದ.</p>.<p>‘ಜಾಧವ್ ಇರಾನ್ನಲ್ಲಿವ್ಯಾಪಾರ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಲಾಗಿದೆ’ ಎಂಬುದು ಭಾರತದ ಪ್ರತಿವಾದವಾಗಿದೆ.</p>.<p><strong>ಕರ್ತಾರ್ಪುರ ಕಾರಿಡಾರ್: 14ಕ್ಕೆ ಸಭೆ<br />ಇಸ್ಲಾಮಾಬಾದ್ (ಪಿಟಿಐ):</strong> ಕರ್ತಾರ್ಪುರ ಕಾರಿಡಾರ್ನ ಕರಡು ಒಪ್ಪಂದವನ್ನು ಅಂತಿಮಗೊಳಿಸುವ ಸಂಬಂಧ ಚರ್ಚಿಸಲು ಭಾರತ ಮತ್ತು ಪಾಕಿಸ್ತಾನದ ತಜ್ಞರ ಸಭೆ ಇದೇ 14ರಂದು ವಾಘಾ ಗಡಿಯಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>