<p><strong>ಕೋಟ(ರಾಜಸ್ಥಾನ): </strong>ತಮ್ಮ ಕೆಲಸದ ಒಪ್ಪಂದದ ಅವಧಿ ಮುಗಿದ ನಂತರವೂ ಸೌದಿ ಅರೇಬಿಯಾದ ಯಾನ್ಬು ನಗರದಲ್ಲಿ ತಮ್ಮ ಉದ್ಯೋಗದಾತರಿಂದ ಬಂಧನಕ್ಕೊಳಗಾಗಿದ್ದ ಇಬ್ಬರು ಭಾರತೀಯ ಕಾರ್ಮಿಕರು ಗುರುವಾರ ರಾಜಸ್ಥಾನಕ್ಕೆ ಮರಳಿದರು.</p>.<p>ಕೆಲಸದ ಒಪ್ಪಂದದ ಮೇರೆಗೆ ಬುಂಡಿ ಜಿಲ್ಲೆಯ ಗಫರ್ ಮೊಹಮ್ಮದ್ (49) ಮತ್ತು ಭರತ್ಪುರ ಜಿಲ್ಲೆಯ ವಿಶ್ರಮ್ ಜಾಧವ್ (46) ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು. 2020 ರ ನವೆಂಬರ್ ತಿಂಗಳಲ್ಲೇ ಒಪ್ಪಂದ ಮುಗಿದಿದ್ದರೂ ಮಾಲೀಕರು ಭಾರತಕ್ಕೆ ಮರಳಲು ಬಿಟ್ಟಿರಲಿಲ್ಲ.</p>.<p>ಮಂಗಳವಾರ ಸಂಜೆ ಇವರಿಬ್ಬರಿಗೆ ಜೈಪುರಕ್ಕೆ ಟಿಕೆಟ್ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್ನ ಬುಂಡಿ ಜಿಲ್ಲಾ ಉಪಾಧ್ಯಕ್ಷ ಚಾರ್ಮೇಶ್ ಶರ್ಮಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.</p>.<p>ಏಪ್ರಿಲ್ ಅಂತ್ಯದ ವೇಳೆಗೆ ಮನೆಗೆ ಮರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳ ಆಶ್ವಾಸನೆಯ ಹೊರತಾಗಿಯೂ, ಆಹಾರ ಕೊಡದೆ ಮೂರು ತಿಂಗಳು ಬಂಧಿಸಿಡಲಾಗಿತ್ತು ಎಂದು ಇಬ್ಬರೂ ಆರೋಪಿಸಿದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/district/mysore/karnataka-next-cm-g-parameshwara-his-followers-shouted-during-suttur-shakha-mutt-meet-841893.html" itemprop="url" target="_blank">ಮುಂದಿನ ಸಿಎಂ ಪರಮೇಶ್ವರ್: ಸುತ್ತೂರು ಶಾಖಾ ಮಠದಲ್ಲಿ ಬೆಂಬಲಿಗರ ಘೋಷಣೆ</a></p>.<p>ಅಲ್ಲಿದ್ದ ಇತರ ಕಾರ್ಮಿಕರು ಕರುಣೆಯಿಂದ ಕೊಟ್ಟ ಆಹಾರ ಸೇವಿಸಿ ಜೀವ ಉಳಿಸಿಕೊಂಡಿದ್ದಾಗಿ ಕಾರ್ಮಿಕರು ಹೇಳಿದ್ದಾರೆ.</p>.<p>‘ನಾವು ತಾಯ್ನಾಡಿಗೆ ಮರಳುತ್ತೇವೆ ಎಂದುಕೊಂಡಿರಲಿಲ್ಲ. ನಮ್ಮ ವಿರುದ್ಧ ಮಾಲೀಕರು ಅಮಾನವೀಯ ನಡವಳಿಕೆ ತೋರಿದ್ದಾರೆ.. ಸುಮಾರು 50 ಡಿಗ್ರಿ ಸೆಲ್ಸಿಯಸ್ನಲ್ಲಿ ವಿದ್ಯುತ್ ಇಲ್ಲದೆ ಹಗಲಿನ ವೇಳೆಯಲ್ಲಿ ತಗಡು ಶೆಡ್ಗಳಲ್ಲಿ ಇರಿಸಲಾಗಿತ್ತು.’ ಎಂದು ಮೊಹಮ್ಮದ್ ತಾಯ್ನಾಡಿಗೆ ಮರಳಿದ ನಂತರ ಪಿಟಿಐಗೆ ತಿಳಿಸಿದರು.</p>.<p>ಈ ವರ್ಷದ ಫೆಬ್ರವರಿಯಲ್ಲಿ ಇಬ್ಬರು ಸಂತ್ರಸ್ತರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್ಲೋಡ್ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದರು ಎಂದು ಶರ್ಮಾ ಹೇಳಿದ್ದಾರೆ.</p>.<p>ಮಾರ್ಚ್ 20 ರಂದು ಶರ್ಮಾ ವಿದೇಶಾಂಗ ಸಚಿವಾಲಯಕ್ಕೆ ದೂರು ನೀಡಿದ್ದು, ಪಿಎಂಒ ಮತ್ತು ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದು, ಈ ಇಬ್ಬರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು.</p>.<p>ಶರ್ಮಾ ಪ್ರಕಾರ, ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಅವರ ಸೆರೆಯ ವರದಿಗಳು ಹೊರಬಿದ್ದ ನಂತರ ಕಾರ್ಯಾಚರಣೆ ಆರಂಭಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಟ(ರಾಜಸ್ಥಾನ): </strong>ತಮ್ಮ ಕೆಲಸದ ಒಪ್ಪಂದದ ಅವಧಿ ಮುಗಿದ ನಂತರವೂ ಸೌದಿ ಅರೇಬಿಯಾದ ಯಾನ್ಬು ನಗರದಲ್ಲಿ ತಮ್ಮ ಉದ್ಯೋಗದಾತರಿಂದ ಬಂಧನಕ್ಕೊಳಗಾಗಿದ್ದ ಇಬ್ಬರು ಭಾರತೀಯ ಕಾರ್ಮಿಕರು ಗುರುವಾರ ರಾಜಸ್ಥಾನಕ್ಕೆ ಮರಳಿದರು.</p>.<p>ಕೆಲಸದ ಒಪ್ಪಂದದ ಮೇರೆಗೆ ಬುಂಡಿ ಜಿಲ್ಲೆಯ ಗಫರ್ ಮೊಹಮ್ಮದ್ (49) ಮತ್ತು ಭರತ್ಪುರ ಜಿಲ್ಲೆಯ ವಿಶ್ರಮ್ ಜಾಧವ್ (46) ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು. 2020 ರ ನವೆಂಬರ್ ತಿಂಗಳಲ್ಲೇ ಒಪ್ಪಂದ ಮುಗಿದಿದ್ದರೂ ಮಾಲೀಕರು ಭಾರತಕ್ಕೆ ಮರಳಲು ಬಿಟ್ಟಿರಲಿಲ್ಲ.</p>.<p>ಮಂಗಳವಾರ ಸಂಜೆ ಇವರಿಬ್ಬರಿಗೆ ಜೈಪುರಕ್ಕೆ ಟಿಕೆಟ್ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್ನ ಬುಂಡಿ ಜಿಲ್ಲಾ ಉಪಾಧ್ಯಕ್ಷ ಚಾರ್ಮೇಶ್ ಶರ್ಮಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.</p>.<p>ಏಪ್ರಿಲ್ ಅಂತ್ಯದ ವೇಳೆಗೆ ಮನೆಗೆ ಮರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳ ಆಶ್ವಾಸನೆಯ ಹೊರತಾಗಿಯೂ, ಆಹಾರ ಕೊಡದೆ ಮೂರು ತಿಂಗಳು ಬಂಧಿಸಿಡಲಾಗಿತ್ತು ಎಂದು ಇಬ್ಬರೂ ಆರೋಪಿಸಿದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/district/mysore/karnataka-next-cm-g-parameshwara-his-followers-shouted-during-suttur-shakha-mutt-meet-841893.html" itemprop="url" target="_blank">ಮುಂದಿನ ಸಿಎಂ ಪರಮೇಶ್ವರ್: ಸುತ್ತೂರು ಶಾಖಾ ಮಠದಲ್ಲಿ ಬೆಂಬಲಿಗರ ಘೋಷಣೆ</a></p>.<p>ಅಲ್ಲಿದ್ದ ಇತರ ಕಾರ್ಮಿಕರು ಕರುಣೆಯಿಂದ ಕೊಟ್ಟ ಆಹಾರ ಸೇವಿಸಿ ಜೀವ ಉಳಿಸಿಕೊಂಡಿದ್ದಾಗಿ ಕಾರ್ಮಿಕರು ಹೇಳಿದ್ದಾರೆ.</p>.<p>‘ನಾವು ತಾಯ್ನಾಡಿಗೆ ಮರಳುತ್ತೇವೆ ಎಂದುಕೊಂಡಿರಲಿಲ್ಲ. ನಮ್ಮ ವಿರುದ್ಧ ಮಾಲೀಕರು ಅಮಾನವೀಯ ನಡವಳಿಕೆ ತೋರಿದ್ದಾರೆ.. ಸುಮಾರು 50 ಡಿಗ್ರಿ ಸೆಲ್ಸಿಯಸ್ನಲ್ಲಿ ವಿದ್ಯುತ್ ಇಲ್ಲದೆ ಹಗಲಿನ ವೇಳೆಯಲ್ಲಿ ತಗಡು ಶೆಡ್ಗಳಲ್ಲಿ ಇರಿಸಲಾಗಿತ್ತು.’ ಎಂದು ಮೊಹಮ್ಮದ್ ತಾಯ್ನಾಡಿಗೆ ಮರಳಿದ ನಂತರ ಪಿಟಿಐಗೆ ತಿಳಿಸಿದರು.</p>.<p>ಈ ವರ್ಷದ ಫೆಬ್ರವರಿಯಲ್ಲಿ ಇಬ್ಬರು ಸಂತ್ರಸ್ತರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್ಲೋಡ್ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದರು ಎಂದು ಶರ್ಮಾ ಹೇಳಿದ್ದಾರೆ.</p>.<p>ಮಾರ್ಚ್ 20 ರಂದು ಶರ್ಮಾ ವಿದೇಶಾಂಗ ಸಚಿವಾಲಯಕ್ಕೆ ದೂರು ನೀಡಿದ್ದು, ಪಿಎಂಒ ಮತ್ತು ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದು, ಈ ಇಬ್ಬರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು.</p>.<p>ಶರ್ಮಾ ಪ್ರಕಾರ, ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಅವರ ಸೆರೆಯ ವರದಿಗಳು ಹೊರಬಿದ್ದ ನಂತರ ಕಾರ್ಯಾಚರಣೆ ಆರಂಭಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>