<p><strong>ಶ್ರೀನಗರ: </strong>‘ಪೊಲೀಸ್ ವಿಶೇಷಾಧಿಕಾರಿ(ಎಸ್ಪಿಒ) ಮತ್ತು ಅವರ ಕುಟುಂಬದವರ ಹತ್ಯೆಯಲ್ಲಿ ವಿದೇಶಿಗ ಸೇರಿದಂತೆ ಇಬ್ಬರು ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರರು ಭಾಗಿಯಾಗಿದ್ದಾರೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.</p>.<p>‘ಎಸ್ಪಿಒ ಫಯಾಜ್ ಅಹಮದ್ ಮೇಲೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದಾರೆ. ಅವರನ್ನು ರಕ್ಷಿಸಲು ಹೋದ ಪತ್ನಿ ಮತ್ತು ಮಗಳ ಮೇಲೂ ಉಗ್ರರು ಗುಂಡು ಹಾರಿಸಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಸಕ್ರಿಯರಾಗಿದ್ದಾರೆ. ಭಾನುವಾರ ರಾತ್ರಿ ಇಬ್ಬರು ಉಗ್ರರು ಇಲ್ಲಿಗೆ ಬಂದಿದ್ದರು. ಅದರಲ್ಲಿ ಒಬ್ಬ ವಿದೇಶಿ ಉಗ್ರನಾಗಿದ್ದಾನೆ’ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದರು.</p>.<p>ವಿಜಯ್ ಕುಮಾರ್ ಅವರು ಎಸ್ಪಿಒ ಕುಟುಂಬದವರನ್ನು ಭೇಟಿಯಾಗಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.</p>.<p>‘ಫಯಾಜ್ ಅಹಮದ್ ಮತ್ತು ಅವರ ಪತ್ನಿ, ಮಗಳ ಸಾವು ನಮಗೆ ಬಹಳ ನೋವನ್ನು ನೀಡಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಆದಷ್ಟು ಬೇಗ ಬಂಧಿಸುತ್ತೇವೆ. ಈ ಪ್ರದೇಶದಲ್ಲಿ ಜೆಇಎಂ ಸಕ್ರಿಯವಾಗಿದೆ. ಈ ಸಂಘಟನೆಯೇ ದಾಳಿ ನಡೆಸಿರಬೇಕು’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ: </strong>‘ಪೊಲೀಸ್ ವಿಶೇಷಾಧಿಕಾರಿ(ಎಸ್ಪಿಒ) ಮತ್ತು ಅವರ ಕುಟುಂಬದವರ ಹತ್ಯೆಯಲ್ಲಿ ವಿದೇಶಿಗ ಸೇರಿದಂತೆ ಇಬ್ಬರು ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರರು ಭಾಗಿಯಾಗಿದ್ದಾರೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.</p>.<p>‘ಎಸ್ಪಿಒ ಫಯಾಜ್ ಅಹಮದ್ ಮೇಲೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದಾರೆ. ಅವರನ್ನು ರಕ್ಷಿಸಲು ಹೋದ ಪತ್ನಿ ಮತ್ತು ಮಗಳ ಮೇಲೂ ಉಗ್ರರು ಗುಂಡು ಹಾರಿಸಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಸಕ್ರಿಯರಾಗಿದ್ದಾರೆ. ಭಾನುವಾರ ರಾತ್ರಿ ಇಬ್ಬರು ಉಗ್ರರು ಇಲ್ಲಿಗೆ ಬಂದಿದ್ದರು. ಅದರಲ್ಲಿ ಒಬ್ಬ ವಿದೇಶಿ ಉಗ್ರನಾಗಿದ್ದಾನೆ’ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದರು.</p>.<p>ವಿಜಯ್ ಕುಮಾರ್ ಅವರು ಎಸ್ಪಿಒ ಕುಟುಂಬದವರನ್ನು ಭೇಟಿಯಾಗಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.</p>.<p>‘ಫಯಾಜ್ ಅಹಮದ್ ಮತ್ತು ಅವರ ಪತ್ನಿ, ಮಗಳ ಸಾವು ನಮಗೆ ಬಹಳ ನೋವನ್ನು ನೀಡಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಆದಷ್ಟು ಬೇಗ ಬಂಧಿಸುತ್ತೇವೆ. ಈ ಪ್ರದೇಶದಲ್ಲಿ ಜೆಇಎಂ ಸಕ್ರಿಯವಾಗಿದೆ. ಈ ಸಂಘಟನೆಯೇ ದಾಳಿ ನಡೆಸಿರಬೇಕು’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>