ಮೂರೂ ಜನರನ್ನೂ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಗುಪ್ತಚರ ಇಲಾಖೆ ಮಾಹಿತಿಯಂತೆ ಡಿಆರ್ಐ ಅಧಿಕಾರಿಗಳು ವಿಜಯವಾಡ– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಗಾವಲು ವ್ಯವಸ್ಥೆ ಮಾಡಿದ್ದರು. ಪಂತಂಗಿ ಟೋಲ್ ಪ್ಲಾಜಾ ಸಮೀಪ ಎಸ್ಯುವಿ ವಾಹನವನ್ನು ಪರಿಶೀಲಿಸಿದಾಗ ಅಕ್ರಮ ಚಿನ್ನ ಸಾಗಣೆ ಪತ್ತೆಯಾಯಿತು. ಏರ್ ಬ್ಯಾಗ್ ತೆಗೆದಾಗ ಡ್ಯಾಶ್ಬೋರ್ಡ್ನಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಬಿಸ್ಕೀಟುಗಳು ಪತ್ತೆಯಾದವು ಎಂದು ಡಿಆರ್ಐ ಪ್ರಕಟಣೆಯಲ್ಲಿ ತಿಳಿಸಿದೆ.