<p><strong>ನಾಗಪಟ್ಟಣಂ (ತಮಿಳುನಾಡು):</strong> ಕೊಡಿಯಾಕಾರೈ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾದ ಮೀನುಗಾರರ ಗುಂಪೊಂದು ಶನಿವಾರ ಮುಂಜಾನೆ ಜಿಲ್ಲೆಯ ಮೂವರು ಮೀನುಗಾರರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡಿದೆ.</p>.<p>ಹಲ್ಲೆಯಿಂದಾಗಿ ಮೂವರು ಮೀನುಗಾರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ವೇದಾರಣ್ಯಂ ಸಮೀಪದ ಅರಕೊಟ್ಟುತುರೈ ಹಳ್ಳಿಯ ಈ ಮೀನುಗಾರರು ಶನಿವಾರ ಮುಂಜಾನೆ ಮೀನು ಹಿಡಿಯುವುದಕ್ಕಾಗಿ ಕೊಡಿಯಾಕಾರೈ ಕರಾವಳಿ ಪ್ರದೇಶಕ್ಕೆ ತೆರಳಿದ್ದರು. ಆಗ್ನೇಯ ದಿಕ್ಕಿನಲ್ಲಿ ಮೀನು ಹಿಡಿಯಲು ಬಲೆ ಬೀಸಿದಾಗ, ಶ್ರೀಲಂಕಾ ಮೀನುಗಾರರ ಗುಂಪು ಇವರ ಮೇಲೆ ದಾಳಿ ನಡೆಸಿದೆ ಎಂದು ಕರಾವಳಿ ಭದ್ರತಾ ಪಡೆಯ (ಸಿಎಸ್ಜಿ) ಪೊಲೀಸರು ತಿಳಿಸಿದ್ದಾರೆ.</p>.<p>ಮೂರು ದೋಣಿಗಳಲ್ಲಿ ಬಂದಿದ್ದ ಶ್ರೀಲಂಕಾ ಮೀನುಗಾರರು ಕಬ್ಬಿಣದ ಸರಳುಗಳಿಂದ ದಾಳಿ ಮಾಡಿದ್ದಾರೆ. ತಮಿಳುನಾಡಿನ ಮೀನುಗಾರರ ಬಳಿಯಿದ್ದ ಕ್ಯಾಚ್, ಮೀನು ಹಿಡಿಯುವ ಬಲೆಗಳು, ಮೊಬೈಲ್ ಫೋನ್ಗಳು, ಜಿಪಿಎಸ್ ಉಪಕರಣಗಳನ್ನು ದೋಚಿದ್ದಾರೆ ಎಂದು ಸಿಎಸ್ಜಿ ಪೊಲೀಸರು ತಿಳಿಸಿದ್ದಾರೆ.</p>.<p>ಈ ದಾಳಿಯನ್ನು ಖಂಡಿಸಿಅರುಕೊಟ್ಟುತುರೈನಲ್ಲಿ ಮೀನುಗಾರರ ಸಂಘದ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪಟ್ಟಣಂ (ತಮಿಳುನಾಡು):</strong> ಕೊಡಿಯಾಕಾರೈ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾದ ಮೀನುಗಾರರ ಗುಂಪೊಂದು ಶನಿವಾರ ಮುಂಜಾನೆ ಜಿಲ್ಲೆಯ ಮೂವರು ಮೀನುಗಾರರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡಿದೆ.</p>.<p>ಹಲ್ಲೆಯಿಂದಾಗಿ ಮೂವರು ಮೀನುಗಾರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ವೇದಾರಣ್ಯಂ ಸಮೀಪದ ಅರಕೊಟ್ಟುತುರೈ ಹಳ್ಳಿಯ ಈ ಮೀನುಗಾರರು ಶನಿವಾರ ಮುಂಜಾನೆ ಮೀನು ಹಿಡಿಯುವುದಕ್ಕಾಗಿ ಕೊಡಿಯಾಕಾರೈ ಕರಾವಳಿ ಪ್ರದೇಶಕ್ಕೆ ತೆರಳಿದ್ದರು. ಆಗ್ನೇಯ ದಿಕ್ಕಿನಲ್ಲಿ ಮೀನು ಹಿಡಿಯಲು ಬಲೆ ಬೀಸಿದಾಗ, ಶ್ರೀಲಂಕಾ ಮೀನುಗಾರರ ಗುಂಪು ಇವರ ಮೇಲೆ ದಾಳಿ ನಡೆಸಿದೆ ಎಂದು ಕರಾವಳಿ ಭದ್ರತಾ ಪಡೆಯ (ಸಿಎಸ್ಜಿ) ಪೊಲೀಸರು ತಿಳಿಸಿದ್ದಾರೆ.</p>.<p>ಮೂರು ದೋಣಿಗಳಲ್ಲಿ ಬಂದಿದ್ದ ಶ್ರೀಲಂಕಾ ಮೀನುಗಾರರು ಕಬ್ಬಿಣದ ಸರಳುಗಳಿಂದ ದಾಳಿ ಮಾಡಿದ್ದಾರೆ. ತಮಿಳುನಾಡಿನ ಮೀನುಗಾರರ ಬಳಿಯಿದ್ದ ಕ್ಯಾಚ್, ಮೀನು ಹಿಡಿಯುವ ಬಲೆಗಳು, ಮೊಬೈಲ್ ಫೋನ್ಗಳು, ಜಿಪಿಎಸ್ ಉಪಕರಣಗಳನ್ನು ದೋಚಿದ್ದಾರೆ ಎಂದು ಸಿಎಸ್ಜಿ ಪೊಲೀಸರು ತಿಳಿಸಿದ್ದಾರೆ.</p>.<p>ಈ ದಾಳಿಯನ್ನು ಖಂಡಿಸಿಅರುಕೊಟ್ಟುತುರೈನಲ್ಲಿ ಮೀನುಗಾರರ ಸಂಘದ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>