ಇದೇ ಸಂದರ್ಭ, ಬ್ಯಾನರ್ಜಿ ಅವರು ಭಾರತದ ಇಬ್ಬರು ಸಿನಿಮಾ ನಿರ್ಮಾಪಕರಾದ ಸತ್ಯಜಿತ್ ರೇ ಮತ್ತು ಶ್ಯಾಮ್ ಬೆನೆಗಲ್ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು. ಇವರಿಬ್ಬರು ಅರ್ಥಶಾಸ್ತ್ರದ ಪದವೀದರರು. ಆದರೆ ಅವರು ವಿಭಿನ್ನ ಹಾದಿ ತುಳಿದರು. ಹಾಗಿದ್ದೂ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದರು. ಹಾಗಾಗಿ ಯಾವುದೋ ಒಂದು ನಿರ್ದಿಷ್ಟ ತರಬೇತಿ ಪಡೆಯುವುದಕ್ಕಿಂತ ಮುಖ್ಯವಾಗಿ ಚುರುಕಿನಿಂದ ಇರುವುದು, ವಿಚಾರಶೀಲರಾಗಿರುವುದು ಮತ್ತು ಮಾನವೀಯತೆ ಅಳವಡಿಸಿಕೊಳ್ಳುವುದು ಪ್ರಮುಖವಾಗಿದೆ. ಅದೇ ಜೀವನದ ಪ್ರಮುಖ ಭಾಗ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.