ಪ್ರೇಮಾ ಶ್ರೀದೇವಿ ಮತ್ತು ಹಿಮಾಂಶು ಕಾಲಾ ಅವರಿಗೆ ಕೆ.ಪಿ.ನಾರಾಯಣ ಕುಮಾರ್ ಸ್ಮರಣಾರ್ಥ ನೀಡಲಾಗುವ ‘ಸಾಮಾಜಿಕ ಪರಿಣಾಮ ಪತ್ರಿಕೋದ್ಯಮ’ ಪ್ರಶಸ್ತಿ ದೊರೆತಿದೆ. ದೆಹಲಿಯಲ್ಲಿ ಮಲಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರು, ಅವರ ಸ್ಥಿತಿಗತಿ, ಮಲಗುಂಡಿ ಸ್ವಚ್ಛಗೊಳಿಸುವ ವೇಳೆ ಸಂಭವಿಸಿದ ಸಾವುಗಳ ಬಗ್ಗೆ ಪ್ರೇಮಾ ಶ್ರೀದೇವಿ ಮತ್ತು ಹಿಮಾಂಶು ಕಾಲಾ ಅವರು ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರಕ್ಕಾಗಿ ಈ ಪ್ರಶಸ್ತಿ ದೊರೆತಿದೆ. ಈ ಸಾಕ್ಷ್ಯಚಿತ್ರವನ್ನು ‘ದಿ ಪ್ರೋಬ್’ ಸಂಸ್ಥೆ ನಿರ್ಮಿಸಿತ್ತು.