ತಿರುವನಂತಪುರ: ತೆರಿಗೆ ವಿನಾಯಿತಿ ಪಡೆಯುವುದಕ್ಕಾಗಿ ತಿರುವನಂತಪುರದಲ್ಲಿರುವ ಯುಎಇ ಕಾನ್ಸುಲೇಟ್ ಮುಖಾಂತರ ರಾಜತಾಂತ್ರಿಕ ಮಾರ್ಗದಲ್ಲಿ 18 ಟನ್ ಖರ್ಜೂರ ಹಾಗೂ 4.5 ಟನ್ ಧಾರ್ಮಿಕ ವಸ್ತುಗಳನ್ನು ಯುಎಇಯಿಂದ ತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರನ್ನು ಕಸ್ಟಮ್ಸ್ ಇಲಾಖೆಯು ಸೋಮವಾರ ವಿಚಾರಣೆಗೊಳಪಡಿಸಿದೆ.