ಶುಶ್ರೂಷಕರು ಮುಷ್ಕರ ಘೋಷಿಸುತ್ತಿದ್ದಂತೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ವಿಡಿಯೊ ಸಂದೇಶ ಪ್ರಕಟಿಸಿದ್ದಾರೆ. ಅದರಲ್ಲಿ ಆಧುನಿಕ ನರ್ಸಿಂಗ್ ಪದ್ಧತಿಯನ್ನು ಆರಂಭಿಸಿದ ಫ್ಲೋರೆನ್ಸ್ ನೈಟಿಂಗೇಲ್ ಅವರ ಕುರಿತು ಪ್ರಸ್ತಾಪಿಸಿ, ಕೋವಿಡ್ ಸಮಯದಲ್ಲಿ ಶುಶ್ರೂಷಕರ ಕರ್ತವ್ಯದ ಕುರಿತು ನೆನಪು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಮುಷ್ಕರ ನಡೆಸದಂತೆ ಅವರು ಆಗ್ರಹಿಸಿರುವುದಾಗಿ ವರದಿಯಾಗಿದೆ.