ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧ್ಯ ಸಿಂಧ್ಯಾ ಅವರಿಗೂ ಟ್ವೀಟ್ ಮಾಡಿರುವ ಸರಿತಾ, ‘ಕೊಚ್ಚಿ ತಲುಪಲು ಮತ್ತೊಂದು ಖಾಸಗಿ ವಿಮಾನದಲ್ಲಿಗಾಲಿಕುರ್ಚಿಯೊಂದಿಗೆ ಪ್ರಯಾಣಿಸಲು ಸುಮಾರು ₹ 14,000 ಖರ್ಚು ಮಾಡಬೇಕಾಯಿತು.ಅಲಯನ್ಸ್ ಏರ್ ವಿಮಾನ ಸಂಸ್ಥೆಯು ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಿಲ್ಲ. ಶನಿವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಲಯನ್ಸ್ ಏರ್ ಕೌಂಟರ್ನಲ್ಲಿ ತುಂಬಾ ಕೆಟ್ಟ ಅನುಭವ ಆಯಿತು’ ಎಂದು ಅಳಲು ತೋಡಿಕೊಂಡಿದ್ದಾರೆ.