ಶ್ರೀನಗರ: ದಕ್ಷಿಣ ಕಾಶ್ಮೀರ ಹಿಮಾಲಯದ 52 ದಿನಗಳ ಪವಿತ್ರ ಅಮರನಾಥ ಯಾತ್ರೆಯು ಜೂನ್ 28ರಂದು ಆರಂಭವಾಗಲಿದೆ. ಆಗಸ್ಟ್ 22ರಂದು ಯಾತ್ರೆ ಅಂತ್ಯವಾಗಲಿದೆ.
3,880 ಮೀಟರ್ ಎತ್ತರದಲ್ಲಿನ ನೈಸರ್ಗಿಕ ಮಂಜಿನ ಶಿವಲಿಂಗ ದರ್ಶನದ ಯಾತ್ರೆಯು ಕಳೆದ ವರ್ಷ ಕೋವಿಡ್ ಬಿಕ್ಕಟ್ಟು ಕಾರಣದಿಂದ ಸ್ಥಗಿತಗೊಂಡಿತ್ತು. ಹಾಗೇ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದು ಕಾರಣದಿಂದ ಉಂಟಾದ ಗಲಾಭೆ ಕಾರಣದಿಂದ 2019ರಲ್ಲೂ ಸಹ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.
ಅಮರನಾಥ ಯಾತ್ರೆ ಆರಂಭಿಸುವ ಬಗ್ಗೆ ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್ಎಎಸ್ಬಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕೋವಿಡ್ 19 ಮಾರ್ಗಸೂಚಿ ಪ್ರಕಾರವೇ ಯಾತ್ರೆಯನ್ನು ಕೈಗೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.