‘ಪಂಜಾಬ್ನಲ್ಲಿ ಅಮೃತಪಾಲ್ ಎಂಬ ಹೊಸ ಹೆಸರು ಹುಟ್ಟಿಕೊಂಡಿದೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದರೆ, ನಾನು ಏಕೆ ಖಾಲಿಸ್ಥಾನದ ಬಗ್ಗೆ ಮಾತನಾಡಬಾರದು? ಎಂದು ಅಮೃತ್ಪಾಲ್ ಪ್ರಶ್ನಿಸಿದ್ದಾರೆ. ಅವರ(ಅಮೃತ್ಪಾಲ್) ದಿಟ್ಟತನ ನೋಡಿ, ನೀವು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಿದ್ದರಿಂದ ಅವರಿಗೆ ಧೈರ್ಯ ಬಂದಿದೆ ಎಂದು ಅಮೃತಪಾಲ್ ಸಿಂಗ್ ಹೇಳಿದ್ದಾರೆ’ಎಂದು ಇಲ್ಲಿ ನಡೆದ ವಿಭಾಗೀಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಗೆಹಲೋತ್ ಹೇಳಿದರು.