<p><strong>ಅಮೃತಸರ:</strong>ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್ಸ್ಟರ್ಗಳನ್ನು ಜೀವಂತವಾಗಿ ಹಿಡಿಯಬೇಕು ಎಂದುಕೊಂಡಿದ್ದೆವು. ಹಾಗಾಗಿ ಶರಣಾಗವಂತೆ ಅವರಿಗೆ ಸೂಚಿಸಿದ್ದೆವು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.</p>.<p>ಶರಣಾಗುವಂತೆ ನೀಡಿದ್ದ ಸೂಚನೆಯನ್ನು ಲೆಕ್ಕಿಸದೆ, ಗ್ಯಾಂಗ್ಸ್ಟರ್ಗಳಾದಜಗರೂಪ್ ಸಿಂಗ್ ರೂಪ ಹಾಗೂ ಮನ್ಪ್ರಿತ್ ಸಿಂಗ್ ಅಲಿಯಾಸ್ ಮನ್ನು ಕುಸಾಬುಧವಾರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಪ್ರತಿದಾಳಿ ಆರಂಭಿಸಿದ್ದರು. ಸುಮಾರು ಐದು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ ಜಗರೂಪ್ ಹಾಗೂ ಮನ್ನು ಹತ್ಯೆಯಾಗಿದ್ದರು. ಭಾರತ–ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಅಮೃತಸರದ ಭಕ್ನಾಜಿಲ್ಲೆಯ ಕಟ್ಟಡವೊಂದರಲ್ಲಿ ಅವರು ಅಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಅಮೃತಸರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಂ.ಎಸ್. ಭುಲ್ಲಾರ್ ಅವರುಎನ್ಕೌಂಟರ್ ಕುರಿತು ಮಾತನಾಡಿದ್ದು,'ಅವರನ್ನು (ಗ್ಯಾಂಗ್ಸ್ಟರ್ಗಳನ್ನು) ಜೀವಂತವಾಗಿ ಸೆರೆಹಿಡಿಯಬೇಕು ಎಂದುಕೊಂಡಿದ್ದೆವು. ಅದಕ್ಕಾಗಿ ಶರಣಾಗುವ ಅವಕಾಶ ನೀಡಿದ್ದೆವು. ಆದರೆ, ಅವರು ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನಡೆಸಿದ ಪ್ರತಿದಾಳಿ ವೇಳೆ ಮೃತಪಟ್ಟಿದ್ದಾರೆ' ಎಂದುತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a data-ved="2ahUKEwjezar96on5AhV5xzgGHRdHC3YQFnoECAUQAQ" href="https://www.prajavani.net/india-news/encounter-erupts-between-police-and-gangsters-in-punjab-956017.html" ping="/url?sa=t&source=web&rct=j&url=https://www.prajavani.net/india-news/encounter-erupts-between-police-and-gangsters-in-punjab-956017.html&ved=2ahUKEwjezar96on5AhV5xzgGHRdHC3YQFnoECAUQAQ">ಪಂಜಾಬ್: ಸಿಧು ಮೂಸೆವಾಲಾ ಹತ್ಯೆ ಗ್ಯಾಂಗ್ಸ್ಟರ್ ವಿರುದ್ಧ ಎನ್ಕೌಂಟರ್</a></p>.<p>ಮರಣೋತ್ತರ ಪರೀಕ್ಷೆ ಸಲುವಾಗಿ ಶವಗಳನ್ನು ಅಮೃತಸರ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p>ಗುಂಡಿನ ಚಕಮಕಿ ವೇಳೆ ಮೂವರು ಪೊಲೀಸರು ಮತ್ತು ಪತ್ರಕರ್ತರೊಬ್ಬರು ಸಹ ಗಾಯಗೊಂಡಿದ್ದಾರೆ.</p>.<p>ಪಂಜಾಬ್ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮೃತಸರ:</strong>ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್ಸ್ಟರ್ಗಳನ್ನು ಜೀವಂತವಾಗಿ ಹಿಡಿಯಬೇಕು ಎಂದುಕೊಂಡಿದ್ದೆವು. ಹಾಗಾಗಿ ಶರಣಾಗವಂತೆ ಅವರಿಗೆ ಸೂಚಿಸಿದ್ದೆವು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.</p>.<p>ಶರಣಾಗುವಂತೆ ನೀಡಿದ್ದ ಸೂಚನೆಯನ್ನು ಲೆಕ್ಕಿಸದೆ, ಗ್ಯಾಂಗ್ಸ್ಟರ್ಗಳಾದಜಗರೂಪ್ ಸಿಂಗ್ ರೂಪ ಹಾಗೂ ಮನ್ಪ್ರಿತ್ ಸಿಂಗ್ ಅಲಿಯಾಸ್ ಮನ್ನು ಕುಸಾಬುಧವಾರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಪ್ರತಿದಾಳಿ ಆರಂಭಿಸಿದ್ದರು. ಸುಮಾರು ಐದು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ ಜಗರೂಪ್ ಹಾಗೂ ಮನ್ನು ಹತ್ಯೆಯಾಗಿದ್ದರು. ಭಾರತ–ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಅಮೃತಸರದ ಭಕ್ನಾಜಿಲ್ಲೆಯ ಕಟ್ಟಡವೊಂದರಲ್ಲಿ ಅವರು ಅಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಅಮೃತಸರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಂ.ಎಸ್. ಭುಲ್ಲಾರ್ ಅವರುಎನ್ಕೌಂಟರ್ ಕುರಿತು ಮಾತನಾಡಿದ್ದು,'ಅವರನ್ನು (ಗ್ಯಾಂಗ್ಸ್ಟರ್ಗಳನ್ನು) ಜೀವಂತವಾಗಿ ಸೆರೆಹಿಡಿಯಬೇಕು ಎಂದುಕೊಂಡಿದ್ದೆವು. ಅದಕ್ಕಾಗಿ ಶರಣಾಗುವ ಅವಕಾಶ ನೀಡಿದ್ದೆವು. ಆದರೆ, ಅವರು ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನಡೆಸಿದ ಪ್ರತಿದಾಳಿ ವೇಳೆ ಮೃತಪಟ್ಟಿದ್ದಾರೆ' ಎಂದುತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a data-ved="2ahUKEwjezar96on5AhV5xzgGHRdHC3YQFnoECAUQAQ" href="https://www.prajavani.net/india-news/encounter-erupts-between-police-and-gangsters-in-punjab-956017.html" ping="/url?sa=t&source=web&rct=j&url=https://www.prajavani.net/india-news/encounter-erupts-between-police-and-gangsters-in-punjab-956017.html&ved=2ahUKEwjezar96on5AhV5xzgGHRdHC3YQFnoECAUQAQ">ಪಂಜಾಬ್: ಸಿಧು ಮೂಸೆವಾಲಾ ಹತ್ಯೆ ಗ್ಯಾಂಗ್ಸ್ಟರ್ ವಿರುದ್ಧ ಎನ್ಕೌಂಟರ್</a></p>.<p>ಮರಣೋತ್ತರ ಪರೀಕ್ಷೆ ಸಲುವಾಗಿ ಶವಗಳನ್ನು ಅಮೃತಸರ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p>ಗುಂಡಿನ ಚಕಮಕಿ ವೇಳೆ ಮೂವರು ಪೊಲೀಸರು ಮತ್ತು ಪತ್ರಕರ್ತರೊಬ್ಬರು ಸಹ ಗಾಯಗೊಂಡಿದ್ದಾರೆ.</p>.<p>ಪಂಜಾಬ್ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>