ಬೆಂಗಳೂರು: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ಕರ್ನಾಟಕದ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆ ಫಲಿತಾಂಶ ಕುರಿತಂತೆ ಪ್ರಜಾವಾಣಿ ಫೇಸ್ಬುಕ್ ನೇರ ಪ್ರಸಾರದಲ್ಲಿ ವಿಶ್ಲೇಷಕರು ಚರ್ಚೆ ನಡೆಸಲಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ವಿಶ್ಲೇಷಣೆ ಮತ್ತು ಸಂವಾದ
ಪಾಲ್ಗೊಳ್ಳುವವರು: ಹಿರಿಯ ಪತ್ರಕರ್ತರಾದ ಡಿ.ಉಮಾಪತಿ, ಪಿ.ರಾಮಕೃಷ್ಣ ಉಪಾಧ್ಯಾಯ, ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್ ಶಾಸ್ತ್ರಿ, ಜೆಎನ್ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪುರುಪೋತ್ತಮ ಬಿಳಿಮಲೆ
ಸಮಯ: ಇಂದು ಬೆಳಿಗ್ಗೆ 11ರಿಂದ 12 ರವರೆಗೆ ಮತ್ತು ಸಂಜೆ 5ರಿಂದ 6 ರವರೆಗೆ
***
ಕರ್ನಾಟಕ ಉಪಚುನಾವಣೆ ಫಲಿತಾಂಶ: ಯಾರ ಗೆಲುವು –ಯಾರತ್ತ ಒಲವು
ಪಾಲ್ಗೊಳ್ಳುವವರು: ಸಿಪಿಎಂ ನಾಯಕ ಜಿ.ಎನ್.ನಾಗರಾಜ್, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ
ಸಮಯ: ಇಂದು ಮಧ್ಯಾಹ್ನ 3.30ರಿಂದ 4.30ರವರೆಗೆ
**
ಪ್ರಾದೇಶಿಕ ಪಕ್ಷಗಳು v/s ರಾಷ್ಟ್ರೀಯ ಪಕ್ಷಗಳು
ಸಂವಾದದಲ್ಲಿ ಪಾಲ್ಗೊಳ್ಳುವವರು: ರಾಜ್ಯ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ ಕಾರ್ಣಿಕ್