ಕಳೆದ ಕೆಲವು ವರ್ಷಗಳಿಂದ, ಚೀನಾ ಕಡೆಯವರು ವೇಗವಾಗಿ ಚಲಿಸುವ ಹೊಸ ಕಣ್ಗಾವಲು ದೋಣಿಗಳನ್ನು ನಿಯೋಜನೆಗಳಿಸಿ, ಹೊಸ ದೋಣಿ ಮನೆಗಳನ್ನೂ ನಿರ್ಮಿಸಿದ್ದಾರೆ. ಭಾರತೀಯ ಸೇನೆಯೂ ವಿಚಕ್ಷಣಾ ದೋಣಿಗಳನ್ನು ಹೊಂದಿದೆ. ವಿವಾದಿತ ಜಾಗದಲ್ಲಿ ಎರಡೂ ಕಡೆಯ ಸುಮಾರು 50 ಸಾವಿರ ಸೈನಿಕರು ಬೀಡುಬಿಟ್ಟಿದ್ದಾರೆ. ಕಳೆದ ವರ್ಷದ ಬೇಸಿಗೆ ಗಸ್ತು ಸಮಯದಲ್ಲಿ, ಚೀನಾ ಸೇನೆಯು ಅನೇಕ ಸ್ಥಳಗಳಲ್ಲಿ ಎಲ್ಎಸಿ ಅತಿಕ್ರಮಣ ಮತ್ತು ಉಲ್ಲಂಘನೆ ಮಾಡಿರುವುದನ್ನು ಭಾರತೀಯ ಸೇನೆ ಪತ್ತೆಹಚ್ಚಿತ್ತು. ಇದು 1962ರ ಯುದ್ಧದ ನಂತರದ ಬಿಕ್ಕಟ್ಟಾಗಿ ಪರಿಣಮಿಸಿದೆ.