ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ಒಡಿಶಾದಲ್ಲಿ ‘ಅಸನಿ’ ಚಂಡಮಾರುತ ಭೀತಿ

Last Updated 7 ಮೇ 2022, 15:47 IST
ಅಕ್ಷರ ಗಾತ್ರ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ ಸಂಜೆ ವೇಳೆಗೆ ಚಂಡಮಾರುತ ಉಂಟಾಗಲಿದೆ. ಇದು ಗಂಟೆಗೆ 75 ಕಿ.ಮೀ. ವೇಗದಲ್ಲಿ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಚಂಡಮಾರುತಕ್ಕೆ ‘ಅಸನಿ‘ ಎಂದು ಹೆಸರಿಡಲಾಗಿದೆ. ಸಿಂಹಳ ಭಾಷೆಯಲ್ಲಿ ಇದರ ಅರ್ಥ ಕ್ರೋಧ. ಇದು ತೀವ್ರ ಸ್ವರೂಪದಲ್ಲಿರಲಿದ್ದು ಇದು ಋತುಮಾನದ ಮೊದಲ ಚಂಡಮಾರುತವಾಗಿದೆ.

ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ ಚಂಡಮಾರುತ ಉಂಟಾಗಲಿದೆ. ನಂತರ ಇದು ಮೇ 10ರವರೆಗೆ ಈಶಾನ್ಯ ಭಾಗಕ್ಕೆ ಮುಂದುವರಿದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗಳಿಗೆ ಅಪ್ಪಳಿಸಲಿದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT