‘ಮದರಸಾಗೆ ಭೇಟಿ ನೀಡಿದ್ದಾಗ ಭಾಗವತ್ ಅವರು ಅಲ್ಲಿನ ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳು ಕುರ್ಆನ್ ಪಠಿಸುವುದನ್ನು ಕೇಳಿದರು. ಮಕ್ಕಳು ಇದೇ ಸಂದರ್ಭದಲ್ಲಿ ‘ವಂದೇ ಮಾತರಂ’, ‘ಜೈ ಹಿಂದ್’ ಘೋಷಣೆಗಳನ್ನೂ ಮೊಳಗಿಸಿದ್ದಾರೆ. ಮಕ್ಕಳು ಈ ದೇಶದ ಬಗ್ಗೆ ಹೆಚ್ಚು ತಿಳಿಯಬೇಕು. ತಾವು ಪಾಲಿಸುವ ಧರ್ಮವು ಯಾವುದೇ ಇರಲಿ. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು ಎಂದು ಭಾಗವತ್ ಅವರು ಮಕ್ಕಳಿಗೆ ಹೇಳಿದ್ದಾರೆ’ ಎಂದು ಇಂದ್ರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದರು.