ಶುಕ್ರವಾರ ಸುದ್ದಿಗೋಷ್ಠಿಯಲ್ಲಿ,ಮಾಧ್ಯಮ ಪ್ರತಿನಿಧಿಗಳು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ ಎಂಬ ಪ್ರಶ್ನೆಯನ್ನು ಪದೇ ಪದೇ ರಾಹುಲ್ ಗಾಂಧಿಯವರ ಮುಂದಿರಿಸಿದಾಗ ‘ನನ್ನ ನಿರ್ಧಾರ ಸ್ಪಷ್ಟ. ನಾನು ಪಕ್ಷದ ಅಧ್ಯಕ್ಷನಾಗುತ್ತೀನೊ ಅಥವಾ ಇಲ್ಲವೊ ಎನ್ನುವುದು ಪಕ್ಷದ ಚುನಾವಣೆ ವೇಳೆ ಸ್ಪಷ್ಟವಾಗಲಿದೆ. ದಯವಿಟ್ಟು ಆ ದಿನಕ್ಕಾಗಿ ಕಾಯಿರಿ’ ಎಂದು ಪ್ರತಿಕ್ರಿಯಿಸಿದರು.