‘ನವರಾತ್ರಿ ದಿನ ಮನೆಯಲ್ಲಿ ಟಿವಿಯಲ್ಲಿ ಶಿರಡಿ ಸಾಯಿವಾಲೆ ಧಾರಾವಾಹಿಯನ್ನು ನೋಡುವಾಗ ನಾನು ಸಾಯಿಬಾಬಾ ಅವರ ಪವಾಡಗಳನ್ನೂ ನೋಡಿದೆ. ಸಾಯಿಬಾಬಾ ಅವರು, ಪವಿತ್ರ ಬೂದಿಯಿಂದ ದೆವ್ವ ಹಿಡಿದರಿಗೆ ದೆವ್ವ ಬಿಡಿಸುತ್ತಿದ್ದರು. ನಾನು ಮನದಲ್ಲಿ ಸಾಯಿಬಾಬಾ ಹಾಗೂ ಅವರ ಬೂದಿಯನ್ನು ಸ್ಮರಿಸಿ ಮಲಗಿದೆ. ಮರುದಿನ ನನ್ನ ಕಚೇರಿಗೆ ಹೋದಾಗ ನಾನು ಟಿವಿಯಲ್ಲಿ ನೋಡಿದ ಸಾಯಿಬಾಬಾರ ಪವಿತ್ರ ಬೂದಿ ನನ್ನ ಟೇಬಲ್ ಮೇಲೆ ಇತ್ತು’ ಎಂದು ತೇಜ್ ತಿಳಿಸಿದ್ದಾರೆ.