ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ‘ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಿತೀಶ್ ಕುಮಾರ್ಗೆ ಅಸೂಯೆ ಇದೆ. ಅವರಿಗೆ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇದೆ. ಬಿಜೆಪಿಯಿಂದ ದೂರವಾಗಲು ಈ ಆಸೆಯೇ ಕಾರಣ. ಮೈತ್ರಿಯನ್ನು ಊರುಗೋಲಾಗಿ ಬಳಸದೆ ಸ್ವಂತ ಬಲದಿಂದ ರಾಜ್ಯ ಚುನಾವಣೆಯಲ್ಲಿ ಗೆಲ್ಲಲು ನಿತೀಶ್ ಯತ್ನಿಸಲಿ’ ಎಂದು ಹೇಳಿದ್ದಾರೆ.