ಮಾರ್ಚ್ 21ರಂದು ಭಾದು ಶೇಖ್ ಅವರ ಹತ್ಯೆಯ ಬಳಿಕ ರೊಚ್ಚಿಗೆದ್ದ ಅವರ ಬೆಂಬಲಿಗರ ಗುಂಪು, ತಮ್ಮ ಎದುರಾಳಿ ಗುಂಪಿನವರ ಮನೆಗಳಿಗೆ ತೆರಳಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಕುಟುಂಬ ಸದಸ್ಯರನ್ನು ಹತ್ಯೆ ಮಾಡುವ ಕೆಲಸವನ್ನು ಯೋಜಿತ ಮತ್ತು ಸಂಘಟಿತವಾಗಿ ಮಾಡಿದ್ದರು. ಇದರಿಂದಾಗಿ ಎದುರಾಳಿ ಗುಂಪಿನ 9 ಮಂದಿ ಬಲಿಯಾಗಿದ್ದರು ಎಂದು ಹೇಳಿದೆ.